Get Updates
Get notified of breaking news, exclusive insights, and must-see stories!

ಭಾಲ್ಕಿ ಉಪ ಅಂಚೆ ಕಚೇರಿ ಡಕಾಯಿತಿ ಯತ್ನ : ಇಬ್ಬರಿಗೆ ಗುಂಡೇಟು

ಬೀದರ್‌ : ಜಿಲ್ಲೆಯ ಭಾಲ್ಕಿ ಉಪ ಅಂಚೆ ಕಚೇರಿಯ ಸಬ್‌ ಪೋಸ್ಟ್‌ ಮಾಸ್ಟರ್‌ ಅವರನ್ನು ಥಳಿಸಿ, ಪೋಸ್ಟ್‌ ಮಾಸ್ಟರ್‌ ಅವರ ಮಗ ಹಾಗೂ ಮಗಳ ಮೇಲೆ ಗುಂಡಿನ ಮಳೆಗರೆದ ಮುಸುಕುಧಾರಿ ಡಕಾಯಿತರ ತಂಡ, ಅಂಚೆ ಕಚೇರಿಯನ್ನು ದೋಚುವ ವಿಫಲಯತ್ನ ಮಾಡಿದ ಘಟನೆ ಶನಿವಾರ ಬೆಳಗ್ಗೆ ಭಾಲ್ಕಿಯಿಂದ ವರದಿಯಾಗಿದೆ.

ಶನಿವಾರ ಬೆಳಗಿನ ಜಾವ ಸುಮಾರು 2.30ರಲ್ಲಿ ಅಂಚೆ ಕಚೇರಿಗೆ ನುಗ್ಗಿದ 8 ಜನ ಡಕಾಯಿತರ ತಂಡ ಖಜಾನೆಯ ಬೀಗ ಒಡೆದು, ಬಾಗಿಲು ತೆರೆಯುವ ಪ್ರಯತ್ನದಲ್ಲಿ ವಿಫಲರಾದಾಗ, ಬೀಗದ ಕೈ ಪಡೆಯಲು ಅಂಚೆ ಕಚೇರಿಯ ಪಕ್ಕದಲ್ಲೇ ಇರುವ ಸಬ್‌ ಪೋಸ್ಟ್‌ ಮಾಸ್ಟರ್‌ಅವರ ಮನೆಗೆ ನುಗ್ಗಿ, ಸಬ್‌ ಪೋಸ್ಟ್‌ ಮಾಸ್ಟರ್‌ ವಿಜಯಕುಮಾರ್‌ ಅವರನ್ನು ಥಳಿಸಿ, ಪ್ರತಿರೋಧ ವ್ಯಕ್ತಪಡಿಸಿದ ಅವರ ಮಗ ರಾಜಶೇಖರ್‌ (16) ಹಾಗೂ ಮಗಳು ಮಮತಾ (12) ಇಬ್ಬರ ಮೇಲೂ ಗುಂಡಿನ ಮಳೆ ಗರೆದರು.

ಈ ದಾಳಿಯಲ್ಲಿ ಗಾಯಗೊಂಡಿರುವ ಮೂವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ಸೇರಿಸಲಾಗಿದೆ. ಗುಂಡಿನ ಶಬ್ದ ಕೇಳಿ ಸುತ್ತಮುತ್ತಲಿನ ಜನ ಹಾಗೂ ರಾತ್ರಿ ಗಸ್ತಿನ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಡಕಾಯಿತರು ಕತ್ತಲಲ್ಲಿ ಪರಾರಿಯಾಗಿದ್ದಾರೆ. ರಾಜಶೇಖರ್‌ನ ಎರಡೂ ತೊಡೆಗಳಿಗೆ ಗುಂಡೇಟು ಬಿದ್ದಿದ್ದರೆ, ಮಮತಾಳ ಎಡಗೈಗೆ ಗುಂಡು ತಾಗಿದೆ.

ಡಕಾಯಿತರ ತಂಡದ ಬಳಿ ನಾಡಬಾಂಬ್‌ಗಳು, ನಾಡ ಪಿಸ್ತೂಲ್‌ ಹಾಗೂ ಮಾರಕ ಆಯುಧಗಳಿದ್ದವು ಎನ್ನಲಾಗಿದ್ದು, ಕನ್ನಡ ಮಾತನಾಡುತ್ತಿದ್ದ 8 ಜನರೂ ಮುಸುಕುಧಾರಿಗಳಾಗಿದ್ದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್‌.ಪಿ. ಬಿ.ಕೆ. ಸಿಂಗ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಕಾಯಿತರಿಗಾಗಿ ಶೋಧ ನಡೆದಿದೆ. ಮೂವರು ಗಾಯಾಳುಗಳೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ, ಪೊಲೀಸರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+