ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಖದಷ್ಟು ಕಡಿಮೆ ಆಯ್ತು ಚಳಿ

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿ ಕೊಂಚ ಕೊಂಚವಾಗಿ ಚಳಿ ಕ್ಷೀಣಿಸುತ್ತಿದೆ. ಒಣಹವೆ ತನ್ನ ಚಲನೆ ಮುಂದುವರಿಸಿದೆ. ಗಾದೆಯೇ ಇದೆಯಲ್ಲ. ಮಾಗಿಯ ಚಳಿ ಸಂಕ್ರಾಂತಿಯ ಹೊತ್ತಿಗೆ ಶಂಖದಷ್ಟು ಹೋದರೆ, ಶಿವರಾತ್ರಿಯ ಹೊತ್ತಿಗೆ ಶಿವಶಿವಾ ಎಂದು ಹೊರಟೇ ಹೋಗುತ್ತದೆ ಎಂದು.

ಸಂಕ್ರಾಂತಿಗೆ ಮೂರು ದಿನವಷ್ಟೇ ಇರುವಾಗ ಚಳಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಒಣಹವೆ ಇದೆ. ದಕ್ಷಿಣ ಒಳನಾಡಿನ ಕೆಲವಡೆ ಕನಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ತಾಪಮಾನದಲ್ಲಿ ಬದಲಾವಣೆ ಕಂಡುಬಂದಿದೆ.

ದಕ್ಷಿಣ ಒಳನಾಡಿನ ಅನೇಕ ಕಡೆ ತಾಪಮಾನ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚಾಗಿತ್ತು. ರಾಜ್ಯದ ಕನಿಷ್ಠ ಉಷ್ಣಾಂಶ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ಮುನ್ಸೂಚನೆಯ ರೀತ್ಯ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ನಿರ್ಮಲವಾದ ಆಕಾಶ ಇದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ.

ಮುಖಪುಟ / ಹವಾ ಹವಾ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X