ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಅನಗತ್ಯ ವಿವಾದಕ್ಕೆ ಸಿಲುಕುವ ಅಪಾಯ ಇದೆ. ವ್ಯಾಪಾರದಲ್ಲಿ ಮುನ್ನಡೆ. ಎಲ್ಲ ವ್ಯವಹಾರದಲ್ಲೂ ಜಾಗರೂಕತೆ ಅಗತ್ಯ.

ವೃಷಭ : ವಿಪರೀತ ಕೆಲಸದಿಂದ ಸುಸ್ತಾಗಿದ್ದೀರಿ. ಕೊಂಚ ವಿಶ್ರಾಂತಿ ಅಗತ್ಯ. ಅನಾರೋಗ್ಯದ ಭೀತಿ. ಆಹಾರದ ಬಗ್ಗೆ ಕಾಳಜಿ ಬೇಕು.

ಮಿಥುನ : ಮಾನಸಿಕ ಗೊಂದಲ ನಿಮ್ಮನ್ನು ಕಾಡುತ್ತಿದೆ. ಹೊರಗೆ ಮುಸುಕಿರುವ ಮೋಡದಂತೆಯೇ ನಿಮ್ಮ ಮನಸ್ಸೂ ಕೂಡ. ಪ್ರಯಾಣದಿಂದ ಲಾಭವಿದೆ.

ಕಟಕ : ಭಾಗ್ಯದಾ ಲಕ್ಷ್ಮೀ ಬಾರಮ್ಮ ಎಂದು ಹಾಡಿದರೆ ಅಡ್ಡಿಯಿಲ್ಲ. ಧನಯೋಗ ಇದೆ. ದೇಹ ಸೌಖ್ಯವೂ ಇದೆ. ಭೂ ವ್ಯವಹಾರದಲ್ಲಿ ಮಾತ್ರ ಹಿನ್ನಡೆ.

ಸಿಂಹ : ಪ್ರಯಾಣದಲ್ಲಿ ಅಡಚಣೆ ಇದೆ. ಎಲ್ಲ ವ್ಯವಹಾರದಲ್ಲೂ ಕಾರ್ಯ ಸಿದ್ಧಿ. ಪತಿ - ಪತ್ನಿಯರಲ್ಲಿ ಭಿನ್ನಾಭಿಪ್ರಾಯ. ಮನರಂಜನೆಯಿಂದ ಉತ್ಸಾಹ.

ಕನ್ಯಾ : ಆರ್ಥಿಕ ಸಮಸ್ಯೆ ಇದೆ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣ . ವ್ಯಾಪಾರದಲ್ಲಿ ನಿರಾಶೆ. ಗಣಪತಿಯ ಪೂಜೆಯಿಂದ ಯಶಸ್ಸು.

ತುಲಾ : ಹೊಸ ಯೋಚನೆಗಳಿಂದ ಆದಾಯದ ನಿರೀಕ್ಷೆ. ಸ್ನೇಹಿತರನ್ನು ನಂಬಿದರೆ ಕೆಟ್ಟಿರಿ ಎಚ್ಚರ. ಉನ್ನತ ವಿದ್ಯಾಭ್ಯಾಸದಲ್ಲಿ ಉನ್ನತಿ - ಕೀರ್ತಿ.

ವೃಶ್ಚಿಕ : -ಅನಿರೀಕ್ಷಿತ ಧನಾಗಮನ. ಬಂಧುಗಳಿಂದ ಕಿರಿಕಿರಿ. ಕಾರ್ಯ ಕ್ಷೇತ್ರದಲ್ಲಿ ಮೇಲಧಿಕಾರಿಯಿಂದ ಬೈಗುಳ. ಕುಲದೇವರನ್ನು ನಂಬಿದರೆ, ಪ್ರಗತಿ ಖಂಡಿತ.

ಧನಸ್ಸು : ಬಂಧುಗಳ ಸಂಪರ್ಕದಿಂದ ಯಶಸ್ಸು ಲಭಿಸುತ್ತದೆ.

ಮಕರ : ನೀವು ಮಾಡುವ ಕೆಲಸ ಅಚ್ಚುಕಟ್ಟಾಗಿದೆ. ನೂರಾರು ಹೊಸ ಯೋಚನೆಗಳು ಕಾಡುತ್ತಿವೆ. ಆರೋಗ್ಯದ ಬಗ್ಗೆ ಗಮನ ನೀಡಿ. ನಿಮ್ಮ ಎಲ್ಲ ಯೋಜನೆಗಳಲ್ಲಿ ಪ್ರಗತಿ.

ಕುಂಭ : ಷೇರು ವ್ಯವಹಾರದಲ್ಲಿ ಪ್ರಗತಿ. ಮನೆ, ಭೂ ವ್ಯವಹಾರದಲ್ಲಿ ಸಂತಸದ ದಿನ. ಶತ್ರುಗಳ ಭಯ. ವ್ಯಾಪಾರದಲ್ಲಿ ನಿರೀಕ್ಷಿತ ಯಶಸ್ಸು.

ಮೀನ : ಎಂದೆಂದೂ ಜಯ ನಿಮ್ಮದೆ. ಸದಾ ಸಂಶಯದಿಂದ ನೋಡುವವರನ್ನು ಉಪೇಕ್ಷಿಸಿ. ನೀವು ಹೊಣೆಗೇಡಿ ಅಲ್ಲ ಎಂಬುದು ಜಗತ್ತಿಗೇ ತಿಳಿದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X