ಆತ್ಮ-ಹ-ತ್ಯೆ ಮಾಡಿ-ಕೊಂ-ಡ ರೈತ-ನ ಕುಟುಂ-ಬ-ಕ್ಕೆ ಸರ್ಕಾ-ರ-ದಿಂ-ದ ಲಕ್ಷ ರು. ನೀಡಿ-ಕೆ
ಹುಬ್ಬ-ಳ್ಳಿ : ಆಲೂಗ-ಡ್ಡೆ ಬೆಲೆ ಕುಸಿ-ತ-ದಿಂ-ದ ಕಂಗಾ-ಲಾ-ಗಿ- ಆತ್ಮ-ಹ-ತ್ಯೆ- ಮಾಡಿ-ಕೊಂ-ಡಿ-ರು-ವ ನವ-ಲೂ-ರಿ-ನ ರೈತ-ನ ಕುಟುಂ-ಬ-ಕ್ಕೆ ಭಾರೀ ಮತ್ತು ಮಧ್ಯಮ ನೀರಾ-ವ-ರಿ ಸಚಿವ ಎಚ್.ಕೆ. ಪಾಟೀಲ್, ಮಂಗಳವಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದರು.
ಕುಟುಂಬದ ಒಬ್ಬ ವ್ಯಕ್ತಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಭರವಸೆ ನೀಡಿದರು. ಬೆಲೆ ಕುಸಿತದಿಂದಾಗಿ ಹೃದಯಾಘಾತದಿಂದ ನಿಧನರಾರಾದ ಇನ್ನೊಬ್ಬ ರೈತನ ಮನೆಗೂ ಸಚಿವರು ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತ , ಧಾರವಾಡದಲ್ಲಿ ಸರಕಾರವು ಆಲೂಗಡ್ಡೆ ಖರೀದಿಯನ್ನು ಈಗಾಗಲೇ ಮುಗಿಸಿದೆ. ರೈತರಿಗೆ ಬೇರರ್ ಚೆಕ್ ಮೂಲಕ ಹಣ ಒದಗಿಸಲಾಗುವುದು. ಜೋಳ ಖರೀದಿಗೆ ಸದ್ಯದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಆಲ-ಮ-ಟ್ಟಿ - ಪ್ರಧಾ-ನಿ ಹೇಳು-ವು-ದೇ-ನು? : ನರಗುಂದದಲ್ಲಿ ಭಾರತೀಯ ಆಹಾರ ನಿಗಮದಲ್ಲಿ ಆಹಾರ ಜೋಳ ಖರೀದಿ ಸಂದರ್ಭದಲ್ಲಿ ನಡೆದ ಅವ್ಯವಹಾರದ ತನಿಖೆಗೆ ಸಿಓಡಿ ತನಿಖೆ ನಡೆಸುವುದಕ್ಕೆ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಒಪ್ಪಿರುವುದಾಗಿ ಹೇಳಿದ ಸಚಿವರು, ಆಂಧ್ರಪ್ರದೇಶ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಮುಂದುವರೆಸುತ್ತಿರುವ ಬಗ್ಗೆ ಕೇಂದ್ರದಿಂದ ಸೂಚನೆಗಾಗಿ ರಾಜ್ಯ ಕಾಯುತ್ತಿದೆ. ಅಲ್ಲಿಯವರೆಗೆ ಆಂಧ್ರ ಪ್ರದೇಶ ಹೆಚ್ಚು ನೀರನ್ನು ಬಳಸಿದರೂ ಪರವಾಗಿಲ್ಲ ಎಂದರು. ಆದರೆ ಶಾಶ್ವತವಾಗಿ ರಾಜ್ಯದ ನೀರಿನ ಮೇಲೆ ಆಂಧ್ರ ಪ್ರದೇಶ ಅಧಿಕಾರ ಸ್ಥಾಪಿಸುವಂತಿಲ್ಲ . ಸುಪ್ರೀಂ ಕೋರ್ಟ್ ಕೂಡ ಕೃಷ್ಣಾ ನದಿ ನೀರಿಗಾಗಿ ಯಾವುದೇ ಶಾಶ್ವತ ವ್ಯವಸ್ಥೆಯನ್ನು ಆಂಧ್ರ ಪ್ರದೇಶ ಮಾಡಿಕೊಳ್ಳುವಂತಿಲ್ಲ ಎಂದೇ ಆದೇಶ ನೀಡಿದೆ ಎಂದು ಸಚಿವರು ಹೇಳಿದರು.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...