ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಭಾವನಾತ್ಮಕ ಹಾಗೂ ವಾಸ್ತವಿಕ ಜಗತ್ತುಗಳ ನಡುವೆ ಸಮತೋಲನ ತಪ್ಪದಂತೆ ನೋಡಿಕೊಳ್ಳಿ. ಸ್ವಲ್ಪ ಹೆಚ್ಚು ಕಮ್ಮಿಯಾದರೆ ಹಳ್ಳವನ್ನು ನಾವೇ ತೋಡಿಕೊಂಡಂತಾಗುತ್ತದೆ.ವೃಷಭ :ಜವಾಬ್ದಾರಿಗೆ ಬೆನ್ನು ತೋರಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ . ಒಲ್ಲದೆ ತೊಡಗಿಕೊಳ್ಳುವ ಈ ಕೆಲಸಗಳು ನಿಮ್ಮ ಇಮೇಜನ್ನು ಹೆಚ್ಚಿಸುತ್ತವೆ.
ಮಿಥುನ : ಸಂಗಾತಿಯಾಂದಿಗೆ ಸಮಸ್ಯೆಗಳನ್ನು ಚರ್ಚಿಸಿ. ಆಕೆ ನಿಮ್ಮ ಕಷ್ಟದ ಹೊತ್ತಿನಲ್ಲಿ ವಹಿಸುವ ಸಂಯಮ, ತೋರುವ ಪ್ರೌಢತೆಗೆ ನೀವು ಬೆಚ್ಚಿ ಬೀಳುವುದೊಂದೇ ಬಾಕಿ.
ಕಟಕ : ಅಪರೂಪದ ದಿನ. ವೃತ್ತಿಯಲ್ಲಿ ಮಾತ್ರವಲ್ಲದೇ ಅಡಿಯಿಟ್ಟಲ್ಲೆಲ್ಲಾ ಯಶಸ್ಸನ್ನೇ ಎಡವುತ್ತೀರಿ. ಈ ದಿನದ ಮಟ್ಟಿಗೆ ನೀವು ತುಂಬಾ ಅದೃಷ್ಟವಂತರು.
ಸಿಂಹ : ನಾ ನಿನಗಾದರೆ ನೀನೆನಗೆ ಸಹಕಾರಿ ಮನೋಭಾವದಲ್ಲಿ ಜವಾಬ್ದಾರಿಯನ್ನು ಪೂರೈಸುವುದು ಒಳ್ಳೆಯದು. ಗೆಳೆಯರಿಗೆ ಸಹಾಯ ಮಾಡುವಲ್ಲಿ ಮುಕ್ತ ಮನಸ್ಸಿನವರಾಗಿರಿ.
ಕನ್ಯಾ : ಅವರು ನಿಮ್ಮನ್ನು ಗುರ್ತಿಸಬೇಕೆನ್ನುವ ನಿಮ್ಮ ಅಪೇಕ್ಷೆ ಈಡೇರಲಿದೆ. ನೀವು ಎಲ್ಲಾ ಆಕರ್ಷಣೆಯ ಕೇಂದ್ರವಾಗಿರುತ್ತೀರಿ ಹಾಗೂ ಎಲ್ಲವನ್ನೂ ನಿರ್ಧರಿಸುವ ಸ್ಥಾನದಲ್ಲಿದ್ದೀರಿ.
ತುಲಾ : ಸಂಗಾತಿ ನಿಮ್ಮ ವ್ಯಕ್ತಿತ್ವವನ್ನು ಗೌರವಿಸುತ್ತಿಲ್ಲವೆನ್ನುವ ಕೀಳರಿಮೆ ಬೇಡ. ನಿಮ್ಮ ಭಾವ ಜಗತ್ತಿಗೂ ಅವರ ಭಾವ ಜಗತ್ತಿಗೂ ತುಂಬಾ ಅಂತರವಿರುವುದರಿಂದ ಈ ವ್ಯತ್ಯಾಸವನ್ನು ಸಹಿಸಿಕೊಳ್ಳುವುದು ಅನಿವಾರ್ಯ.
ವೃಶ್ಚಿಕ : ಕುಟುಂಬದ ಚಟುವಟಿಕೆಗಳಲ್ಲೇ ಈ ಹೊತ್ತು ವ್ಯಸ್ತರಾಗಿರುತ್ತೀರಿ. ಬಗೆ ಹರಿಯಲಾಗದೆ ಕಾಲ ಬಳ್ಳಿಯಾಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದು ಸಕಾಲ.
ಧನಸ್ಸು : ನಿಮಗೆ ಸಹಾಯ ಮಾಡಲೆಂದೇ ಸಾಲುಗಟ್ಟಿ ನಿಂತಿರುವವರ ಸಂಖ್ಯೆ ಸಾಕಷ್ಟಿದೆ. ಸಹಾಯ ಪಡೆಯುವ ಮುನ್ನ ಅದರಲ್ಲೂ ವಿರುದ್ಧ ಲಿಂಗಿಗಳಿಂದ ಮತ್ತೊಮ್ಮೆ ಯೋಚಿಸಿ.
ಮಕರ : ಕೈ ಮೀರಿದ ಘಟನೆಗಳಿಗಾಗಿ ಕೊರಗುವುದು ಬೇಡ. ನಿಮ್ಮ ಅಂತರ್ವಾಣಿಯ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಇಷ್ಟ ದೈವವನ್ನು ಪ್ರಾರ್ಥಿಸಿ.
ಕುಂಭ : ನಿಮ್ಮ ನಿಲುವುಗಳನ್ನು ಇತರರು ಒಪ್ಪಲಿಲ್ಲವೆಂದು ನೈತಿಕವಾಗಿ ಅಧೀರರಾಗುವುದು ಬೇಡ. ವಿಚಾರಗಳು ಪ್ರಬಲವಾದ್ದರಿಂದ ಒಂದಲ್ಲಾ ಒಂದು ದಿನ ನಿಮ್ಮ ವರ್ತುಲದೊಳಗೆ ಅವರು ಪ್ರವೇಶಿಸುವುದು ನಿಶ್ಚಿತ.
ಮೀನ : ಹೊಸ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುವ ಮುನ್ನಾ ಕಾಯ್ದು ನೋಡುವುದೊಳ್ಳೆಯದು. ಭಾವನಾತ್ಮಕ ನಿರ್ಧಾರಗಳಿಂದ ನಷ್ಟವಾಗುವ ಸಂಭವಗಳಿವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications