Get Updates
Get notified of breaking news, exclusive insights, and must-see stories!

ವೈಕುಂಠ ಏಕಾದಶಿ : ತಿಮ್ಮಪ್ಪನ ದರ್ಶನಕ್ಕೆ ಮೈಲಿಗಟ್ಟಲೆ ಕ್ಯೂ

Sri srinivasa swamy ಬೆಂಗಳೂರು : ಇಂದು ಶನಿವಾರ ತಿರುಪತಿ ಗಿರಿವಾಸ ಶ್ರೀ ವೆಂಕಟೇಶ್ವರನ ವಾರ. ಮಿಗಿಲಾಗಿ ಶ್ರೀ ವೈಕುಂಠ ಏಕಾದಶಿ. ವೈಷ್ಣವರಿಗೆ ಹಾಗೂ ಶ್ರೀಮನ್ನಾರಾಯಣನ ಭಕ್ತರಿಗೆ ಪವಿತ್ರದಿನವಾದ ಇಂದು ಶ್ರೀ ವೆಂಕಟೇಶ್ವರನ ದರ್ಶನ ಮಾಡಿ ತಮ್ಮ ಜೀವನವನ್ನು ಧನ್ಯ ಮಾಡಿಕೊಳ್ಳಲು ಬೆಂಗಳೂರೂ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ವೆಂಕಟೇಶನ ದೇವಾಲಯಗಳಲ್ಲೂ ಭಕ್ತಾದಿಗಳು ಮೈಲಿಗಟ್ಟಲೆ ಕ್ಯೂ ನಿಂತಿದ್ದರು.

ಸುಪ್ರಭಾತದಲ್ಲೇ ಎದ್ದು ಶುಚಿರ್ಭೂತರಾಗಿ, ಮಡಿ ಬಟ್ಟೆಯುಟ್ಟು, ಕೃಷ್ಣರಾಜ ಮಾರುಕಟ್ಟೆ ಬಳಿಯ ಕೋಟೆ ವೆಂಕಟರಮಣ ದೇವಾಲಯದ ಮುಂದೆ, ಬನಶಂಕರಿಯ ದೇವಗಿರಿಯ ವೆಂಕಟರಮಣ ದೇವಾಲಯದ ಎದುರು, ರಾಜಾಜಿನಗರದಲ್ಲಿರುವ ವಿಶ್ವ ವಿಖ್ಯಾತ ಇಸ್ಕಾನ್‌ ದೇವಾಲಯದಲ್ಲಿ ಭಕ್ತಾದಿಗಳು ಭಗವಂತನ ದರ್ಶನಕ್ಕಾಗಿ ಸರತಿಯ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಇರುವ ಶ್ರೀನಿವಾಸನ ದೇವಾಲಯದಲ್ಲೂ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ, ಪುರಸ್ಕಾರಗಳು ನಡೆದವು. ದೇವಾಲಯವನ್ನು ಸಂಪರ್ಕಿಸುವ ಪ್ರಮುಖ ಬೀದಿಗಳಲ್ಲಿ ಹೂವಿನ ಕಮಾನುಗಳನ್ನು ಹಾಕಿ, ರಸ್ತೆಯುದ್ದಕ್ಕೂ ವಿದ್ಯುತ್‌ ದೀಪಗಳನ್ನು ಜೋಡಿಸಲಾಗಿತ್ತು. ರಾಜ್ಯದ ಬಹುತೇಕ ಎಲ್ಲ ವೆಂಕಟೇಶನ ದೇವಾಲಯಗಳನ್ನೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಇಸ್ಕಾನ್‌ ದೇವಾಲಯದಲ್ಲಿ ಏಕಾದಶಿ ಉತ್ಸವ ನಡೆಯಿತು. ಶ್ರೀನಿವಾಸನಿಗೆ ಲಕ್ಷಾರ್ಚನೆಯೂ ನಡೆಯಿತು. ಪಲ್ಲಕ್ಕಿ ಉತ್ಸವ, ಭಜನೆ, ಕೀರ್ತನೆ, ಪ್ರಸಾದ ವಿನಿಯೋಗವೂ ನಡೆಯಿತು. ವೈಕುಂಠ ಏಕಾದಶಿ ಪ್ರಯುಕ್ತ ಇಸ್ಕಾನ್‌ ದೇಗುಲದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ವರೆಗೆ ವಿಶೇಷ ದರ್ಶನ ಏರ್ಪಡಿಸಲಾಗಿದೆ.

ರಾಜ್ಯದ ಚಿಕ್ಕ ತಿರುಪತಿಯಲ್ಲೂ ವಿಶೇಷ ಪೂಜೆಗಳು ನಡೆದವು. ಸಾವಿರಾರು ಜನರು ವೆಂಕಟರಮಣನ ದರ್ಶನ ಮಾಡಿದರು. ಮಧ್ಯಾಹ್ನ 3 ಗಂಟೆಯ ಸಮಯದಲ್ಲೂ ಇಸ್ಕಾನ್‌, ಕೋಟೆ ವೆಂಕಟರಮಣ ದೇವಾಲಯ, ಬನಶಂಕರಿಯ ದೇವಗಿರಿಯ ದೇವಾಲಯ, ಜೆಪಿ ನಗರ ವೆಂಟರಮಣ ದೇವಾಲಯ ಹೀಗೆ ಭಕ್ತ ಸಮುದಾಯ ಸಾವಿ ಸಾವಿರ ಸಂಖ್ಯೆಯಲ್ಲಿ ಸಾಲಾಗಿ ನಿಂತು ತಿಮ್ಮಪ್ಪನ ದರ್ಶನ ಪಡೆದರು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+