ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಹೆಚ್ಚೆಚ್ಚು ಬರವಣಿಗೆ ಹಾಗೂ ಅಧ್ಯಯನದಲ್ಲಿ ತೊಡಗಿರುವುದೇ ಮಾನಸಿಕ ದಣಿವಿಗೆ ಕಾರಣ. ಇದನ್ನೆಲ್ಲಾ ಮರೆಸುವಂಥಾ ಸಂತೋಷ ಫಲಿತಾಂಶ ರೂಪದಲ್ಲಿ ನಿಮ್ಮದಾಗಲಿದೆ.

ವೃಷಭ :ಭವಿಷ್ಯದ ಭದ್ರತೆಯ ಬಗ್ಗೆ ಆತಂಕದಲ್ಲಿದ್ದೀರಿ. ದಿನ ಬೆಳಗಾದರೆ ಕಾಲಿಗೆ ಚಕ್ರ ಕಟ್ಟಿಕೊಳ್ಳುವ ದಿನಚರಿ ಬದಲಾಗುವ ಬಗ್ಗೆ ಇಂದೇ ಸೂಚನೆ ದೊರೆಯಲಿದೆ. ಗಾಳಿ ಬಂದಾಗ ತೂರಿಕೊಳ್ಳಿ.

ಮಿಥುನ : ಕಳೆದುಹೋದದ್ದರ ಬಗ್ಗೆ ಯಾಕೆ ಚಿಂತಿಸುತ್ತೀರಿ. ನಿಮ್ಮೆದುರು ತೆರೆದುಕೊಂಡಿದೆ ನೋಡಿ ಗುಲಾಬಿ ತೋಟ. ಆದರೂ, ಅವರು ಕೊಡುವ ಕೆಂಪು ಗುಲಾಬಿಯೇ ನಿಮಗೆ ಹೆಚ್ಚು ಮೆಚ್ಚು.

ಕಟಕ : ಹೆಚ್ಚು ಹೆಚ್ಚು ಜನಮುಖಿಯಾಗುವ ನಿಮ್ಮ ನಡವಳಿಕೆ ವೃತ್ತಿಯಲ್ಲಿ ಗೌರವ ತರುತ್ತದೆ. ಗೆಳೆಯರು ಅಸೂಯೆ ಪಡುವಂತೆ ಧನಲಾಭ, ಪ್ರಣಯ ಲಾಭ ಹೊಂದಲಿದ್ದೀರಿ.

ಸಿಂಹ : ಮೇಲಧಿಕಾರಿ ಕಿರಿಕಿರಿಗೆ ಅಲವತ್ತು ಕೊಳ್ಳುವುದರಿಂದ ಏನೂ ಉಪಯೋಗವಿಲ್ಲ . ಅಜ್ಜನ ಕಾಲದ ಐಡಿಯಾಗಳನ್ನು ಬಿಟ್ಟು , ತಲೆಗಷ್ಟು ಕೆಲಸ ಕೊಡಿ. ಮೇಲೆ ಬರುತ್ತೀರಿ.

ಕನ್ಯಾ : ಗೆಳೆಯರೊಂದಿಗೆ ಕುಟುಂಬದ ವಿಷಯಗಳನ್ನು ಚರ್ಚಿಸುವ ನಿಮ್ಮ ಇರಾದೆ ಸರಿಯಲ್ಲ . ಮನೆಯ ವಿಷಯಗಳು ಮನೆಯಲ್ಲಿಯೇ ಬಗೆಹರಿಯಬೇಕು. ಸಮಾಧಾನ ಚಿತ್ತರಾಗಿರಿ.

ತುಲಾ : ದೇಶ ಸುತ್ತಿ ಕೋಶ ಓದುವ ದಿನ. ಉನ್ನತ ಶಿಕ್ಷಣದಲ್ಲಿ ಭಾರೀ ಯಶಸ್ಸು . ಈ ಎಲ್ಲವೂ ವೃತ್ತಿಯಲ್ಲಿನ ಬಡ್ತಿಗೆ ಮೆಟ್ಟಿಲಾಗಲಿವೆ.

ವೃಶ್ಚಿಕ : ಚಟುವಟಿಕೆಗಳನ್ನು ಮಾರ್ಪಡಿಸಿಕೊಳ್ಳಲು ಸರಿಯಾದ ದಿನ. ಮನರಂಜನೆ ಈ ಸಂಜೆಯ ಮೋಹಕಗೊಳಿಸಲಿದೆ. ರಂಗಾಗುವಾಗ ಮನಸ್ಸು ನಿಯಂತ್ರಣದಲ್ಲಿರಲಿ.

ಧನಸ್ಸು : ಸಂಗಾತಿಯಾಂದಿಗೆ ವಿರಸವೇ? ನಮ್ಮಲ್ಲಿ ಬನ್ನಿ - ಜಾಹೀರಾತುಗಳನ್ನು ನಂಬಿ ಕೈ ಸುಟ್ಟುಕೊಳ್ಳಬೇಡಿ. ಎಲ್ಲರ ಮನೆಯ ಕಾವಲಿಯೂ ಕಪ್ಪೇ ಎಂದು ಅರಿತರೆ ನಿಮ್ಮ ಚಿಂತೆ ಖತಂ.

ಮಕರ : ಮನಸ್ಸನ್ನು ಹಗುರಾಗಿಸಿಕೊಳ್ಳುವುದಕ್ಕಾಗಿ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅತಿಥಿಗಳು ಮನೆತುಂಬುವ ಹೊತ್ತು . ಜೇಬಿನ ಬಗ್ಗೆ ನಿಗಾ ಅಗತ್ಯ.

ಕುಂಭ : ಭವಿಷ್ಯದ ಬಗ್ಗೆ ಇಂದೇ ಯೋಚಿಸುವ ನಿಮ್ಮ ಮನೋಭಾವ ಒಳ್ಳೆಯದು. ಶಂಕೆ ಇಲ್ಲದೆ ಉಳಿತಾಯ ಯೋಜನೆಯಲ್ಲಿ ತೊಡಗಿಸಿಕೊಳ್ಳಿ.

ಮೀನ : ಜಂಜಡದ ದಿನಚರಿಯಲ್ಲಿ ಕಳಕೊಂಡಿರುವ ನೆಮ್ಮದಿಯನ್ನು ಪಡೆಯಲು ಧ್ಯಾನ ಮಾಡುವುದು ಒಳ್ಳೆಯದು. ಬಹಳ ದಿನಗಳ ನಂತರ ಕುಟುಂಬದೊಂದಿಗೆ ಸುಂದರ ಸಂಜೆ ಕಳೆಯುತ್ತೀರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X