ಬೆಂಗಳೂರು ಪ್ರೆಸ್ ತಂದಿದೆ ನಿಮ್ಮ ಮನೆ ಗೋಡೆಗೊಂದು ಮಲ್ಲಿಗೆ
ಬೆಂಗಳೂರು : ಕನ್ನಡಿಗರ ವಿವಿಧ ಅಭಿರುಚಿಗೆ ತಕ್ಕಂತೆ ಮಲ್ಲಿಗೆ ದರ್ಶಿನಿ ಮಾಲೆಯಲ್ಲಿ ವಿವಿಧ ಬಗೆಯ ಕ್ಯಾಲೆಂಡರ್ಗಳನ್ನು ಕನ್ನಡ ಕ್ಯಾಲೆಂಡರ್ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಬೆಂಗಳೂರು ಪ್ರೆಸ್ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕಿಶೋರ ದರ್ಶಿನಿ, ವನಿತಾ ದರ್ಶಿನಿ, ಕೃಷಿ ದರ್ಶಿನಿ, ಸಾಹಿತ್ಯ ದರ್ಶಿನಿ, ವ್ರತ ದರ್ಶಿನಿ ಹಾಗೂ ದೇವಾಲಯ ದರ್ಶಿನಿಗಳನ್ನು ಮಲ್ಲಿಗೆ ದರ್ಶಿನಿ ಮಾಲೆಯಲ್ಲಿ ಬೆಂಗಳೂರು ಪ್ರೆಸ್ ಪರಿಚಯಿಸಿದೆ ಎಂದು ಬೆಂಗಳೂರು ಪ್ರೆಸ್ನ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ಅನಂತ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಯಾಂದು ಕ್ಯಾಲೆಂಡರ್ಗಳು ಆಯಾ ವಿಷಯಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಒಳಗೊಂಡಿವೆ. ಹಿರಿಯ ವಿಷಯ ತಜ್ಞರು ಈ ಲೇಖನಗಳನ್ನು ಬರೆದಿದ್ದಾರೆ. ಡಾ.ಎಚ್.ಎಸ್. ಶ್ರೀಮತಿಯವರು ಮಹಿಳೆಯರಿಗೆ ಉಪಯುಕ್ತವಾದ ಮಾಹಿತಿಗಳನ್ನು ವನಿತಾ ದರ್ಶನದಲ್ಲಿ ಒದಗಿಸಿದ್ದಾರೆ. ಮಳೆ, ನಾಟಿ ಮುಂತಾದ ಬೇಸಾಯಕ್ಕೆ ಸಂಬಂಧಿಸಿದ ವಿಷಯಗಳನ್ನು ಕೃಷಿ ದರ್ಶನದಲ್ಲಿ ಕೃಷಿ ತಜ್ಞ ಗುಂಡಪ್ಪನವರು ನೀಡಿದ್ದಾರೆ. ಡಾ. ಮಂಗಳಾ ಪ್ರಿಯದರ್ಶಿನಿ ಮತ್ತು ಚಿ. ಶ್ರೀನಿವಾಸರಾಜು ಅವರು ಹೊಸಗನ್ನಡ ಸಾಹಿತ್ಯ ಚರಿತ್ರೆ, ಹಾಗೂ ಪ್ರಮುಖ ಬರಹಗಾರರ ಜೀವನಚಿತ್ರಗಳನ್ನು ಸಾಹಿತ್ಯದರ್ಶನದಲ್ಲಿ ಸಂಪಾದಿಸಿದ್ದಾರೆ. ದೇವಾಲಯ ದರ್ಶಿನಿಯಲ್ಲಿ ದೇವಾಲಯಗಳ ಬಗ್ಗೆ ಮಾಹಿತಿಯಿದ್ದರೆ, ಕಿಶೋರ ದರ್ಶಿನಿಯಲ್ಲಿ ಮಕ್ಕಳಿಗೆ ಕಾಮಿಕ್ಸ್ ಕಥೆಗಳಿವೆ. ಇನ್ನು ಎಲ್ಲಾ ವ್ರತಗಳ ಬಗೆಗಿನ ಮಾಹಿತಿ ವ್ರತ ದರ್ಶಿನಿಯಲ್ಲಿ ಲಭ್ಯ. ಅಂದಹಾಗೆ ಪ್ರತಿ ಕ್ಯಾಲೆಂಡರ್ನ ಬೆಲೆ 14 ರುಪಾಯಿ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications