Get Updates
Get notified of breaking news, exclusive insights, and must-see stories!

ಕಪಿಲ್‌, ವಾಡೇಕರ್‌ ಪ್ರಶ್ನಿಸಲು ತುದಿಗಾಲಲ್ಲಿ ನಿಂತಿರುವ ಮಾಧವನ್‌

ನವದೆಹಲಿ : ಮೋಸದಾಟ ಸಂಬಂಧ ಕಪಿಲ್‌ದೇವ್‌ ಹಾಗೂ ಅಜಿತ್‌ ವಾಡೇಕರ್‌ ಅವರ ಹೇಳಿಕೆಗಳನ್ನೊಳಗೊಂಡ ವರದಿಯನ್ನು ಜನವರಿ ಕೊನೆಯಾಳಗೆ ಸಲ್ಲಿಸುವ ವಿಶ್ವಾಸವನ್ನು ಬಿಸಿಸಿಐ ವಿಶೇಷ ತನಿಖಾ ಆಯುಕ್ತ ಕೆ. ಮಾಧವನ್‌ ಶನಿವಾರ ಖಾಸಗಿ ವಾಹಿನಿಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ವ್ಯಕ್ತ ಪಡಿಸಿದ್ದಾರೆ.

ಕಳೆದ ವಾರ ಕಪಿಲ್‌ ಹಾಗೂ ವಾಡೇಕರ್‌ ಅವರ ಬಿಡುವಿರದ ಕಾರ್ಯಕ್ರಮಗಳಿಂದಾಗಿ ಮಾಧವನ್‌ರೊಂದಿಗಿನ ಅವರ ಭೇಟಿಯ ಕಾರ್ಯಕ್ರಮ ರದ್ದಾಗಿತ್ತು . ಬರುವ ಸೋಮವಾರ (ಜ.8) ವಾಡೇಕರ್‌ರನ್ನು ಹಾಗೂ ಬುಧವಾರ (ಜ.10) ಕಪಿಲ್‌ ಅವರನ್ನು ಮಾಧವನ್‌ ಪ್ರಶ್ನಿಸುವರು. ಮೋಸದಾಟ ಪ್ರಕರಣದ ವರದಿಯಲ್ಲಿ ಸಿಬಿಐ ಹೆಸರಿಸಿರುವ ಅನೇಕ ಪಂದ್ಯಗಳು ಕಪಿಲ್‌ ಹಾಗೂ ವಾಡೇಕರ್‌ ನೇತೃತ್ವದಲ್ಲಿ ನಡೆದಿರುವುದರಿಂದ ಅವರನ್ನು ಪ್ರಶ್ನಿಸಲು ಬಿಸಿಸಿಐ ಮಾಧವನ್‌ರಿಗೆ ತಿಳಿಸಿದೆ.

ಸಿಬಿಐ ಹಾಗೂ ಇತರ ವರದಿಗಳ ಹಿನ್ನೆಲೆಯಲ್ಲಿ ಕಪಿಲ್‌ ಹಾಗೂ ವಾಡೇಕರ್‌ ಅವರನ್ನು ಪ್ರಶ್ನಿಸುತ್ತೇನೆ ಎಂದು ಟೀವಿ ಸಂದರ್ಶನದಲ್ಲಿ ಹೇಳಿರುವ ಮಾಧವನ್‌, ಬಿಸಿಸಿಐ ಸೇರಿದಂತೆ ಯಾರಿಂದಲೂ ತಾವು ಯಾವುದೇ ವಿಧವಾದ ಒತ್ತಡಕ್ಕೆ ಒಳಗಾಗಿಲ್ಲ , ತನಿಖೆಯ ಬಗ್ಗೆ ಮುಕ್ತ ಮನಸ್ಸಿನಿಂದ ಇರುವೆ ಹಾಗೂ ವರದಿ ಸಲ್ಲಿಸಲು ತಮಗೆ ತಾವೇ ಜನವರಿ 31 ರ ಗಡುವು ಹಾಕಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+