ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಕ್ತ ವಧು, ಯೋಗ್ಯ ವರನಿಗಾಗಿ ಹುಡುಕುತ್ತೀದ್ದೀರಾ?ಇಲ್ಲಿ ಕ್ಲಿಕ್ಕಿಸಿ

By Staff
|
Google Oneindia Kannada News

ಬೆಂಗಳೂರು : ಗೃಹಸ್ಥಾಶ್ರಮ ಸೇರಬಯಸುವವರು, ಮರುಮದುವೆ ಆಗ ಬಯಸುವವರು ಅಂದರೆ ವಿಧುರರು, ವಿಧವೆಯರು, ವಿಚ್ಛೇದಿತರು ಒಂದೇ ವೇದಿಕೆಯಲ್ಲಿ ಸೇರಿ ತಮಗೊಪ್ಪುವ ಬಾಳ ಸಂಗಾತಿಯನ್ನು ಆರಿಸಿಕೊಳ್ಳುವುದಕ್ಕೆ ಇಲ್ಲೊಂದು ಸದವಕಾಶ. ಆದರೆ ಒಂದು ಕಂಡೀಷನ್‌. ನೀವು ತ್ರಿಮತಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿರಬೇಕು.

ವಧೂವರಾನ್ವೇಷಣೆಯನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿರುವ ಕತ್ರಿಗುಪ್ಪೆ ಬನಶಂಕರಿ ಪ್ರದೇಶದ ಬಾಂಧವ್ಯ ಸಂಸ್ಥೆ ಹೊಸ ಸಹಸ್ರಮಾನದ ಬೃಹತ್‌ ವಧೂ-ವರ ಮುಖಾಮುಖಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮುಖಾಮುಖಿಯಲ್ಲಿ ವಧೂವರರು ಹಾಗೂ ಪೋಷಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಬೆಂಗಳೂರಿನ ಚಾಮರಾಜಪೇಟೆ 5 ನೇ ಮುಖ್ಯರಸ್ತೆಯಲ್ಲಿರುವ ಶ್ರೀರಾಮಮಂದಿರದಲ್ಲಿ ಜನವರಿ 28 ರಂದು (ಶನಿವಾರ) ಮುಖಾಮುಖಿ ಕಾರ್ಯಕ್ರಮ ಏರ್ಪಾಟಾಗಿದೆ. ಅಂಗವಿಕಲರಿಗೆ ವಿಶೇಷ ಮುಖಾಮುಖಿ ಅದೇ ದಿವಸ ಮಧ್ಯಾಹ್ನ 3.30 ಕ್ಕೆ ನಡೆಯುತ್ತದೆ.

ಭಾಗವಹಿಸಲು ಇಷ್ಟಪಡುವವರು ವಿವರಗಳಿಗೆ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು.

ಬಾಂಧವ್ಯ ವಧು - ವರಾನ್ವೇಷಣಾ ಕೇಂದ್ರ, ಕೇರಾಫ್‌ ಮಂದಾರ ಟ್ರಾವಲ್ಸ್‌, ರಶ್ಮಿ ಕಲ್ಯಾಣ ಮಂಟಪದ ಹತ್ತಿರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಬನಶಂಕರಿ ಮೂರನೇ ಹಂತ , ಬೆಂಗಳೂರು 560085

ದೂರವಾಣಿ 080-6791564, 6692790

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X