ಹಾರಿಸಿ ಕಿನ್ನರ ಲೋಕಕ್ಕೆ ಹೋಗಿ ಬಂದೆ - ಪೈಲಟ್ ಕತ್ಯಾಲ್
ಇಮ್ರಾನ್ ಖುರೇಷಿ
ಬೆಂಗಳೂರು : ಅದೊಂದು ಕನಸಿನ ಪ್ರಯಾಣ - ಗುರುವಾರ ಬೆಳಿಗ್ಗೆ ಯಶಸ್ವಿ ಲಘು ಸಮರ ವಿಮಾನ (ಎಲ್ಸಿಎ) ಹಾರಾಟದ ನಂತರ ಭಾವೋದ್ರೇಕ, ರೋಮಾಂಚನದಲ್ಲಿ ಮುಳುಗಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಕತ್ಯಾಲ್ ಇದಕ್ಕಿಂತ ಬೇರೇನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ .
ವಿಶ್ವದ ಅತ್ಯಂತ ಚಿಕ್ಕ ಹಾಗೂ ಹಗುರ ಯುದ್ಧ ವಿಮಾನ ಎನ್ನಿಸಿರುವ ಒಂದೇ ಸೀಟಿನ ಎಲ್ಸಿಎ ಸಂಪೂರ್ಣ ಸೇವೆಗಿಳಿಯುವುದೇ ತಡ, ಅದು ಭಾರತೀಯ ವಾಯುದಳದ ಸಮರ ವಿಮಾನಗಳ ನಾಯಕನಾಗುವ ಬಗ್ಗೆ ಐಎಎಫ್ ಅಧಿಕಾರಿಗಳಿಗೆ ತುಂಬು ವಿಶ್ವಾಸ. 2015 ರ ಹೊತ್ತಿಗೆ ಎಲ್ಸಿಎ ವಾಯುಪಡೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ ಎಂದು ರಕ್ಷಣಾ ಮೂಲಗಳು ಹೇಳುತ್ತಿವೆ. ಇದು ಸಾಧ್ಯವಾದಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಮಿಗ್(ಎಂಐಜಿ) 21 ಯುದ್ಧ ವಿಮಾನಗಳಿಗೆ ವಿಶ್ರಾಂತಿ ಸಾಧ್ಯವಾಗುತ್ತದೆ.
ಗುರುವಾರ ಬೆಳಿಗ್ಗೆ ಕತ್ಯಾಲ್ ಎಲ್ಸಿಎ ಏರಿದಾಗ ಸಮಯ 10 ಗಂಟೆ 20 ನಿಮಿಷ. ಗಂಟೆಗೆ 400 ಕಿಮೀ ವೇಗದಲ್ಲಿ ಚಿಮ್ಮಿದ ವಿಮಾನ 20 ನಿಮಿಷಗಳ ನಂತರ ಭೂಸ್ಪರ್ಶ ಮಾಡುವ ಮುನ್ನ ಬಾನಂಗಳದಲ್ಲಿ 3500 ಮೀ ಏರಿತ್ತು . ಸಾಮಾನ್ಯವಾಗಿ ಮಿರೇಜ್ 2000 ಫೈಟರ್ ಬಾಂಬರ್ ಚಲಾಯಿಸುವ ಕತ್ಯಾಲ್ ಭಾರತೀಯ ವಾಯುಪಡೆಯ (ಐಎಎಫ್) ಹಿರಿಯ ಪೈಲಟ್. ಯಶಸ್ವಿ ಹಾರಾಟದ ನಂತರ ಆತ ಎಲ್ಸಿಎಯಿಂದ ಹೊರಬರುವುದನ್ನೇ ಕಾಯುತ್ತಿದ್ದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಕತ್ಯಾಲ್ರನ್ನು ಅಭಿನಂದಿಸಿದ ಮೊದಲಿಗರಾದರು. ಆ ನಂತರದ ಪಾಳಿ, ಎಲ್ಸಿಎ ಕಾರ್ಯ ಕ್ಷಮತೆಯನ್ನು ಹತ್ತಿರದಿಂದ ವೀಕ್ಷಿಸಲು ಮಿರೇಜ್ 2000 ನಲ್ಲಿ ಎಲ್ಸಿಎಯನ್ನು ಹಿಂಬಾಲಿಸಿದ್ದ ಏರ್ ಚೀಫ್ ಮಾರ್ಷಲ್ ಎ.ವೈ. ಟಿಪ್ನಿಸ್ ಹಾಗೂ ಇತರ ಐಎಎಫ್ನ ಉನ್ನತ ಅಧಿಕಾರಿಗಳದ್ದು .
ಏಳು ವೆಪನ್ ಸ್ಟೇಷನ್ಗಳನ್ನು ಹೊತ್ತೊಯ್ಯಬಲ್ಲ ಈ ಫೈಟರ್ ಗಾಳಿಯಲ್ಲಿದ್ದಾಗಲೇ ಮರು ಇಂಧನ ಪೂರೈಸಿಕೊಳ್ಳಬಲ್ಲದು. ಕಡಿಮೆ ಜಾಗೆಯಿದ್ದಾಗಲೂ ಸುರಕ್ಷಿತವಾಗಿ ಇಳಿಯಬಲ್ಲದು ಎಂದು ಮೂಲಗಳು ತಿಳಿಸಿವೆ.
ಎಲ್ಸಿಎಯ ಪರಿಕಲ್ಪನೆ ಸಾಧ್ಯವಾದದ್ದು 1968 ರಲ್ಲಿ . ಆದರೆ ಕಾರ್ಯರೂಪಕ್ಕೆ ಚಾಲನೆ ಸಿಕ್ಕಿದ್ದ್ದು 1983 ರಲ್ಲಿ . ಅನೇಕ ಅಡೆತಡೆಗಳನ್ನು ದಾಟಿಕೊಂಡು ಮೈದಾಳಿರುವ ಎಲ್ಸಿಎ ಇಂದು ಪೂರ್ಣ ರೂಪದಲ್ಲಿ ನಮ್ಮ ಮುಂದಿದೆ. ಅದರ ಅಭಿವೃದ್ಧಿಗಾಗಿ ಸುಮಾರು 30 ಬಿಲಿಯನ್ ರುಪಾಯಿ ಖರ್ಚಾಗಿದೆ.
ಗುರುವಾರ ಗಗನಕ್ಕೇರಿ ಯಶಸ್ವಿ ಹಾರಾಟ ನಡೆಸಿದ ಎಲ್ಸಿಎ ಭೂಸ್ಪರ್ಶ ಮಾಡಿದ್ದೇ ತಡ, ಯಶಸ್ಸಿಗಾಗಿ ದುಡಿದಿದ್ದ ಅನೇಕರ ಎದೆಗಳು ಸಾರ್ಥಕ್ಯದಿಂದ ಭಾರವಾದವು. ನೆರೆದಿದ್ದ ಎನ್ಡಿಎ ಅಧಿಕಾರಿಗಳ ಹರ್ಷೋದ್ಗಾರಗಳು ಎಲ್ಸಿಎ ಸಾಗಿ ಬಂದ ಹಾದಿಯುದ್ದವನ್ನೂ ತುಂಬಿದವು. ಅರ್ಥಾತ್ ಅದೊಂದು ಅಮೃತ ಘಳಿಗೆ.
(ಐಎಎನ್ಎಸ್)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications