ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ: ಜ.20ರಂದು ರಾಜ್ಯ ಮಟ್ಟದ ಜಾನಪದಗೀತ ಗಾಯನ ಸ್ಪರ್ಧೆ

By Staff
|
Google Oneindia Kannada News

ಮಂಡ್ಯ : ಇಲ್ಲಿನ ಕೀಲಾರ ಗ್ರಾಮದ ಕ್ಷೀರ ಸಾಗರ ಮಿತ್ರ ಕೂಟ ಜನವರಿ 20ರಂದು ರಾಜ್ಯ ಮಟ್ಟದ ಜನಪದ ಗೀತೆಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಖಾಸಗಿ ಸಂಘ ಸಂಸ್ಥೆಗಳ ಸದಸ್ಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಎರಡೂ ವಿಭಾಗಗಳಲ್ಲಿ ಐದೈದು ವೈಯಕ್ತಿಕ ಬಹುಮಾನಗಳನ್ನು ನೀಡಲಾಗವುದು. ಕೆ. ವಿ. ಶಂಕರಗೌಡ ಮತ್ತು ಪಟೇಲ್‌ ಕೆ. ಸಿ. ಕೆಂಪೇಗೌಡರ ಸ್ಮರಣಾರ್ಥ ನಡೆಯುವ ಈ ಸ್ಪರ್ಧೆಯನ್ನು ಗ್ರಾಮದ ವೀರಪ್ಪ ವೀರಮ್ಮ ಸ್ಮಾರಕ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧಿಗಳಿಗೆ 15 ರೂಪಾಯಿ ಪ್ರವೇಶ ಶುಲ್ಕವಿರುತ್ತದೆ. ಆಸಕ್ತರು, ಅಧ್ಯಕ್ಷರು, ಕ್ಷೀರ ಸಾಗರ ಮಿತ್ರ ಕೂಟ, ಕಿಲಾರ, ಮಂಡ್ಯ- 571 450 ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಹುದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X