ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಿ.ಎನ್.ಎ.ಪಿ.ರಾವ್ ಹಾಗೂ ಸತ್ಯರಾಜ್ಗೆ ಡಾ.ವಿ.ಎಂ.ಘಾಟಿಗೆ ಪ್ರಶಸ್ತಿ
ಬೆಂಗಳೂರು : ಏರೋನಾಟಿಕಲ್ ಅಭಿವೃದ್ಧಿ ಏಜೆನ್ಸಿಯ ಯೋಜನಾ ನಿರ್ದೇಶಕ ಪೆರಂಡಳ್ಳಿ ನೆಕ್ಕಾರ್ ಅನಂತ ಪದ್ಮನಾಭ ರಾವ್ ಹಾಗೂ ಏರೋನಾಟಿಕಲ್ ಅಭಿವೃದ್ಧಿ ಸಂಸ್ಥಾನ (ಎಡಿಇ) ದ ಸಹ ನಿರ್ದೇಶಕ ಎನ್.ಎಚ್.ಸತ್ಯರಾಜ್ ಭಾರತೀಯ ಏರೋನಾಟಿಕ್ಸ್ ಸೊಸೈಟಿಯ ಪ್ರತಿಷ್ಠಿತ ಡಾ.ವಿ.ಎಂ.ಘಾಟಿಗೆ 2000 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಲಘು ಯುದ್ಧ ವಿಮಾನ ಯೋಜನೆಗೆ ಈ ಇಬ್ಬರೂ ವಿಜ್ಞಾನಿಗಳು ಸಲ್ಲಿಸಿರುವ ಕೊಡುಗೆಯನ್ನು ಗುರ್ತಿಸಿ, ಅದಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಜನವರಿ 21ರಂದು ಆಗ್ರಾದಲ್ಲಿ ನಡೆಯಲಿರುವ ಏರೋನಾಟಿಕಲ್ ಸೊಸೈಟಿಯ ಸರ್ವ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಏರೋನಾಟಿಕಲ್ ಸೊಸೈಟಿ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Wednesday, January 24, 2001, 5:30 [IST]