ಬೆಂಗಳೂರಿನಲ್ಲಿ ಕೋಟ್ಯಧಿಪತಿಯ ಕಗ್ಗೊಲೆ, ಕಾರಣ ನಿಗೂಢ
ಬೆಂಗಳೂರು : ನಗರದ ರಿಯಲ್ ಎಸ್ಟೇಟ್ ವಹಿವಾಟುದಾರ ಹಾಗೂ ಕೋಟ್ಯಧಿಪತಿಯಾಬ್ಬರನ್ನು ದುಷ್ಕರ್ಮಿಗಳಿಬ್ಬರು ಗುಂಡಿಟ್ಟು ಕೊಂದಿರುವ ಘಟನೆ ಶುಕ್ರವಾರ ಸಂಜೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಉದ್ಯಮಿ ವೈ. ಸುಬ್ಬರಾಜು (65) ಅವರನ್ನು ಪರಿಚಯಿಸಿಕೊಳ್ಳುವಂತೆ ನಾಟಕವಾಡಿ, ಕೈಕುಲುಕುವ ನೆಪದಲ್ಲಿ ಹತ್ತಿರ ಬಂದ ದುಷ್ಕರ್ಮಿಗಳು ಬಹಳ ಸಮೀಪದಿಂದ ಗುಂಡುಹಾರಿಸಿ ಕೊಂದಿದ್ದಾರೆ. ಈ ಕೊಲೆಯ ಹಿಂದೆ ಭೂಗತ ಜಗತ್ತಿನ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಆದರೆ, ಕೊಲೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಶೇಷಾದ್ರಿಪುರದ 1ನೇ ಮುಖ್ಯರಸ್ತೆಯಲ್ಲಿನ ಸುಬ್ಬರಾಜು ಅವರ ರಿಯಲ್ ಎಸ್ಟೇಟ್ ಕಚೇರಿ ಶ್ರೀನಿವಾಸ ಎಂಟರ್ಪ್ರೆೃಸಸ್ಗೆ ಸಂಜೆ 5-50ರ ಸುಮಾರಿನಲ್ಲಿ ಬಂದ ಇಬ್ಬರು ಸುಬ್ಬರಾಜು ಅವರ ಹಣೆಗೆ ಗುಂಡಿಟ್ಟು ಹೊಡೆದಿದ್ದಾರೆ. ಅತಿ ಸಮೀಪದಿಂದ ಗುಂಡು ಹಾರಿಸಿರುವ ಕಾರಣ ಗುಂಡು ಹಣೆಯ ಮೂಲಕ ಹಾದು ಹಿಂದಲೆಯಿಂದ ಹೊರಬಂದಿದೆ.
ಈ ಘಟನೆ ನಡೆದಾಗ ಕಚೇರಿಯಲ್ಲೇ ಸುಬ್ಬರಾಜು ಅವರ ಇಬ್ಬರು ಮಕ್ಕಳಾದ ಶ್ರೀನಿವಾಸ (35) ಹಾಗೂ ಜಗದೀಶ್ವರ ರಾಜು (30) ದುಷ್ಕರ್ಮಿಗಳ ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರಾದರೂ, ಹತ್ತಿರ ಬಂದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ ಪಿಸ್ತೂಲು ಧಾರಿಗಳು ಆಟೋ ರಿಕ್ಷಾ ಏರಿ ಪರಾರಿಯಾದರು.
ಜಗದೀಶ ರಾಜ್ ಅಲ್ಲೇ ಇದ್ದ ಪೊಲೀಸ್ ಪೇದೆಗೆ ವಿಷಯ ತಿಳಿಸಿ ಮತ್ತೊಂದು ಆಟೋದಲ್ಲಿ ದುಷ್ಕರ್ಮಿಗಳನ್ನು ಆನಂದರಾವ್ ವೃತ್ತ, ಮಹಾರಾಣಿ ಕಾಲೇಜು ಮಾರ್ಗವಾಗಿ ಮೌರ್ಯ ಹೊಟೆಲ್ವರೆಗೂ ಹಿಂಬಾಲಿಸಿದರಾದರೂ, ದುಷ್ಕರ್ಮಿಗಳು ಮತ್ತೊಂದು ಆಟೋ ಹತ್ತಿ ತಪ್ಪಿಸಿಕೊಂಡರು.
ಮೊಬೈಲ್ ಪತ್ತೆ : ದುಷ್ಕರ್ಮಿಗಳು ಪರಾರಿಯಾಗಿದ್ದರೂ ಕೂಡ, ತಪ್ಪಿಸಿಕೊಳ್ಳುವ ಯತ್ನದಲ್ಲಿ ಒಬ್ಬ ಕೊಲೆಗಾರನ ಬಳಿ ಇದ್ದ ಮೊಬೈಲ್ ಫೋನ್ ಕಚೇರಿಯ ಎದುರು ಬಿದ್ದಿದ್ದು, ಇದರಿಂದ ಕೊಲೆಗಾರರ ಸುಳಿವು ಸಿಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ಆಯುಕ್ತ ಮಡಿಯಾಳ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಸುಬ್ಬರಾಜ್ ಅವರು, ಹಣಕಾಸಿನ ವಹಿವಾಟೂ ನಡೆಸುತ್ತಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications