ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಲ್ಲಿ ಮೈಸೂರು ಅನಂತ ಸ್ವಾಮಿ ಸಂಸ್ಮರಣೆ
ಬೆಂಗಳೂರು : ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿ, ಜಯಪ್ರಿಯತೆ ತಂದುಕೊಟ್ಟ ದಿ. ಮೈಸೂರು ಅನಂತಸ್ವಾಮಿ ಅವರ ಸಂಸ್ಮರಣಾ ಕಾರ್ಯಕ್ರಮ ಶನಿವಾರ ಬೆಂಗಳೂರಿನಲ್ಲಿ ಜರುಗಿತು. ಹೊಂಬಾಳೆ ಸಂಸ್ಥೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಅನಂತ ನಮನ’ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಮೈಸೂರು ಅನಂತಸ್ವಾಮಿ ಅವರ ಪುತ್ರ ರಾಜು ಅನಂತಸ್ವಾಮಿ ಅವರ ಗಾನಸುಧೆ ಕೇಳುಗರನ್ನು ರಂಜಿಸಿತು.
ಅನಂತಸ್ವಾಮಿಯವರು ಹಾಡುತ್ತಿದ್ದ ಜನಪ್ರಿಯ ಭಾವಗೀತೆಗಳಾದ ಅಂತರಂಗದಾಮೃದಂಗ, ಅಯ್ನೋರ್ ಹೊಲದಲ್ಲಿ ಚಾಕ್ರಿ ಮಾಡ್ತಾ..., ಬದುಕು ಜಟಕಾ ಬಂಡಿ, ನಾನು ಕೋಳೀಕೆ ರಂಗ... ಮೊದಲಾದ 20ಕ್ಕೂ ಹೆಚ್ಚು ಗೀತೆಗಳ ಗಾಯನ ಪ್ರೇಕ್ಷಕರಿಗೆ ಕರ್ಣಾಮೃತವೀಯಿತು.
ಹೊಂಬಾಳೆ ಸಂಸ್ಥೆಯ ಅಧ್ಯಕ್ಷ ಎಚ್. ಫಲ್ಗುಣ, ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್, ಗಾಯಕ ವೈ.ಕೆ. ಮುದ್ದುಕೃಷ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Comments
Story first published: Wednesday, January 24, 2001, 5:30 [IST]