ಸುಗ್ಗಿಯ ನೆನಪಲ್ಲಿ ಹಳ್ಳಿಗನ ಮೌನ
ಇನ್ನೆರಡೇ ದಿನ ಸೂರ್ಯನ ಪಥ ಬದಲಾವಣೆಗೆ. ಈ ಬದಲಾವಣೆ ಜೀವನದ ಚಲನಶೀಲತೆಯ ಪ್ರತೀಕ. ನಿಂತಲ್ಲಿ ನಿಲಲಾರದ ಬದುಕು ಕೂಡಿಟ್ಟುಕೊಳ್ಳುವ ಅನುಭವ ಅರ್ಥಪೂರ್ಣವಾದುದು. ಆ ಹಿನ್ನೆಲೆಯಲ್ಲಿ ಸಂಕ್ರಾಂತಿ ಬದುಕಿಗೆ ಹೆಚ್ಚು ಹತ್ತಿರ ಎನ್ನಿಸುತ್ತೆ . ಅದೇನೇ ಇರಲಿ, ಹಬ್ಬಕ್ಕೆ ಇನ್ನೆರಡೇ ದಿನ ಉಳಿದಿರುವಂತೆ ಪಟ್ಟಣದ ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಹೆಚ್ಚುತ್ತಿದ್ದರೆ, ಹಳ್ಳಿಗಳಲ್ಲಿ ಹಬ್ಬದ ಸುಳಿವೇ ಇಲ್ಲ . ಅದಕ್ಕೆ ಕಾರಣ, ಪಟ್ಟಣಿಗ- ಹಳ್ಳಿಗರ ನಡುವಣ ಆರ್ಥಿಕ ಅಂತರವೂ ಅಥವಾ ಈ ಬಾರಿ ಸುಗ್ಗಿ ಹಳ್ಳಿಗರಿಗೆ ಕೈ ಕೊಟ್ಟಿರುವುದೂ ಇದ್ದೀತು.
ಅದೇನೇ ಇರಲಿ, ಹವೆ ಮಾತ್ರ ಹಬ್ಬದ ಆಚರಣೆಗೆ ತಕ್ಕದ್ದಾಗಿದೆ. ಕಳೆದ ಕೆಲ ದಿನಗಳಿಂದ ನಡುಗಿಸುತ್ತಿದ್ದ ಚಳಿ ಉಲ್ಲನ್ ರಗ್ಗಳಲ್ಲಿ ಮುದುಡಿ ಮಲಗಿದೆ. ಮಕರ ರಾಶಿಯ ಪ್ರವೇಶಿಸುವ ಖುಷಿಯಲ್ಲಿ ಸೂರ್ಯ ಕೊಂಚ ಬಿಸಿಯಾಗಲು ತೊಡಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸೆಖೆಯ ಅನುಭವವೂ ಆಗುತ್ತಿತ್ತು. ಈ ಅನುಭವ ಆಫೀಸನಲ್ಲಿರುವವರಿಗಿಂತ ರಸ್ತೆಯಲ್ಲಿರುವವರಿಗೇ ಹೆಚ್ಚು ವೇದ್ಯ.
ಹವಾಮಾನ ಇಲಾಖೆಯ ವರದಿಯನ್ನುದ್ಧರಿಸಿ, ಒಂದೇ ಮಾತಿನಲ್ಲಿ ಹೇಳುವದಾದರೆ ಶುಕ್ರವಾರ ಒಣಹವೆಯ ಮಾಮೂಲಿನ ದಿನ. ರಾಜ್ಯಾದ್ಯಂತ ದಿನದ ಉಷ್ಣಾಂಶದಲ್ಲಿ ಗಮನಾರ್ಹ ಏರಿಳಿತಗಳೇನೂ ಇರಲಿಲ್ಲ . ಕರಾವಳಿಯ ಕೆಲವು ಪ್ರದೇಶಗಳಲ್ಲಿ ದಿನದ ತಾಪಮಾನ ನಿನ್ನೆಗಿಂತ ತುಸು ಕೆಳಮುಖವಾಗಿತ್ತು . ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಒಳನಾಡಿನಲ್ಲಿ ಮಾತ್ರ ತಾಪಮಾನ ಸ್ಥಿರವಾಗಿತ್ತು .
ಅಪರೂಪಕ್ಕೆ ದಿನದ ಕನಿಷ್ಠ ತಾಪಮಾನದ ವಿಷಯದಲ್ಲಿ ಬಾಗಲಕೋಟೆ ಸುದ್ದಿಯಲ್ಲಿದೆ. ಅಲ್ಲಿ 14.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು . ಇನ್ನು ಒಣಹವೆಯ ಮುಂಜಾನೆಯನ್ನು ಶನಿವಾರವೂ ಕಾಣುತ್ತೀರೆಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನ ಆಕಾಶ ಶುಭ್ರವಾಗಿರುತ್ತೆ . ನೀವು ನಿರಾತಂಕದಿಂದ ಬೀದಿಗಿಳಿಯಲು ಅಡ್ಡಿಯಿಲ್ಲ .
| ಮುಖಪುಟ / ಹವಾ ಹವಾ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications