ಎಂಸಿಎಂನಲ್ಲಿ ಲಕ್ಕಿ ಆಲಿ
ಬೆಂಗಳೂರು : ಫ್ರೆಂಚ್ ಮ್ಯೂಸಿಕ್ ಚಾನೆಲ್ ಎಂಸಿಎಂ ಸಂಗೀತದ ಭೂರೀ ಭೋಜನ ಉಣ ಬಡಿಸಲು ಭಾರತಕ್ಕೆ ಬರುತ್ತಿದೆ. ಪಾಪ್ ಸಂಗೀತದ ಪಿಡ್ಜ , ಬರ್ಗರ್ಗಳ ನಡುವೆ ಭಾರತದ ಅಪ್ಪಟ ಸಂಗೀತದ ಖಾದ್ಯ ನಿಮಗಾಗಿ.
ಜಗತ್ತಿನ ಐದು ಖಂಡಗಳ ಸಂಗೀತ ಸಹೃದಯರಿಗೆ ಎಂಸಿಎಂ ಪರಿಚಿತ. ಆದರೆ ಎಂಸಿಎಂ ಅಂದರೇನು ? ಅದರ ವಿಶೇಷತೆ ಏನು?
ಎಸಿಎಂ ಅನ್ನು ಬಿಡಿಸಿ ಬರೆದರೆ ‘ಮಾ ಚೈನೆ ಮ್ಯೂಸಿಕಲೆ’ (ಅರ್ಥಾತ್ ಮೈ ಮ್ಯೂಸಿಕ್ ಚಾನೆಲ್). ಇತರೆ ಮ್ಯೂಸಿಕ್ ಚಾನೆಲ್ಗಳಿಗಿಂತ ಭಿನ್ನವಾದ ಹಾಡುಗಳನ್ನು ಈ ಚಾನೆಲ್ ಕೇಳಿಸುತ್ತಿದೆ; ವಿಡಿಯೋಗಳನ್ನು ತೋರಿಸುತ್ತಿದೆ. ಗುನುಗುನಿಸಲೂ ಮನಸ್ಸಾಗದ ಬುರ್ನಾಸು ಸಂಗೀತ, ಗಂಧ- ಗಾಳಿಯಿಲ್ಲದವರ ಅಬ್ಬರಗಳ ಹಾಡುಗಳ ಹಿನ್ನೆಲೆಯಲ್ಲೇ ನಲ್ಲ- ನಲ್ಲೆಯರ ಲಲ್ಲೆ ತೋರಿಸಿ ಹಣ ದೋಚೋ ಹುನ್ನಾರದ ಚಾನೆಲ್ಗಳ ನಡುವೆ ಎಂಸಿಎಂ ಹೇಗೆ ಭಿನ್ನವಾಗುತ್ತದೆ ಎನ್ನುವುದನ್ನು ನೋಡೋಣ.
ಪ್ಯಾರಿಸ್ನಲ್ಲಿ ತನ್ನ ಮನೆ ಹೊಂದಿರುವ ಈ ಚಾನೆಲ್ ಸಂಗೀತ ಕಲಿಯುತ್ತದೆ, ಕಲಿಸುತ್ತದೆ, ಹೊಸಬರನ್ನು ಪರದೆ ಮೇಲೆ ತರುತ್ತದೆ, ತಪ್ಪು ತಿದ್ದಿಕೊಳ್ಳುತ್ತದೆ, ಜಾಣ ಜಾಣೆಯರ ಸಲಹೆ ಕೇಳುತ್ತದೆ. ಇದೊಂದು ರೀತಿಯ ಸಂಗೀತ ಶೋಧ ಎಂದೇ ಹೇಳಬಹುದು. ಜಗತ್ತಿನ ವಿವಿಧ ಮೂಲೆಗಳಿಂದ ಸಂಗೀತ ತಜ್ಞರನ್ನು, ಸಾಹಿತಿಗಳನ್ನು ಕರೆಸುತ್ತದೆ. ಅವರ ಅನುಭವ ಆಧರಿಸಿ ಸಂಗೀತ ಹೆಣೆಯುತ್ತದೆ.
ಇದೋ ಈಗ ಈ ಅಪರೂಪದ ಚಾನೆಲ್ ಭಾರತದ ಸಂಗೀತ ಕಲಾವಿದರನ್ನೂ ಪರಿಚಯಿಸುತ್ತಿದೆ; ಅದೂ ನಮ್ಮ ಗಣ ರಾಜ್ಯೋತ್ಸವದ ದಿನ. ಈ ವಿಶೇಷ ಕಾರ್ಯಕ್ರಮದಲ್ಲಿ ಲಕ್ಕಿ ಆಲಿ ಹಾಗೂ ಏಷ್ಯನ್ ಡಬ್ ಫೌಂಡೇಷನ್ಗೆ ಕೆಲವು ಟೈಂ ಸ್ಲಾಟ್ಗಳನ್ನು ಹಂಚಲಾಗಿದೆ. ದಿಮ್ಯೂಸಿಕ್ಮ್ಯಾಗಜೀನ್ ಡಾಟ್ ಕಾಂ ಬಳಗದ ಸಹಯೋಗದಲ್ಲಿ ಎಂಸಿಎಂ ಈ ಕಾರ್ಯಕ್ರಮ ಪ್ರಸಾರಮಾಡಲಿದೆ. ಮಿಸ್ ಮಾಡಿಕೊಳ್ಳಬೇಡಿ.
(ಕೃಪೆ : ದಿಮ್ಯೂಸಿಕ್ ಮ್ಯಾಗಜೀನ್ ಡಾಟ್ ಕಾಂ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications