ಲಘು ಸಮರ ವಿಮಾನ ಪರೀಕ್ಷಾರ್ಥ ಹಾರಾಟದ ಪ್ರಚಂಡ ಯಶಸ್ಸು
ಬೆಂಗಳೂರು : ಸ್ವದೇಶೀಯವಾಗಿ ಸಿದ್ಧವಾದ ವಿಶ್ವದ ಅತಿ ಚಿಕ್ಕ ಹಾಗೂ ಅತ್ಯಂತ ಹಗುರ ಸಮರ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಬಿಳಿಯ ಬಣ್ಣದ ಈ ಹಗುರ ವಿಮಾನ ಇಲ್ಲಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಮುಗಿಲಿನತ್ತ ಜಿಗಿದು 20 ನಿಮಿಷಗಳ ಯಶಸ್ವೀ ಹಾರಾಟದ ನಂತರ ಸುರಕ್ಷಿತವಾಗಿ ಧರೆಗಿಳಿಯಿತು.
ಈ ವಿಮಾನದೊಂದಿಗೆ ಎರಡು ಮಿರೇಜ್ 2000 ವಿಮಾನಗಳೂ ಹಾರಾಟ ನಡೆಸಿದವು. ಗುರುವಾರ ಅನುಕೂಲಕರವಾಗಿದ್ದ ಹದ ಬಿಸಿಲಿನ ವಾತಾವರಣದಲ್ಲಿ ಬೆಳಗ್ಗೆ 10.20ಕ್ಕೆ ಬಾನಿನತ್ತ ಹಾರಿದ ಈ ಲಘು ಯುದ್ಧ ವಿಮಾನ 10.40ರವರೆಗೆ ಬಾನಂಗಳದಲ್ಲಿ ಅಡ್ಡಾಡಿ ಸುರಕ್ಷಿತವಾಗಿ ಧರೆಗಿಳಿಯಿತು.
ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರು ಏರ್ ಮಾರ್ಷಲ್ ಎ.ವೈ. ಪಿಫ್ನಿಸ್ ಅವರೊಂದಿಗೆ ಮಿರೇಜ್ ವಿಮಾನದಲ್ಲಿ ಕುಳಿತು ಬಹು ಹತ್ತಿರದಿಂದ ಈ ಲಘು ಸಮರ ವಿಮಾನದ ಹಾರಟವನ್ನು ವೀಕ್ಷಿಸಿದರು. ಕೇಂದ್ರ ಸರಕಾರದ ವೈಜ್ಞಾನಿಕ ಸಲಹೆಗಾರರಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೂ ಕೂಡ ಹಲವು ವಿಜ್ಞಾನಿಗಳೊಂದಿಗೆ ಪ್ರಪ್ರಥಮ ಲಘು ಸಮರ ವಿಮಾನದ ಹಾರಟವನ್ನು ಕಣ್ಣಾರೆ ಕಂಡರು.
ಆದರೆ, ಈ ಯೋಗ ಮಾಧ್ಯಮ ಪ್ರತಿನಿಧಿಗಳಿಗೆ ದೊರಕಲಿಲ್ಲ. ವಿಡಿಯೋ ಕ್ಯಾಮರಾಗಳನ್ನು ಹೊತ್ತ ದೂರದರ್ಶನ ಚಾನೆಲ್ಗಳ ವರದಿಗಾರರು, ಛಾಯಾಗ್ರಾಹಕರು ದೂರದಿಂದಲೇ ಈ ಸಮರ ವಿಮಾನ ವಿಶ್ವದ ಹೊಸ ಮೈಲಿಗಲ್ಲಾದ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಬೇಕಾಯಿತು. ಸಮರ ವಿಮಾನವು ಅದ್ಭುತವಾಗಿ ಮೇಲೇರಿ ಅಷ್ಟೇ ಆಕರ್ಷಕವಾಗಿ ನೆಲಕ್ಕಿಳಿಯಿತು. ಈ ಸಾಧನೆಗೆ ರಾಷ್ಟ್ರದ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ವಿಮಾನದ ಬಗ್ಗೆ : 8.2 ಮೀಟರ್ ರೆಕ್ಕೆಗಳನ್ನು ಹೊಂದಿರುವ ಈ ವಿಮಾನದ ಉದ್ದ 13.2 ಮೀಟರ್ಗಳು. ಎತ್ತರ 4.4 ಮೀಟರ್ ಆದರೆ, ತೂಕ ಕೇವಲ 8.5 ಟನ್ಗಳು. ಈ ವಿಮಾನದ ಶಸ್ತ್ರಾಸ್ತ್ರ ಹೊರುವ ಸಾಮರ್ಥ್ಯ ನಾಲ್ಕು ಟನ್ಗಳಷ್ಟು. ವಿಶ್ವದಲ್ಲಿ ಈ ವಿಮಾನಕ್ಕೆ ಸರಿಸಾಟಿ ಎನ್ನುವುದಿದ್ದರೆ ಅದು ಸ್ವೀಡನ್ನ ಎಸ್ಎಎಬಿ ಮಿಲಿಟರಿಯ ಗ್ರಿಪ್ಪಿನ್ ನಿರ್ಮಿತ ಜೆಎಎಸ್ -39.
(ಯು.ಎನ್.ಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications