ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ಗೆ ಆಹಾರ ಸರಬರಾಜು ಮಾಡುತ್ತಿದ್ದ 10 ಜನರ ಬಂಧನ

By Staff
|
Google Oneindia Kannada News

ಕೊಯಮತ್ತೂರು : ವೀರಪ್ಪನ್‌ ತಂಡಕ್ಕೆ ಸಹಾಯ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ವೀರಪ್ಪನ್‌ ಶಿಕಾರಿಯಲ್ಲಿ ತೊಡಗಿರುವ ವಿಶೇಷ ಕಾರ್ಯಾಚರಣೆ ಪಡೆ ಹತ್ತು ಮಂದಿಯನ್ನು ಬಂಧಿಸಿದೆ.

ಬಂಧಿತರು ವೀರಪ್ಪನ್‌ ತಂಡಕ್ಕೆ ಆಹಾರ ಸರಬರಾಜು ಮಾಡುತ್ತಿದ್ದರು ಎಂದು ಎಸ್‌ಟಿಎಫ್‌ ತಿಳಿಸಿದೆ. ವೀರಪ್ಪನ್‌ ಹಾಗೂ ಆತನ ಸಹಚರರಿಗೆ ಬಟ್ಟೆ ಹೊಲಿಯುತ್ತಿದ್ದ ಓರ್ವ ದರ್ಜಿಯೂ ಬಂಧಿತರಲ್ಲಿ ಸೇರಿದ್ದಾನೆ.

ರಾಜ್‌ ಅಪಹರಣದ ನಂತರ ವೀರಪ್ಪನ್‌ ಶಿಕಾರಿಯಲ್ಲಿ ತೊಡಗಿರುವ ಎಸ್‌ಟಿಎಫ್‌ ಪಡೆ ತನ್ನ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ವೀರಪ್ಪನ್‌ಗೆ ಸಹಾಯ ಮಾಡುತ್ತಿರುವ ಕೆಲವರನ್ನು ಗುರ್ತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ವೀರಪ್ಪನ್‌ಗೆ ಆಹಾರ ಸರಬರಾಜಾಗುವ ಮೂಲಗಳನ್ನು ಬಂದು ಮಾಡುವ ಮೂಲಕ, ಕಾಡುಗಳ್ಳನನ್ನು ಒತ್ತಡಕ್ಕೆ ಸಿಲುಕಿಸುವುದು ಎಸ್‌ಟಿಎಫ್‌ ತಂತ್ರವಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X