ಶಬರಿಮಲೆ : ಲಕ್ಷಾಂತರ ಭಕ್ತರಿಂದ ಮಕರ ಜ್ಯೋತಿ ದರ್ಶನ
ಶಬರಿಮಲೆ : ಮಕರ ಸಂಕ್ರಮಣದ ಪವಿತ್ರದಿನವಾದ ಭಾನುವಾರ ಕುಂಭಮೇಳದಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪವಿತ್ರ ಗಂಗಾಸ್ನಾನ ಮಾಡಿದರೆ, ಇತ್ತ ದಕ್ಷಿಣದ ಪವಿತ್ರ ಕ್ಷೇತ್ರ ಶಬರಿಮಲೆಯ ಅಯ್ಯಪ್ಪನ್ನ ಸನ್ನಿಧಿಯಲ್ಲಿ ಲಕ್ಷಾಂತರ ಭಕ್ತಾದಿಗಳು ಮಕರ ಜ್ಯೋತಿಯ ದರ್ಶನ ಮಾಡಿದರು.
ಪೊನ್ನಂಬಲಮೇಡು ಬೆಟ್ಟಗಳ ಮಧ್ಯೆ ದಿಗಂತದಲ್ಲಿ ಸಂಜೆ ಸೂರ್ಯಾಸ್ತವಾದ ಬಳಿಕ ಪ್ರಕಟಗೊಂಡ ಪವಿತ್ರ ಜ್ಯೋತಿಯನ್ನು ದರ್ಶಿಸಿದ, ಭಕ್ತಾದಿಗಳು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಕೂಗುತ್ತಾ, ಭಕ್ತಿ ಪರವಶರಾಗಿ ಎರಡೂ ಕೈಗಳನ್ನು ಮೇಲೆತ್ತಿ, ಕೈ ಮುಗಿದು ನರ್ತಿಸಿದರು. ಜ್ಯೋತಿ ದರ್ಶನದಿಂದ ತಮ್ಮ ಬಾಳು ಕೃತಾರ್ಥವಾಯಿತೆಂಬ ಭಾವ ಎಲ್ಲರ ಮುಖದಲ್ಲೂ ಪ್ರಕಟಗೊಂಡಿತ್ತು.
ನವೆಂಬರ್ ತಿಂಗಳಿನಿಂದಲೇ ಸ್ವಾಮಿಯ ದರ್ಶನಕ್ಕೆ ತಂಡೋಪತಂಡವಾಗಿ ಜನರು ಬರುತ್ತಿದ್ದರಾದರೂ, ಮಕರ ಸಂಕ್ರಮಣದ ದಿನವಾದ ಭಾನುವಾರ ಶಬರಿಗಿರಿಯಲ್ಲಿ ಕಾಲಿಡಲೂ ಸ್ಥಳವಿಲ್ಲದಷ್ಟು ಭಕ್ತರು ನೆರೆದಿದ್ದರು. ದೇವಸ್ಥಾನದ ಅಧಿಕಾರಿಗಳ ರೀತ್ಯ ಭಾನುವಾರ 3 ಲಕ್ಷಕ್ಕೂ ಹೆಚ್ಚು ಜನರು ಗಿರಿಗೆ ಆಗಮಿಸಿದ್ದರು.
ಮಕರ ಸಂಕ್ರಮಣದ ದಿನ ಪವಿತ್ರ ಪಂಪಾ ನದಿಯಲ್ಲಿ ಮಿಂದು ಭಕ್ತರು ಜ್ಯೋತಿಯ ದರ್ಶನ ಮಾಡಿದರು. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರನ್ನು ನಿಯಂತ್ರಿಸಲು, ತಿರುವಾಂಕೂರು ದೇವಸ್ವಂ ಮಂಡಳಿ, ದೇವಸ್ಥಾನದ ಸಮಿತಿ, ಪೊಲೀಸರು ವಿಶೇಷ ಬಿಗಿ ಬಂದೋಬಸ್ತ್ ಮಾಡಿದ್ದರು.
ಕಳೆದ ವರ್ಷ ಜ್ಯೋತಿಯ ದರ್ಶನ ಸಂದರ್ಭದಲ್ಲಿ ಉಂಟಾಗಿದ್ದ ಅಪಘಾತಗಳ ಹಿನ್ನೆಲೆಯಲ್ಲಿ ಈ ಬಾರಿ ಭಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೇ ತಿಂಗಳ 20ರಂದು ಅಯ್ಯಪ್ಪನ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.
ಕುಂಭ ಸ್ನಾನ : ಅಲಹಾಬಾದ್ನ ತ್ರಿವೇಣಿ ಸಂಗಮದಲ್ಲಿ ತ್ರಿಶೂಲ, ಖಡ್ಗ ಹಿಡಿದ ಸಾವಿರಾರು ಸಂತರು, ಸಾಧುಗಳು, ವಿದೇಶೀಯರು, ಲಕ್ಷಾಂತರ ಮಂದಿ ಭಕ್ತಾಧಿಗಳು ಪವಿತ್ರ ಸ್ನಾನ ಮಾಡಿದರು. 12 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಿ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications