ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿರಿಯ ಕಾಂಗ್ರೆಸ್ ಮುಖಂಡ ಜಿತೇಂದ್ರ ಪ್ರಸಾದ ನಿಧನ
ನವದೆಹಲಿ : ಹಿರಿಯ ಕಾಂಗ್ರೆಸ್ ಧುರೀಣ ಹಾಗೂ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಪದ ಚುನಾವಣೆಯಲ್ಲಿ ಸೋನಿಯಾರಿಗೆ ಸವಾಲೆಸೆದಿದ್ದ ಜಿತೇಂದ್ರ ಪ್ರಸಾದ ಅವರು, ಇಲ್ಲಿನ ಅಪೊಲೊ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದ ನಂತರ ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು .ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಮೃತರು ಅಗಲಿದ್ದಾರೆ.
ತೀವ್ರ ಮೆದುಳಿನ ರಕ್ತಸ್ರಾವದ ಆಘಾತಕ್ಕೊಳಗಾದ ಅವರನ್ನು ಜನವರಿ 8 ರಂದು ಆರ್ಎಂಎಲ್ ಆಸ್ಪತ್ರೆಗೆ ಸೇರಿಸಲಾಗಿತ್ತು . ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪ್ರಜ್ಞಾವಸ್ಥೆಯಲ್ಲಿದ್ದ ಅವರನ್ನು ಅಪೊಲೊ ಆಸ್ಪತ್ರೆಗೆ ಕಳುಹಿಸಲಾಗಿತ್ತು . ಜಿತೇಂದ್ರ ಪ್ರಸಾದ ಅವರಿಗೆ ವೈದ್ಯರು ನೀಡಿದ ಎಲ್ಲಾ ಚಿಕಿತ್ಸೆಗಳು ವಿಫಲವಾಗಿದ್ದು , ಮಂಗಳವಾರ ಬೆಳಿಗ್ಗೆ ಅವರು ನಿಧನರಾದರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
(ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, January 24, 2001, 5:30 [IST]