ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಳ್ಳಿ ಮಂದಿಯ ಸಿವಿಲ್ ಸೇವೆ ನೇಮಕಾತಿ ಮೀಸಲು ಮಸೂದೆ ಜಾರಿ
ಬೆಂಗಳೂರು : ರಾಜ್ಯ ನಾಗರಿಕ ಸೇವೆಗಳ ನೇಮಕಾತಿಯಲ್ಲಿ ರಾಜ್ಯದ ಗ್ರಾಮೀಣ ಅಭ್ಯರ್ಥಿಗಳಿಗೆ ಶೇ.25ರಷ್ಟು ಮೀಸಲಾತಿ ನೀಡುವ ಮಸೂದೆಯು ಮಂಗಳವಾರ (ಜನವರಿ 9) ದಿಂದ ಜಾರಿಗೆ ಬಂದಿದೆ.
ರಾಜ್ಯ ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ರಾಜ್ಯಪಾಲರು ಮಸೂದೆ ಸಂವಿಧಾನದ ವ್ಯಾಪ್ತಿಯಲ್ಲಿದೆಯೇ ಎಂದು ಪರಿಶೀಲಿಸಿ, ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಸಂಗ್ರಹಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು. ಜನವರಿ 3ನೇ ತಾರೀಖು ಅಡ್ವೊಕೇಟ್ ಜನರಲ್ ಅವರ ಮಸೂದೆ ಸಂವಿಧಾನ ಬಾಹಿರ ಅಲ್ಲ ಎಂಬ ಅಭಿಪ್ರಾಯವನ್ನು ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿತು. ಈಗ ಮಸೂದೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ ಎಂದರು.
ಜನರಲ್ ಮೆರಿಟ್, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪ್ರವರ್ಗಗಳ ನೇರ ನೇಮಕಾತಿಯಲ್ಲಿ ಖಾಲಿ ಸ್ಥಾನಗಳ ಪೈಕಿ ಶೇ.25ರಷ್ಟು ಸಮಾಂತರ ಮೀಸಲಾತಿ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
(ಇನ್ಫೋ ವಾರ್ತೆ)
Comments
Story first published: Wednesday, January 24, 2001, 5:30 [IST]