ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಹರಿವಿನ ಕಡೆಗೆ ಚಲಿಸುವುದು ಎಷ್ಟು ಮುಖ್ಯ ಅನ್ನುವುದು ನಿಮಗೆ ಇಂದು ಅರ್ಥವಾಗಲಿದೆ. ಇತರರೊಂದಿಗೆ ರಾಜಿ ಮಾಡಿಕೊಳ್ಳುವುದು ಅಂದರೆ ನಿಮ್ಮ ಸೋಲೇನೂ ಅಲ್ಲ.
ಮಿಥುನ : ನೀವು ವೃಥಾ ಕೊರಗುತ್ತೀರಿ. ಹೊಳೆಯಲ್ಲಿ ಹರಿದ ನೀರಿನ ಬಗ್ಗೆ ಚಿಂತೆ ಬೇಡ. ಹೊಸ ಹುರುಪಿನಿಂದ ಕಾರ್ಯೋನ್ಮುಖರಾಗಿ, ದಿನವನ್ನು ಖುಷಿಯಾಗಿಸಿಕೊಳ್ಳಿ.
ಕಟಕ : ಅಪ್ಪ ಅಮ್ಮನ ಮಾತನ್ನು ಕೇಳುವ ಜಾಣರು ನೀವು ಹೌದು. ಆದರೆ, ಅಪ್ಪ ನೆಟ್ಟಾಲಕ್ಕೆ ಜೋತು ಬೀಳುವುದು ಜಾಣತನವೇನೂ ಅಲ್ಲ . ಬಹಳ ದಿನಗಳ ಇಬ್ಬಂದಿತನವನ್ನು ಹರಿದುಕೊಂಡು ನಿಮ್ಮ ಅಸ್ತಿತ್ವವನ್ನು ಪ್ರಕಟಗೊಳಿಸಲು ಈ ದಿನ ಪ್ರಶಸ್ತವಾಗಿದೆ.
ಸಿಂಹ : ಕುಟುಂಬದ ವೈದ್ಯರನ್ನು ಭೇಟಿ ಮಾಡುತ್ತೀರಿ. ದಣಿದ ದೇಹಕ್ಕೆ ಇದು ಅನಿವಾರ್ಯ ಕರ್ಮವಾದ್ದರಿಂದ ಬೇಜಾರು ಪಟ್ಟುಕೊಳ್ಳುವಂತದ್ದೇನೂ ಇಲ್ಲ . ಆದರೆ, ಜೇಬು ಹಗುರಾಗುತ್ತದೆ. ಅದು ಅನಿವಾರ್ಯ.
ಕನ್ಯಾ : ಇತರರು ನಿಮ್ಮ ಬಗ್ಗೆ ಏನು ಮಾತಾಡಿಕೊಳ್ಳುತ್ತಾರೆ ಅನ್ನುವ ಬಗ್ಗೆ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಇಂದು ಹಣಕಾಸಿನ ಹಿನ್ನಡೆಯ ದಿನ. ಹುಷಾರಿಗಿರಿ.
ತುಲಾ : ಗುರುದರ್ಶನದ ಲಾಭ ಇಂದು ನಿಮ್ಮದಾಗುತ್ತದೆ. ಆ ಧನ್ಯತೆಯಲ್ಲಿ ಹೊಸ ಐಡಿಯಾಗಳು ಸಿಕ್ಕರೂ ಸಿಗಬಹುದು.
ವೃಶ್ಚಿಕ : ಅಬ್ಬಾ ! ದಿನ ಎಷ್ಟು ದೀರ್ಘ ಅನ್ನಿಸುವುದು ಖಂಡಿತಾ. ಗೆಳೆಯರೊಡನೆ ಮನಸ್ತಾಪ ಬೇಡ. ಅವರು ಮಾತಿನಲ್ಲೇ ಹೊಡೆಯುತ್ತಾರೆ. ದೇಹದ ಪೆಟ್ಟು ಬೇಗ ಮಾಯುತ್ತದಾದರೂ, ಮನಸ್ಸಿನ ಮೇಲಾಗುವ ಪೆಟ್ಟು ಇಷ್ಟಿಷ್ಟೇ ಕೊಲ್ಲುತ್ತದೆ ಎನ್ನುವ ಇತರರ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ
ಧನಸ್ಸು : ಅತಿಥಿಗಳ ಆಗಮನ. ಜೊತೆಗೆ ಅಭ್ಯಾಗತರೂ ಆಗಮಿಸಿದರೆ ಮುಖ ಸಣ್ಣದು ಮಾಡಿಕೊಳ್ಳಬೇಡಿ. ಅವರಿಂದ ನಿಮಗೆ ಲಾಭವಾಗಲಿದೆ.
ಮಕರ : ತುಂತುರಿಗೆ ಮೈಯ್ಯಾಡ್ಡುತ್ತಾ ಖುಷಿಯಾಗಿ ಬೀದಿ ಸುತ್ತುವ ನಿಮ್ಮಿಷ್ಟದ ದಿನ. ಇಷ್ಟ ಪಾತ್ರರು ಜೊತೆಗಿರುವುದರಿಂದ ನಿಮ್ಮ ಪಾಲಿಗೆ ಇಮ್ಮಡಿ ಖುಷಿ.
ಕುಂಭ : ಅವನಿಂತವ ಇವನಿಂತವ ಎಂದ್ಹೇಳುವ ಮೊದಲರಿಯುವ ನಾನೆಂತವ ಎಂದು, ನನ್ನೊಳಗಿರಬಹುದವ ಎಂದು- ಅನ್ನುವ ಮಾತು ನಿಮಗೆ ಹೆಚ್ಚು ಸೂಕ್ತವಾದೀತು. ನೀವು ಕಮಲದಂತೆ ನಳನಳಿಸುವುದು ಯಾವಾಗ ಎಂದು ಯಾರಾದರೂ ಕೇಳಿದರೆ ಅದರಲ್ಲಿ ಕೆಸರು ಹುಡುಕಬೇಡಿ.
ಮೀನ : ಮಳೆ ಬಂದ ಮೇಲಿನ ನಿರುಮ್ಮಳ ಮೌನ ನಿಮ್ಮ ಪಾಲಿಗಿಲ್ಲ . ಉಳಿದಿರುವುದು ಕಿರಿಕಿರಿ, ಕೊಚ್ಚೆ . ಇದರಲ್ಲಿ ನಿಮ್ಮ ತಪ್ಪಿನ ಪಾಲು ಹೆಚ್ಚಿರುವುದರಿಂದ ಇತರರನ್ನು ದೂರುವುದರಲ್ಲಿ ಅರ್ಥವಿಲ್ಲ