ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಅನಿರೀಕ್ಷಿತ ಅಭ್ಯಾಗತರೊಬ್ಬರ ಆಗಮನ ನಿಮಗೆ ಭಾರೀ ಆಶ್ಚರ್ಯ ಉಂಟು ಮಾಡಲಿದೆ. ನಿಮ್ಮ ಈ ಹೊತ್ತಿನ ಅಮೂಲ್ಯ ಸಮಯ ಅವರಿಗೇ ಮೀಸಲು.ವೃಷಭ :ಅಧ್ಯಯನದಲ್ಲಿ ಮುಳುಗಿರುವ ನಿಮ್ಮ ಮನಸ್ಸಿಗೆ ಮುದವೆನಿಸುವಂಥಾ ಸಂಗತಿಗಳು ಇಂದು ಬಹಳಷ್ಟಿವೆ. ಅದರಲ್ಲಿ ಇಷ್ಟಪಾತ್ರರೊಂದಿಗೆ ಕಳೆಯುವ ಸುಂದರ ಸಂಜೆಯೂ ಒಂದು.
ಮಿಥುನ : ನೀವೇನು ಮಾಡುತ್ತಿದ್ದೀರಿ ಅನ್ನುವುದನ್ನು ನಿಮ್ಮ ಗೆಳೆಯರು ನಿಕಟವಾಗಿ ಗಮನಿಸುತ್ತಿದ್ದಾರೆ. ಗೃಹಾಧಾರಿತ ಉದ್ದಿಮೆಗಳಲ್ಲಿ ಯಶಸ್ಸಿನ ದಿನ.
ಕಟಕ : ಸಾಲ ಕೊಟ್ಟು ಸ್ನೇಹ ಕಳೆದುಕೊಳ್ಳಬಾರದು ಅನ್ನುವುದನ್ನು ನೀವು ಅರ್ಥ ಮಾಡಿಕೊಂಡಂತಿಲ್ಲ . ಹಣ ವಾಪಸ್ಸು ಬರುವುದಿಲ್ಲ ವಾದ್ದರಿಂದ ಅದರ ಯೋಚನೆ ಬಿಟ್ಟು ಬಿಡುವುದೇ ಒಳ್ಳೆಯದು.
ಸಿಂಹ : ನಿಮ್ಮ ಬಗೆಗಿರುವ ಗಾಳಿ ಸುದ್ದಿಗಳಿಗೆ ತೆರೆಯೆಳೆಯಲು ಇಂದು ಸುದಿನ. ಅಷ್ಟಕ್ಕೂ ನೀವೇನೂ ಲೋಕಹಾನಿಯಲ್ಲಿ ತೊಡಗಿಲ್ಲವಾದ್ದರಿಂದ ಸುಮ್ಮನೆ ಹಿಂಜರಿಕೆ ಬೇಡ.
ಕನ್ಯಾ : ಬರವಣಿಗೆ ಕೆಲಸದಲ್ಲಿ ಹೆಸರು, ಹಣ ಕಟ್ಟಿಟ್ಟ ಬುತ್ತಿ. ಸೃಜನಶೀಲ ಚಟುವಟಿಕೆಗಳನ್ನು ಪ್ರಾರಂಭಿಸುವುದಿದ್ದರೆ ಇಂದೇ ಪ್ರಾರಂಭಿಸಿ.
ತುಲಾ : ಸುಂದರ ರಸ ಸಂಜೆ ನಿಮ್ಮ ಪಾಲಿಗಿದೆ. ರಾತ್ರಿ ನಿಮ್ಮ ಸಂಗಾತಿಯಿಂದ ಅವಿಸ್ಮರಣೀಯ ಕೊಡುಗೆ ನಿಮಗಾಗಿ ಕಾದಿದೆ. ಮನಸ್ಸಿಗೆ ಉಲ್ಲಾಸ ತುಂಬುವ ದಿನ.
ವೃಶ್ಚಿಕ : ಕುಟುಂಬದ ವ್ಯವಹಾರಗಳಲ್ಲಿ ಅಪ ಯಶಸ್ಸು , ನೆಂಟರಿಷ್ಟರೊಂದಿಗೆ ಮನಸ್ತಾಪ. ಈ ಹೊತ್ತು ಮೌನವಾಗಿದ್ದಷ್ಟೂ ನೆಮ್ಮದಿ ನಿಮಗೆ ಹೆಚ್ಚುತ್ತದೆ.
ಧನಸ್ಸು : ಯಂತ್ರೋಪಕರಣಗಳ ರಿಪೇರಿ ಕೆಲಸದಲ್ಲಿ ಎಚ್ಚರಿಕೆ ವಹಿಸಿ. ರಸ್ತೆಯಲ್ಲಿ ಅಡ್ಡಾಡುವಾಗಲೂ ಮನಸ್ಸು ನಿಮ್ಮ ನಿಯಂತ್ರಣದಲ್ಲೇ ಇರಲಿ.
ಮಕರ : ವಾದ ಮಾಡುವುದರಿಂದ ಏನೂ ಉಪಯೋಗವಿಲ್ಲ . ಇಷ್ಟಕ್ಕೂ ನಿಮ್ಮ ಕೆಲಸವ ನೀವೇ ಮಾಡಬೇಕಾದ್ದು ಅನಿವಾರ್ಯವಾದ್ದರಿಂದ ಮಾತನಾಡುವುದು ವೇಳೆ ಹಾಳು ಅಷ್ಟೇ.
ಕುಂಭ : ಸಂಗಾತಿಯಾಂದಿಗೆ ವ್ಯವಹರಿಸುವಾಗ ವಸ್ತು ಸ್ಥಿತಿಗೆ ಗಮನ ಕೊಡಿ. ಅವರು ಹೇಳುವುದರಲ್ಲಿ ನಿಮಗೆ ನಿಲುಕಲಾಗದ ಸತ್ಯಗಳಿವೆ. ಪ್ರೀತಿಯನ್ನು ಗೆಲ್ಲಲು ಪ್ರೀತಿಯಿಂದ ಮಾತ್ರ ಸಾಧ್ಯ, ಅಲ್ಲವೇ.
ಮೀನ : ಷಾಪಿಂಗ್ಗೆ ಹೊರಡುವ ಮುನ್ನ ನಿಮ್ಮ ಅಗತ್ಯಗಳೇನು ಅನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ಅನಗತ್ಯ ವೆಚ್ಚಗಳಗೆ ಸಿಲುಕಿ ನಾಳೆಯ ಹಾಳು ಮಾಡಿಕೊಳ್ಳುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications