ನಾಳಿನ ಪರೀಕ್ಷೆಗೆ ನಾಮೂವರೂ ರೆಡಿ
*ಡಿ. ರಾಮ್ರಾಜ್
ಭಾರ-ತೀ-ಯ ಕ್ರಿಕೆ-ಟ್-ನ ಘನ-ತೆ-ಗೆ 2000 ವರ್ಷ-ದ-ಲ್ಲಿ ಹತ್ತಿ-ದ ಮಸಿ ಗಂಗಾ-ಜ-ಲ-ವೂ ತೊ-ಳೆ-ಯ--ಲಾರ-ದಂಥ-ಹದ್ದು . ಮನೆ ದೇವ-ರಿ-ಗಿಂ-ತಾ ಮಿಗಿ-ಲಾ-ಗಿ ಕ್ರಿಕೆ-ಟ್ ರಸಿ-ಕ-ರು ಆರಾ-ಧಿ-ಸು-ತ್ತಿ-ದ್ದ -ಘ-ಟಾ-ನು-ಘ-ಟಿ-ಗ-ಳೆ-ಲ್ಲಾ ಮ್ಯಾಚ್-ಫಿ-ಕ್ಸಿಂ-ಗ್ ಪ್ರಕ-ರ-ಣ-ದಲ್ಲಿ ಎಂಜ-ಲು ತಿಂದ-ದ್ದು ಬಯ-ಲಾ-ದ-ದ್ದೇ ತಡ, ಇನ್ನೇ-ನು -ದೇ-ಶ-ದ-ಲ್ಲಿ ಕ್ರಿಕೆ-ಟ್ ನೆಲ ಕಚ್ಚಿ-ತು ಎಂದು ಅಂದು-ಕೊಂ-ಡವ-ರೇ ಹೆಚ್ಚು . ಹಾಗೇ-ನೂ ಆಗ-ಲಿ-ಲ್ಲ . ತಪ್ಪಿ-ತ-ಸ್ಥ-ರು ಮನೆ-ಗೆ ಹೋದ-ರು. ಹೊಸ-ಬ-ರು ಚೆನ್ನಾಗಿ ಆಡು-ತ್ತಿ-ದ್ದಾ-ರೆ. ಭಾರ-ತೀ-ಯ ಕ್ರಿಕೆ-ಟ್ ರಸಿ-ಕ ಯಥಾ ಪ್ರಕಾ-ರ ಆಟ-ವ-ನ್ನು ಆಸ್ವಾ-ದಿ-ಸು-ತ್ತಿ-ದ್ದಾ-ನೆ.
ಹೊಸ ಕ್ಯಾಲೆಂ-ಡ-ರ್ ವರ್ಷ 2001 ಮತ್ತೆ ಹಲ-ವು ನಿರೀ-ಕ್ಷೆ-ಗ-ಳ-ನ್ನು ಹೊ-ತ್ತು ತಂದಿ-ದೆ. ಈ ವರ್ಷ-ದ-ಲ್ಲಿ ನಮ್ಮ ಕ್ರಿಕೆ-ಟ್ ಕಲಾ-ವಿ-ದ-ರು ಬಯ-ಸು-ವು-ದಾ-ದ-ರೂ ಏನ-ನ್ನು ? ಈ ಕುರಿ-ತು ನಮ್ಮ-ವ-ರೇ ಆದ ವಿಶ್ವ ಖ್ಯಾತ ಕ್ರಿಕೆ-ಟ್ ತಾರೆ-ಗ-ಳು ತಮ್ಮ ಅನ್ನಿ-ಸಿ-ಕೆ-ಗ-ಳ-ನ್ನು ನಮ್ಮೊಂ-ದಿ-ಗೆ ಹಂಚಿ-ಕೊಂ-ಡಿ-ದ್ದಾ-ರೆ. ಹೆಕ್ಕಿ-ಕೊ-ಳ್ಳಿ.
ರಾಹುಲ್ ಡ್ರಾವಿಡ್ : ಬಹಳ ಸಮಯದ ನಂತರ ನಾವು ಜಾಸ್ತಿ ಟೆಸ್ಟ್ ಕ್ರಿಕೆಟ್ ಆಡುತ್ತಿರುವುದರಿಂದ ನನಗೆ ತೀವ್ರ ಸಂತೋಷ ಆಗುತ್ತಿದೆ. ಈ ಸಂಗತಿ ಹೊಸ ವರ್ಷಕ್ಕೆ ಹೊಸ ರಂಗು ತಂದಿದೆ. ಟೆಸ್ಟ್ ಕ್ರಿಕೆಟ್ ಅಂದರೆ ಆಟಗಾರರ ದೈಹಿಕ ಸಾಮರ್ಥ್ಯದ ಸತ್ವ ಪರೀಕ್ಷೆ . ಇದು ನಮಗೆಲ್ಲ ಒಂದು ದೊಡ್ಡ ಸವಾಲು. ಈ ಸವಾಲನ್ನು ಸಮರ್ಥವಾಗಿ ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ವಿಶೇಷವಾಗಿ ಆಸ್ಟ್ರೇಲಿಯ ತಂಡದ ಭಾರತ ಪ್ರವಾಸ ಕಾರ್ಯಕ್ರಮ ನಮ್ಮ ಮುಂದಿದೆ. ಅವರು ವಿಶ್ವವಿಜೇತರು, ಘಟಾನುಘಟಿಗಳು. ಇನ್ನು ವಿದೇಶ ಪ್ರವಾಸ ನಮಗೆ ನಿರೀಕ್ಷಿತ ಯಶಸ್ಸುಗಳನ್ನು ತಂದು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನಾವು ಎಲ್ಲ ವಿದೇಶೀ ಪ್ರವಾಸಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು. ನಮ್ಮ ತಂಡದಲ್ಲಿ ಯುವಕರೇ ಹೆಚ್ಚಾಗಿ ಆಡುತ್ತಿರುವುದರಿಂದ ಈ ಸಾರಿ ಚೆನ್ನಾಗಿ ಆಡಿ ಗೆಲ್ಲುತ್ತೇವೆ ಎಂಬ ಭರವಸೆ ನನಗಿದೆ.
ಜಾವಗಲ್ ಶ್ರೀನಾಥ್ : ಒಂದೇ ಮಾತಿನಲ್ಲಿ ಹೇಳುವುದಾದರೆ ಮುಂದಿನ ವ್ವಿ ಕಪ್ ಪಂದ್ಯಾವಳಿಗಳಿಗೆ ನಾವು ಈಗಿಂದೀಗಲೇ ತಯಾರಾಗಬೇಕು. ಇದೇ ನಮ್ಮ ಮೊದಲ ಆದ್ಯತೆ ಮತ್ತು ಗುರಿ. (ಮುಂದಿನ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ 2003 ) ಎರಡನೆಯದೆಂದರೆ, ವಿದೇಶೀ ನೆಲದಲ್ಲಿ ನಡೆಯುವ ಎಲ್ಲ ಸರಣಿ ಹಾಗೂ ಪಂದ್ಯಾವಳಿಗಳನ್ನು ಗೆಲ್ಲುವುದರತ್ತ ನಮ್ಮ ಗಮನ ಕೇಂದ್ರೀಕೃತವಾಗಬೇಕು. ಸದ್ಯ ನಾನು ಮೈಸೂರಿಗೆ ಹೋಗುತ್ತಿದ್ದೇನೆ. ಬಂದ ಮೇಲೆ ನನ್ನ ಆಶಯಗಳನ್ನು ವಿವರವಾಗಿ ಹೇಳುತ್ತೇನೆ.
ಅನಿಲ್ ಕುಂಬ್ಳೆ : ಬೌಲಿಂಗ್ ಮಾಡಲು ಹಾತೊರೆಯುತ್ತಿದ್ದೇನೆ. ಚೆನ್ನಾಗಿ ಬೌಲ್ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಬೇಕೆನ್ನುವುದೆ ನನ್ನ ಇವತ್ತಿನ ಆಸೆ. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ಗಳು ಕ್ಲಿಷ್ಟಕರವಾಗಿರುತ್ತದೆ. ನಮ್ಮ ತಂಡದ ಉದಯೋನ್ಮುಖ ಆಟಗಾರರಿಗೆ ಈ ಅವಕಾಶವೊಂದು ಸತ್ವಪರೀಕ್ಷೆ ಯೇ ಸರಿ. ಈ ಹಣಾಹಣಿ ಸ್ಪರ್ಧೆಯಲ್ಲಿ ಯಾರು ಗಮನ ಸೆಳೆಯುವ ಆಟ ಆಡುತ್ತಾರೆನ್ನುವುದು ತಂಡದ ಯಶಸ್ಸನ್ನು ಅವಲಂಬಿಸಿದೆ.
ಜಿಂಬಾಬ್ವೆ, ದಕ್ಷಿಣ ಆಫ್ರಿಕ ಮತ್ತು ಶ್ರೀಲಂಕ ಪ್ರವಾಸ ನಮ್ಮ ಮುಂದಿದೆ. ಇವೆಲ್ಲವೂ ಪ್ರಯಾಸಕರ. ಸವಾಲೆನಿಸುವ ಈ ಸ್ಪಧೆಗಳಲ್ಲಿ ನಾವು ಶಕ್ತಿಮೀರಿ ಹೋರಾಡಬೇಕು. ಇಂಗ್ಲೆಂಡ್ ಟೂರು ಕೂಡ ಅಷ್ಟೆ. ಸುಲಭ ಎಂದು ಮೈಮರೆಯುವ ಹಾಗಿಲ್ಲ. ಮೊನ್ನೆ ತಾನೆ ಅವರು ಪಾಕಿಸ್ತಾನ್ಗೆ ಮಣ್ಣು ಮುಕ್ಕಿಸಿದ್ದಾರೆ ಎನ್ನುವುದನ್ನು ನಾವು ನೆನಪಿಲ್ಲಿಟ್ಟುಕೊಂಡು ಮೈದಾನಕ್ಕಿಳಿಯಬೇಕು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications