ಬೆಳ್ಳಿರಥದಲಿ ಸೂರ್ಯ ತಂದ ಕಿರಣ ..
ದೂರದ ಬಿಹಾರದಲ್ಲಿ ಪೊಲೀಸ್ ಸಮ್ಮೇಳನಕ್ಕೆಂದು ಬಂದಿದ್ದ ಅಸಿಸ್ಟೆಂಟ್ ಪೊಲೀಸ್ ಇನ್ಸ್ಪೆಕ್ಟರ್ ಚಳಿಯ ಇರಿತಕ್ಕೆ ಬಲಿಯಾಗಿದ್ದಾನೆ. ರೈಲ್ವೇ ಸ್ಟೇಷನ್ನಲ್ಲಿ ಎದೆಗೂಡಿಗೆ ನುಗ್ಗಿದ ಚಳಿಯಾಂದಿಗೆ ಉಸಿರು ಜೋಡಿಸಿದ್ದಾನೆ. ಆ ಸುದ್ದಿಯನ್ನು ಹೊತ್ತ ಪತ್ರಿಕೆ ಬೆಳಿಗ್ಗೆ ಕಿಟಕಿ ಮೂಲಕ ಟಪ್ಪಾರನೇ ಮನೆಯಾಳಗೆ ಬಿದ್ದು ಎಷ್ಟು ಹೊತ್ತಾದರೂ ಬೆಂಗಳೂರಿನಲ್ಲಿ ಸೂರ್ಯ ರಶ್ಮಿ ಕಾಣಿಸಲಿಲ್ಲ. ಹಾಳು ಮೋಡ ಎಂದು ಗೊಣಗಿಕೊಂಡು ಆಫೀಸಿಗೆ ಬರುವಾಗ ಆಕಾಶದ ತುಂಬ ಇರುವ ಮೋಡಗಳ ನಡುವೆ ನುಸುಳಿ ನುಸುಳಿಕೊಂಡು ಬೆಳ್ಳಿರಥದಲಿ ಬರುತ್ತಿದ್ದ...ಚಂದ್ರ....ಅಲ್ಲಲ್ಲ..ಸೂರ್ಯ. ಬೆಳ್ಳಿ ಸೂರ್ಯ. ನೀವು ನೀಟಾಗಿ ನೋಡಬಹುದಾದ ಕುಕ್ಕುವ ಕಿರಣಗಳಿಲ್ಲದ ಬೆಳ್ಳಿ ಸೂರ್ಯ. ತಂಪಾಗಿ !!
ಕನಿಷ್ಠ ಉಷ್ಣಾಂಶದ ಪಟ್ಟದಿಂದ ಮಂಡ್ಯ ಕೆಳಗಿಳಿದಿಲ್ಲ. ಇವತ್ತಿನ ರೀಡಿಂಗ್ 14.7 ಡಿಗ್ರಿ ಸೆಲ್ಷಿಯಸ್. ಬೆಂಗಳೂರಿಗೆಂದು ಕಳಿಸಿಕೊಟ್ಟ ಭವಿಷ್ಯದ ಪ್ರಕಾರ ಉಷ್ಣಾಂಶ 16 ಡಿಗ್ರಿಯ ಮೆಟ್ಟಿಲಿಳಿಯುವುದಿಲ್ಲ . ಗುರುವಾರವೂ ಮೋಡಗಳ ಚಿನ್ನಾಟ. ಶೀತಗಾಳಿಯ ನೆಲಮಟ್ಟದ ಹರಿದಾಟ. ಈ ನಡುವೆ ಅನಿರೀಕ್ಷಿತ ಹವೆ ಬದಲಾವಣೆಯಿಂದ ಹಲವರ ಆರೋಗ್ಯ ಹದ ತಪ್ಪಿದೆ. ಪರಿಣಾಮ ವೈದ್ಯರ ಮನೆಗಳ ಮುಂದೆ ರೋಗಿಗಳ ಸಾಲು.
ಇಂಡೋನೇಷಿಯಾದಲ್ಲಿ ಭೂಕಂಪ : ದೇಶದ ಪಶ್ಚಿಮ ದ್ವೀಪ ಸುಮಾತ್ರದಲ್ಲಿ 6.3 (ರಿಕ್ಟರ್ ಮಾಪಕ) ಪ್ರಮಾಣದ ಭೂಕಂಪ ಸಂಭವಿಸಿದೆಯೆಂದು ಯುಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯಾವುದೇ ಜೀವಹಾನಿಯಾಗಿರುವ ವರದಿಗಳು ಲಭ್ಯವಾಗಿಲ್ಲ .
ಮುಖಪುಟ / ಹವಾ ಹವಾ |