ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೈಸ್ಕೂಲ್ ಹುಡುಗನಿಂದ ಸಹಪಾಠಿಯ ಕೊಲೆ : ಶಿಕಾರಿಪುರ ಉದ್ವಿಗ್ನ
ಶಿಕಾರಿಪುರ : ಹೈಸ್ಕೂಲ್ ವಿದ್ಯಾರ್ಥಿಯಾಬ್ಬ ತನ್ನ ಸಹಪಾಠಿಯನ್ನೇ ಕೊಲೆ ಮಾಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಶಿಕಾರಿಪುರ ಪಟ್ಟಣದಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.
ಹತ್ತನೇ ತರಗತಿಯಲ್ಲಿ ಓದುತ್ತಿರುವ ಅಬ್ದುಲ್ ಲತೀಫ್ ಮತ್ತು ಆತನ ಸಹಪಾಠಿ ಅಲೋಕ್ ನಡುವೆ ಕುಳಿತುಕೊಳ್ಳುವ ಜಾಗದ ವಿಷಯವಾಗಿ ಉಂಟಾದ ಜಗಳ, ಹೊಡೆದಾಟಕ್ಕೆ ತಿರುಗಿತು. ಲತೀಫ್ ಕೈಯಿಂದ ಪೆಟ್ಟು ತಿಂದು ಮನೆಗೆ ತೆರಳಿದ ಅಲೋಕ್ ಮನೆಯಿಂದ ಚಾಕು ತಂದು, ಆಟವಾಡುತ್ತಿದ್ದ ಲತೀಫ್ಗೆ ಇರಿದಿರುವುದಾಗಿ ವರದಿಯಾಗಿದೆ. ತೀವ್ರವಾಗಿ ಗಾಯಗೊಂಡ ಲತೀಫ್ನನ್ನು ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ .
ಕೊಲೆಯ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆಯೇ ಎರಡು ಕೋಮುಗಳ ನಡುವೆ ಗಲಾಟೆ ಶುರುವಾಗಿ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಯಿತು. ಪರಿಸ್ಥಿತಿಯನ್ನು ಹತೋಟಿಗೆ ತರುವ ದೃಷ್ಟಿಯಿಂದ ಮತ್ತು ಮಂಗಳವಾರದಂದು ಶಿವಮೊಗ್ಗದಲ್ಲಿ ಮಾರಿ ಹಬ್ಬ ಇರುವುದರಿಂದ ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
(ಇನ್ಫೋ ವಾರ್ತೆ)
Story first published: Wednesday, January 24, 2001, 5:30 [IST]