ವಾರ್ನ್ ಕಪಿಚೇಷ್ಟೆ ! ಮೆಲ್ಬೋರ್ನ್ ಪೊಲೀಸರಿಂದ ಎಚ್ಚರಿಕೆ
*ಗ್ರೆಗ್ ಬಕಲ್
ಮೆಲ್ಬೋರ್ನ್ : ಫೋನಿನಲ್ಲಿ ಇಂಗ್ಲೆಂಡ್ ಹುಡುಗಿಯಾಬ್ಬಳೊಂದಿಗೆ ಸೆಕ್ಸ್ ಬಗ್ಗೆ ಹರಟಿ, ದೊಡ್ಡ ಸುದ್ದಿ ಮಾಡಿದ್ದ ಆಸ್ಟ್ರೇಲಿಯಾದ ಯಶಸ್ವಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಗುರುವಾರದ ತಮ್ಮ ಪುನರಾಗಮನದಲ್ಲಿ ಮತ್ತೆ ಪೊಲೀಸರ ಎಚ್ಚರಿಕೆ ಮಾತುಗಳನ್ನು ಎದುರಿಸಬೇಕಾಯಿತು.
ವಿಂಡೀಸ್ ವಿರುದ್ಧದ ಒಂದು ದಿನದ ಪಂದ್ಯದಲ್ಲಿ ಫೀಲ್ಡ್ ಮಾಡುತ್ತಿದ್ದಾಗ, ಅಭಿಮಾನಿಗಳು ಕಣಕ್ಕೆ ಟೆನಿಸ್ ಬಾಲ್ ಎಸೆದರು. ವಾರ್ನ್ ಅದನ್ನು ಜನಸಂದಣಿಯತ್ತ ಒದ್ದರು. ಇಷ್ಟಕ್ಕೇ ಉತ್ತೇಜಿತರಾದ ವೀಕ್ಷಕರು ಒಂದಂರ ಹಿಂದೊಂದರಂತೆ ಚೆಂಡು ಎಸೆಯಲು ಶುರುವಿಟ್ಟರು. ವಾರ್ನ್ ಕೈಲಾದಷ್ಟೂ ವಾಪಸ್ಸು ಒದ್ದರು. ಆದರೆ ಹಲ್ಲಾಗುಲ್ಲಾ ಹತ್ತಿಕ್ಕಲು ಪೊಲೀಸರೇ ಬರಬೇಕಾಯಿತು. ಬಂದವರು 34 ಜನರನ್ನು ಬಂಧಿಸಿದರು. ಅವರಲ್ಲಿ ಬಹುತೇಕರು ಹೊಟ್ಟೆ ತುಂಬಾ ಕುಡಿದು ಹುಚ್ಚುಚ್ಚಾಗಿ ಆಡುತ್ತಿದ್ದರು. ಜೊತೆಗೆ ವಾರ್ನ್ಗೆ ಚೆಂಡನ್ನು ಜನರತ್ತ ಒದೆಯಕೂಡೆಂದು ಎಚ್ಚರಿಕೆ ಕೊಟ್ಟರು.
ವಿಕ್ಟೋರಿಯಾ ಪೊಲೀಸರು ಶುಕ್ರವಾರ ಈ ಘಟನೆಯ ಬಗೆಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜನ ಇಷ್ಟೊಂದು ಹುಚ್ಚಾಟಕ್ಕಿಳಿಯಬಹುದು ಎಂದು ವಾರ್ನ್ ಲೆಕ್ಕಿಸಿರಲಿಲ್ಲ. ಪೊಲೀಸರ ಎಚ್ಚರಿಕೆ ಮಾತಿಗೆ ಅವರು ಓಗೊಟ್ಟರು ಎಂದು ಪ್ರಕಟಣೆ ತಿಳಿಸಿದೆ.
ಇಂಗ್ಲೆಂಡ್ನಲ್ಲಿ ನಡೆಯಿತೆನ್ನಲಾದ ಫೋನ್ ಸೆಕ್ಸ್ ಟಾಕ್ ಪ್ರಕರಣದ ಅಲೆ ಎದ್ದಾಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಉಪ ನಾಯಕ ಪದದಿಂದ ಕೆಳಗಿಳಿದ ವಾರ್ನ್ (ಆಗಸ್ಟ್, 2000) ಆ ನಂತರ ಕಣದಲ್ಲಿ ಕಂಡು ಬರಲಿಲ್ಲ. ವಿಂಡೀಸ್ ವಿರುದ್ಧದ ಐದೂ ಟೆಸ್ಟ್ ಪಂದ್ಯಗಳಲ್ಲೂ ಅವರು ಆಡಲಿಲ್ಲ. ಎಂದು ಚೆಂಡು ಹಿಡಿಯುತ್ತೇನೋ ಎನಿಸಿಬಿಟ್ಟಿದೆ ಅಂದಿದ್ದ ವಾರ್ನ್ ಗುರುವಾರ ಒಂದು ವಿಕೆಟ್ಟನ್ನೂ ಕೀಳದಾದರು. ಆದರೆ ಬೌಲಿಂಗ್ ಮೊನಚು ಮಾತ್ರ ಇನ್ನೂ ಮಾಸಿಲ್ಲ. 10 ಓವರ್ಗಳಲ್ಲಿ 38 ರನ್ ಕೊಟ್ಟರು. ಆಸ್ಟ್ರೇಲಿಯಾ 77 ರನ್ಗಳಿಂದ ಪಂದ್ಯ ಗೆದ್ದಿತು.
ಈವರೆಗೆ 366 ಟೆಸ್ಟ್ ವಿಕೆಟ್ ಪಡೆದಿರುವ ವಾರ್ನ್ ಗುರುವಾರ 60 ಸಾವಿರಕ್ಕೂ ಹೆಚ್ಚು ವೀಕ್ಷಕರೆದುರು ಕಣದಲ್ಲಿ ಕಂಡಾಗ ಹಂಗಾಮ. ವಾರ್ನ್ ಹೆಸರೇ ಜನರಿಗೆ ಂದು ಸೆನ್ಸೇಷನ್. ಆದರೆ ವಾರ್ನ್ ದುರಾದೃಷ್ಟವೋ ಅಥವಾ ಅವರ ಹರಕತ್ತು ತರುವ ಕುತ್ತೋ ಈಚೆಗೆ ಅವರು ಚೇಷ್ಟೆ- ತರಲೆ ಸುದ್ದಿಗಳಲ್ಲೇ ಮುಳುಗಿ ಹೋಗುತ್ತಿದ್ದಾರೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications