ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧವನ್‌- ವಾಡೇಕರ್‌ ಮುಖಾಮುಖಿ, ಬುಧವಾರ ಕಪಿಲ್‌ ಸರದಿ

By Staff
|
Google Oneindia Kannada News

ನವದೆಹಲಿ : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ತರಬೇತುದಾರ ಅಜಿತ್‌ ವಾಡೇಕರ್‌ ಸೋಮವಾರ ಮುಂಜಾನೆ ಬಿಸಿಸಿಐನ ವಿಶೇಷ ಆಯುಕ್ತ ಕೆ.ಮಾಧವನ್‌ ಅವರ ಮುಂದೆ ವಿಚಾರಣೆಗೆ ಹಾಜರಾದರು.

ಭಾರತದ ಮತ್ತೊಬ್ಬ ಮಾಜಿ ನಾಯಕ ಕಪಿಲ್‌ ದೇವ್‌ ಬುಧವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಮುನ್ನಾ ನಿಗದಿಯಾಗಿದ್ದಂತೆ ಶನಿವಾರ ಕಪಿಲ್‌ ಹಾಗೂ ಭಾನುವಾರ ವಾಡೇಕರ್‌ ವಿಚಾರಣೆ ನಡೆಯಬೇಕಿತ್ತು. ಫಿರೋಜ್‌ ಷಾ ಕೋಟ್ಲ ಕ್ರೀಡಾಂಗಣದಲ್ಲಿ ಕಪಿಲ್‌ ವಿಚಾರಣೆ ನಿಗದಿಯಾಗಿತ್ತು. ಆದರೆ ಇಬ್ಬರೂ ವಿಚಾರಣೆಯನ್ನು ಮುಂದೂಡುವಂತೆ ಮಾಧವನ್‌ ಅವರಲ್ಲಿ ಮನವಿ ಮಾಡಿದ್ದರಿಂದ ಈ ಬದಲಾವಣೆ ಉಂಟಾಗಿದೆ.

ಅಜಿತ್‌ ಹಾಗೂ ಕಪಿಲ್‌ ತಂಡದಲ್ಲಿದ್ದ ಅವಧಿಯಲ್ಲೇ ಮ್ಯಾಚ್‌ಫಿಕ್ಸಿಂಗ್‌ ಹಗರಣ ಗರಿ ಕೆದ-ರಿಕೊಂಡಿದ್ದು, ಇಬ್ಬರ ವಿಚಾರಣೆ ಮಹತ್ವದ್ದೆನಿಸಿದೆ. ಸಿಬಿಐನಿಂದ ನಿರಾರೋಪಿ ಎನಿಸಿಕೊಂಡಿರುವ ಕಪಿಲ್‌ ಅವರ ಮುಂದೆ ಈಗ ಮತ್ತೊಮ್ಮೆ ಪ್ರಶ್ನೆಗಳು ಹರಿಯಲಿವೆ. ಈ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ನಂತರ ಮಾಧವನ್‌ ವರದಿಯಾಂದನ್ನು ಸಿದ್ಧಪಡಿಸಿ, ಬಿಸಿಸಿಐಗೆ ನೀಡಲಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X