Get Updates
Get notified of breaking news, exclusive insights, and must-see stories!

ಸಂಕ್ರಾಂತಿ ದಿನದಿಂದ ನಗರದಲ್ಲಿ ಶ್ರೀಲಂಕಾ-ಭಾರತ ನಾಟಕಕಾರರ ಕಮ್ಮಟ

ಬೆಂಗಳೂರು : ಎರಡು ವಾರಗಳ ಅವಧಿಯ ಶ್ರೀಲಂಕಾ ಹಾಗೂ ಭಾರತದ ನಾಟಕಕಾರರ 14 ದಿನಗಳ ಕಾರ್ಯಾಗಾರ ಜನವರಿ 14 ರಿಂದ ನಗರದಲ್ಲಿ ಆರಂಭವಾಗಲಿದೆ.

ರಂಗ ಕಲಾವಿದರ ಪ್ರಶಿಕ್ಷಣ ಶಾಲೆ, ಲಂಡನ್‌ನ ರಾಯಲ್‌ ಕೋರ್ಟ್‌ ಥಿಯೇಟರ್‌, ಬ್ರಿಟಿಷ್‌ ಕೌನ್ಸಿಲ್‌ ಮತ್ತು ಇಕ್ಯುಮೆನ್ಶಿಯಲ್‌ ಕ್ರಿಶ್ಚಿಯನ್‌ ಸೆಂಟರ್‌ ಈ ಕಾರ್ಯಾಗಾರವನ್ನು ಆಯೋಜಿಸಿದ್ದು, 12 ಮಂದಿ ಭಾರತೀಯ ನಾಟಕಕಾರರು ಮತ್ತು ಇಬ್ಬರು ಶ್ರೀಲಂಕಾದ ನಾಟಕಕಾರರು ಭಾಗವಹಿಸಲಿದ್ದಾರೆ ಎಂದು ರಂಗ ಕಲಾವಿದರ ಪ್ರಶಿಕ್ಷಣ ಶಾಲೆಯ ಜಗದೀಶ್‌ ರಾಜಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜಗದೀಶ್‌ ಅವರು ಕಾರ್ಯಾಗಾರ ಮುಗಿದ ನಂತರ ತಮ್ಮ ಗುಂಪು, ಹೊಸ ನಾಟಕಗಳನ್ನು ಪರಿಚಯಿಸುವ ನಾಟಕೋತ್ಸವವನ್ನು ಈ ವರ್ಷದ ಕೊನೆ ಭಾಗದಲ್ಲಿ ಹಮ್ಮಿಕೊಳ್ಳಲಿದೆ. ಅಲ್ಲದೆ ಇತರ ದೇಶದ ಇತರ ನಗರಗಳಲ್ಲಿಯೂ ನಾಟಕೋತ್ಸವಗಳನ್ನು ಆಯೋಜಿಸುವ ಯೋಚನೆಯಿದೆ ಎಂದರು.

ಜನವರಿ 28ಕ್ಕೆ ಮುಕ್ತಾಯವಾಗಲಿರುವ ಕಾರ್ಯಾಗಾರದ ಮೊದಲ ಗೋಷ್ಠಿಯಲ್ಲಿ ನಾಟಕ ರಚನೆಯ ಕೌಶಲ್ಯದ ಬಗ್ಗೆ ವಿವರಿಸಲಾಗುವುದು. ನಾಟಕ ರಚನೆಯ ಸ್ವರೂಪ, ಸಂಭಾಷಣೆ, ಪಾತ್ರಗಳು, ವಿವರಣೆ, ವೇದಿಕೆಯ ಬಗ್ಗೆ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ತಿಳಿಸಲಾಗುವುದು. ಕಾರ್ಯಾಗಾರದ ಮೊದಲ ಭಾಗದಲ್ಲಿ ನಾಟಕಕಾರರಿಗೆ ಮಾಹಿತಿ ನೀಡಲಾಗುವುದು. ನಂತರ ಶಿಬಿರಾರ್ಥಿಗಳು ಸ್ವತಃ ರಚಿಸುವ ನಾಟಕಗಳ ಕುರಿತು ವಿಶ್ಲೇಷಣೆ ನಡೆಯುತ್ತದೆ. ಕೊನೆಯದಾಗಿ ನಾಟಕಕಾರರ ಬರಹಗಳಿಗೆ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ವಿವರಿಸಲಾಗುವುದು ಎಂದು ಜಗದೀಶ್‌ ಕಾರ್ಯಾಗಾರದ ಸ್ವರೂಪದ ಬಗ್ಗೆ ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+