Get Updates
Get notified of breaking news, exclusive insights, and must-see stories!

ಸಾರಸ್ವತ ಲೋಕದಲ್ಲಿ ಬಿ.ಚಿಗೆ ಅನ್ಯಾಯ: ಸುಮತೀಂದ್ರ ನಾಡಿಗ್‌

ಬೆಂಗಳೂರು : ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹಾಸ್ಯ ಸಾಹಿತಿ ಬೀಚಿ ಅವರಿಗೆ ಅಪಾರ ಅನ್ಯಾಯ ಆಗಿದೆ ಎಂದು ಕವಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ್‌ ಅಭಿಪ್ರಾಯಪಟ್ಟರು. ಬೀಚಿ ಬಳಗ ಹಾಗೂ ಸಹಕಾರಿ ಆಡಳಿತ ತರಬೇತಿ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಬೀಚಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬೀಚಿ ಅವರಿಗೆ ಹೆಸರು, ಜನಮನ್ನಣೆ ದೊರಕಿತೇ ವಿನಾ ಅವರನ್ನು ಸರಕಾರ ಗುರುತಿಸಲಿಲ್ಲ. ಪ್ರಶಸ್ತಿಗಳೂ ಸಿಗಲಿಲ್ಲ ಎಂದು ವಿಷಾದಿಸಿದರು. ಕಥೆ ಹೇಳುವ ಕಲೆ, ಅನುಭವ ಅವರಲ್ಲಿತ್ತು. ಅದನ್ನು ತಮ್ಮ ಸಾಹಿತ್ಯದಲ್ಲಿ ಮನಮುಟ್ಟುವಂತೆ ಚಿತ್ರಿಸಿದರು. ಬೀಚಿ ಅವರ ಕೃತಿಗಳಲ್ಲಿ ಹಾಸ್ಯ ತಾಂಡವವಾಡುತ್ತದೆ. ನಮಗೆ ನಗುವುದನ್ನು ಕಲಿಸಿದ್ದೇ ಬೀಚಿ ಎಂದು ಅವರು ಹೇಳಿದರು.

ಹಾಸ್ಯದಲ್ಲಿ ನವಿರಾದ ಕಟು ಸತ್ಯಕ್ಕೆ ವಿಡಂಬನೆಯ ರೂಪ ಕೊಟ್ಟು, ಸಮಾಜದ ಓರೆ ಕೋರೆಗಳನ್ನು ಜನರಿಗೂ ತಿಳಿಯುವಂತೆ ಮಾಡಿದ ಅಗ್ರೇಸರ ಬೀಚಿ. ಅವರ ಶೈಲಿಯಲ್ಲಿದ್ದ ಮೊನಚು ಮತ್ಯಾರ ಸಾಹಿತ್ಯದಲ್ಲೂ ಸಿಗಲು ಸಾಧ್ಯವಿಲ್ಲ ಎಂದ ಅವರು, ಬೀಚಿ ಅವರ ಕೃತಿಗಳನ್ನು ಓದುವ ಮೂಲಕ ಕನ್ನಡಿಗರು ಅವರಿಗೆ ಗೌರವ ನೀಡಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಚಂದ್ರಶೇಖರ ಕಂಬಾರರು ಬೀಚಿ ಅವರಿಗೆ ಸಾಹಿತ್ಯದ ಮೂಲಕ ಜೀವನದಾಚೆಯ ದರ್ಶನ ಮಾಡುವ ಹಂಬಲವಿತ್ತು. ಸಮಾಜದ ಬದುಕನ್ನು ಸಾಹಿತ್ಯದಿಂದ ತಿದ್ದುವ ಉತ್ಕಟೇಚ್ಛೆ ಅವರಲ್ಲಿತ್ತು ಎಂದರು.

ಕಾರ್ಯಕ್ರಮದಲ್ಲಿ ಹ್ಯೂಮರ್‌ ಕ್ಲಬ್‌ನ ಅಧ್ಯಕ್ಷ ವೈ.ಎಂ.ಎನ್‌. ಮೂರ್ತಿ, ಬೀಚಿ ಅವರ ಪುತ್ರ ಡಾ. ಮೂರ್ತಿ, ಸಂಸ್ಥೆಯ ಬಿ.ಎಸ್‌. ವಿಶ್ವನಾಥನ್‌ ಮೊದಲಾದವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಬೀಚಿ ಪ್ರಕಟಣಾಲಯ ಹೊರತಂದಿರುವ ಸೀತೂ ಮದುವೆ, ಅಂಕಿತ ಪ್ರಕಾಶನದ ಉತ್ತರ ಭೂಪ, ಕುಸುಮಾ ಪ್ರಕಾಶನದ ಗಿಳಿಶಾಸ್ತ್ರದ ಪ್ರಾಯೋಜಕರು ಕೃತಿಗಳ ಬಿಡುಗಡೆಯೂ ಆಯಿತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+