ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ. ಭೂ ವ್ಯವಹಾರದಲ್ಲಿ ಅಸಮಾಧಾನ. ವ್ಯಾಪಾರದಲ್ಲಿ ಹಿನ್ನೆಡೆ. ಕುಲದೇವರ ಹರಕೆ ತೀರಿಸಿದರೆ ಶುಭ.

ವೃಷಭ :ಅನಾರೋಗ್ಯ ಎಲ್ಲ ಲವಲವಿಕೆಯನ್ನೂ ಮಂಕಾಗಿಸಿದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬುದನ್ನು ಮರೆಯದಿದ್ದರೆ ಒಳ್ಳೆಯದು.

ಮಿಥುನ : ಹೊಸ ವರ್ಷದ ಸಂಭ್ರಮಕ್ಕೆ ಹಣಕಾಸಿನ ಮುಗ್ಗಟ್ಟು. ಇದು ಕ್ಷಣಿಕ. ದೂರಾಲೋಚನೆಯಿಂದ ಕಾರ್ಯಸಿದ್ಧಿ. ಯೋಚನಾ ಲಹರಿ ಬದಲಿಸಿ ಮುಂದಡಿ ಇಡಿ.

ಕಟಕ : ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಇದೆ. ದೂರ ಪ್ರಯಾಣ ಸಂಭವ. ಮಿತ್ರರಿಂದ ಕಾರ್ಯಕ್ಷೇತ್ರದಲ್ಲಿ ಅನುಕೂಲ. ವಿದೇಶ ಪ್ರವಾಸ ಯೋಗ.

ಸಿಂಹ : ತಾಂತ್ರಿಕ ಕ್ಷೇತ್ರದಲ್ಲಿ ಭಾರಿ ಯಶಸ್ಸು. ಇಷ್ಟು ದಿನ ಮಾಡಿದ ಕೆಲಸಕ್ಕೆ ಸೂಕ್ತ ಪ್ರತಿಫಲ ದೊರಕುವ ಕಾಲ. ನಿಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಿದರೆ, ಪ್ರಶಸ್ತಿ - ಪಾರಿತೋಷಕ ಕಟ್ಟಿಟ್ಟಬುತ್ತಿ.

ಕನ್ಯಾ : ಸಂಗಾತಿಯಿಂದ ಆನಂದವಿದೆ. ಪ್ರಣಯಿಗಳಿಗೆ ಆನಂದವೋ ಆನಂದ. ಅನಿರೀಕ್ಷಿತ ಅತಿಥಿಗಳ ಆಗಮನ. ಹೊಸ ಯೋಚನೆಗಳಿಗೆ ಯಶಸ್ಸು.

ತುಲಾ : ಕುಳಿತಲ್ಲೇ ಹೊಸ ಸಾಮ್ರಾಜ್ಯ ಕಟ್ಟುವ ಯೋಚನೆ ಬಿಟ್ಟುಬಿಡಿ. ಕೈ ಕೆಸರಾದರೆ ಬಾಯಿ ಮೊಸರು. ಶ್ರಮ ಪಟ್ಟರೆ ತಕ್ಕ ಪ್ರತಿಫಲ ದೊರಕೀತು. ಸಮಯದ ಬೊಂಬೆಯಾಗಿದ್ದೀರಿ. ಮೈಕೊಡವಿ ಮೇಲೇಳಿ.

ವೃಶ್ಚಿಕ : ಕೈಗೆ ಸಿಕ್ಕದ ದ್ರಾಕ್ಷಿ ಹುಳಿ ಎನ್ನುವ ತತ್ವ ಬಿಟ್ಟು ಬಿಡಿ, ಹಾಗೆಂದು ಗಗನ ಕುಸುಮಕ್ಕೂ ಕೈಚಾಚದಿರಿ. ನಿಮ್ಮ ಇತಿ ಮಿತಿಯಲ್ಲೇ ಸಾಧನೆಯ ಮೆಟ್ಟಿಲನ್ನೇರಲು ಪ್ರಯತ್ನಿಸಿ. ಗಣಪತಿಯ ಆರಾಧನೆಯಿಂದ ಯಶಸ್ಸು.

ಧನಸ್ಸು : ಎಲ್ಲ ವ್ಯವಹಾರದಲ್ಲೂ ಅನುಕೂಲಕರ ವಾತಾವರಣ ಇದೆ. ವಿಪರೀತ ಕೆಲಸ, ಖರ್ಚು ಎಂದು ಹಿಂಜರಿಯದಿರಿ. ವ್ಯಾಪಾರಿಗಳಿಗೆ ಲಕ್ಷ್ಮೀ ಕೃಪಾಕಟಾಕ್ಷ ಇದೆ.

ಮಕರ : ಮಾನಸಿಕ ಗೊಂದಲದ ನಡುವೆಯೂ ಪ್ರಯಾಣ ಯೋಗ ಇದೆ. ಪ್ರವಾಸದಿಂದ ಲಾಭವೂ ಇದೆ. ಕೌಟುಂಬಿಕ ವ್ಯವಹಾರದಲ್ಲಿ ಜಯವಿದೆ. ಪಿತ್ರಾರ್ಜಿತ ಆಸ್ತಿ ನಿಮ್ಮದಾಗಲಿದೆ.

ಕುಂಭ : ನಿಮ್ಮ ಬುದ್ಧಿಗೆ ಬಂಗಾರದ ಬೆಲೆ ಇದೆ. ಸೂಕ್ತವಾದ ಬಳಕೆಯ ಬಗ್ಗೆ ಚಿಂತಿಸಿ. ಚಿನ್ನದ ಸೂಜಿ ಎಂದು ಕಣ್ಣು ಚುಚ್ಚಿಕೊಳ್ಳಲು ಸಾಧ್ಯವೇ? ಭೂ ವ್ಯವಹಾರದಲ್ಲಿ ಪ್ರಗತಿ.

ಮೀನ : ಹಳೆಯ ಸಮಸ್ಯೆಗಳೆಲ್ಲವೂ ಪರಿಹಾರವಾಗಲಿವೆ. ಧನಯೋಗವಿದೆ. ಬುದ್ಧಿ ಚಾತುರ್ಯದಿಂದ ಶುಭ ಫಲ. ಎಲ್ಲ ನೀವಂದುಕೊಂಡಂತೆಯೇ ನಡೆಯುತ್ತಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X