Get Updates
Get notified of breaking news, exclusive insights, and must-see stories!

ಉತ್ತರ ಭಾರತದ ಚಳಿಗೆ 23 ಜನರ ಬಲಿ

ಬೆಂಗಳೂರು : ಉತ್ತರ ಭಾರತದಲ್ಲಿ ಭೀಕರ ಚಳಿ ಪ್ರಾರಂಭವಾಗಿದೆ. ತೀವ್ರತರವಾದ ಚಳಿಯನ್ನು ತಡೆಯಲಾರದೆ ಉತ್ತರ ಪ್ರದೇಶದಲ್ಲಿ ಗುರುವಾರ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ. ಬರೇಲಿಯಲ್ಲಿ 7, ಆಗ್ರಾ ಮತ್ತು ಅಂಬೇಡ್ಕರ್‌ ನಗರಗಳಲ್ಲಿ ತಲಾ ಐವರು ಸತ್ತಿದ್ದಾರೆ, ಬಲ್ಲಿಯಾ, ಸಿದ್ಧಾರ್ಥನಗರಗಳಲ್ಲಿ ಅನುಕ್ರಮವಾಗಿ ಮೂವರು ಹಾಗೂ ಇಬ್ಬರು ಸತ್ತಿದ್ದಾರೆ.

ಅಲ್ಲಿ ಕನಿಷ್ಠ ತಾಪಮಾನ ಮೈನಸ್‌ 15ರವರೆಗೆ ಮುಟ್ಟಿದೆ. ರಸ್ತೆಗಳೆಲ್ಲ ದಟ್ಟವಾದ ಹಿಮದಿಂದ ಆವೃತವಾಗಿವೆ. ಇನ್ನೂ ಎರಡು ಮೂರು ದಿನ ಪರಿಸ್ಥಿತಿ ಹೀಗೆ ಇರಲಿದೆ ಎಂದಿವೆ ವರದಿಗಳು. ಕರ್ನಾಟಕದ ಮಂದಿ ಈ ವಿಷಯದಲ್ಲಿ ಬಹಳ ಪುಣ್ಯವಂತರು. ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದಾಗ್ಯೂ ಕೂಡ, ಕರ್ನಾಟಕದ ಹವಾಮಾನದ ದೃಷ್ಟಿಯಿಂದ ಭೂಲೋಕದ ಸ್ವರ್ಗವೇ ಸರಿ.

ಆದರೂ, ನಮ್ಮ ದೇಶದ ಇತರ ರಾಜ್ಯಗಳ ಜನತೆ ಅನುಭವಿಸುತ್ತಿರುವ ನೋವಿನ ಸುದ್ದಿಯ ಕೇಳಿಯೇ ದುಃಖ ಉಮ್ಮಳಿಸುತ್ತದೆ. ಎಲ್ಲರೂ ಚೆನ್ನಾಗಿರಲಿ ಎಂದು ನಾವೆಲ್ಲರೂ ಹಾರೈಸೋಣ. If wishes were horses fools will ride ಎನ್ನುತ್ತೀರೇನು?

ಈ ಮಧ್ಯೆ ರಾಜ್ಯದಲ್ಲಿ ಮುಖ್ಯವಾಗಿ ಒಣಹವೆ ಇತ್ತು. ಕರಾವಳಿ ಹಾಗೂ ಒಳನಾಡಿನ ಅನೇಕ ಕಡೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಕಂಡು ಬಂದಿದೆ. ಕರಾವಳಿ ಹಾಗೂ ಒಳನಾಡಿನ ಅನೇಕ ಕಡೆ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ರಾಜ್ಯದ ಅತಿ ಕನಿಷ್ಠ ತಾಪಮಾನ 14.4 ಡಿಗ್ರಿ ಸೆಲ್ಸಿಯಸ್‌ ಗುಲ್ಬರ್ಗಾದಲ್ಲಿ ದಾಖಲಾಗಿದೆ.

ಮುನ್ಸೂಚನೆಯ ರೀತ್ಯ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ಹೆಚ್ಚಿನ ಬದಲಾವಣೆಗಳೇನೂ ಇಲ್ಲ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಶುಭ್ರ ಆಕಾಶ ಇದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+