ದ್ವಿದಳವಾಗಿದ್ದ ದಳ ಬಳಗಳ ವಿಲೀನಕ್ಕೆ ಹೆಗಡೆ ಹಸಿರು ನಿಶಾನೆ
ಬೆಂಗಳೂರು: ಇಬ್ಭಾಗವಾಗಿದ್ದ ಜನತಾದಳದ ಉಭಯ ಬಣಗಳ ವಿಲೀನಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ. ಇದರಿಂದಾಗಿ ಈ ವರೆಗೆ ಇದ್ದ ತೊಡಕು ನಿವಾರಣೆಯಾಗಿ ವಿಲೀನ ಪ್ರಕ್ರಿಯೆ ಸುಗಮವಾಗುವ ಹಂತ ತಲುಪಿದೆ.
ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದ ಹೆಗಡೆ ಅವರು, ಕೆಲವು ಷರತ್ತುಗಳನ್ನು ವಿಧಿಸಿ ವಿಲೀನಕ್ಕೆ ಸಹಮತ ಸೂಚಿಸಿದ್ದಾರೆ. ಶುಕ್ರವಾರ ಹೆಗಡೆ ಅವರ ನಿವಾಸದಲ್ಲಿ ನಡೆದ ದಳ (ಯು) ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಅಧಿಕೃತವಾದ ನಿರ್ಣಯ ಹಾಗೂ ಪ್ರಕಟಣೆ ಶನಿವಾರ ನಡೆಯಲಿರುವ ಸಂಯುಕ್ತ ಜನತಾದಳದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೊರಬೀಳಲಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಿರಿಯ ಮುಖಂಡರು ದೀರ್ಘಕಾಲ ಚರ್ಚೆ ನಡೆಸಿ, ವಿಲೀನಕ್ಕೆ ಕೊನೆಗೂ ಹೆಗಡೆ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಸಂಜೆ 6ಕ್ಕೆ ಆರಂಭವಾದ ಸಭೆ ಸುಮಾರು ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಈ ನಿರ್ಧಾರದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ವಿಲೀನದ ಮಾತುಕತೆಗೆ ಮಹತ್ವದ ಚಾಲನೆ ದೊರಕಿದೆ.
ಸಭೆಯಲ್ಲಿ ಪಕ್ಷದ ಅಧ್ಯಕ್ಷ ಬೈರೇಗೌಡ, ನಾಯಕರುಗಳಾದ ಪಿ.ಜಿ.ಆರ್. ಸಿಂಧ್ಯಾ, ಬಚ್ಚೇಗೌಡ, ಎಂ.ಪಿ. ಪ್ರಕಾಶ್, ನಾಡಗೌಡ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಆರಂಭದಲ್ಲಿ ಹೆಗಡೆ ಅವರು ದಳ ವಿಭಜನೆಗೆ ಮುನ್ನ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಮಕ್ಕಳಿಂದ ಆದ ಕಿರುಕುಳಗಳ ಬಗ್ಗೆ ವಿವರಿಸಿ, ಇಷ್ಟೆಲ್ಲಾ ನರಕಯಾತನೆ ಅನುಭವಿಸಿಯೂ ನಾವು ಮತ್ತೆ ಒಂದಾಗಬೇಕೆ? ನೀವು ಬೇಕಾದರೆ ಒಂದಾಗಿ ನಾನು ಒಬ್ಬಂಟಿಯಾಗೇ ಹೋರಾಡುತ್ತೇನೆ ಎಂದೂ ಪಟ್ಟು ಹಿಡಿದಿದ್ದರು.
ಆದರೆ, ದಳ (ಯು) ಮುಖಂಡರು ಪಕ್ಷದ ಭವಿಷ್ಯ ಹಾಗೂ ಪರ್ಯಾಯ ರಾಜಕೀಯ ಶಕ್ತಿಯ ಬಲವರ್ಧನೆಯ ದೃಷ್ಟಿಯಿಂದ ವಿಲೀನ ಅನಿವಾರ್ಯ ಎಂದು ಹೆಗಡೆ ಅವರ ಮನವೊಲೀಸಿದರು ಎಂದು ತಿಳಿದುಬಂದಿದೆ. ದಿವಂಗತ ಜೆ.ಎಚ್. ಪಟೇಲರ ಕೊನೆಯ ಆಸೆ ನೆರವೇರಿಸಲು, ವಿಲೀನಕ್ಕೆ ಕೊನೆಗೂ ಹೆಗಡೆ ಅವರು ಸಮ್ಮತಿಸಿದ ಹಿನ್ನೆಲೆಯಲ್ಲಿ ಏಟ್ರಿಯಾ ಹೊಟೆಲ್ನಲ್ಲಿ ಪಕ್ಷದ ಮುಖಂಡರು ಸಂತಸದ ಭೋಜನಕೂಟ ನಡೆಸಿದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications