Get Updates
Get notified of breaking news, exclusive insights, and must-see stories!

ಪ್ರಕ್ಷುಬ್ಧ ಕಾಶ್ಮೀರ ಕೊಳ್ಳ : ಕಾಂದಹಾರ್‌ ಫಲ ಉಣ್ಣುತ್ತಿರುವ ಸರ್ಕಾರ

ಬಿನೂ ಜೋಷಿ

ಶ್ರೀನಗರ : ಆಪ್ಘಾನಿಸ್ತಾನದ ಕಾಂದಹಾರನ್‌ನಲ್ಲಿ ಹೈಜಾಕ್‌ಗೊಳಗಾದ ಇಂಡಿಯನ್‌ ಏರ್‌ಲೈನ್ಸ್‌ನಲ್ಲಿದ್ದ ಪ್ರಯಾಣಿಕರೊಂದಿಗೆ ಮೌಲಾನ ಅಜರ್‌ ಮಸೂದ್‌ ಸೇರಿದಂತೆ ಮೂವರು ಉಗ್ರಗಾಮಿಗಳ ವಿನಿಮಯ ಮಾಡಿಕೊಂಡ ಕರಾಳ ಘಟನೆಗೆ ವರ್ಷ ಸಂದಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಪರಾಧಿಗಳ ಶಿಕಾರಿ ಇನ್ನೂ ನಡೆಯುತ್ತಿದೆ.

ಭಾರತೀಯ ಸೇನಾ ಪಡೆಗಳ ಮುಖ್ಯ ಕಚೇರಿಯ ಹೊರಭಾಗದಲ್ಲಿ ಸೋಮವಾರ 9 ಜನರನ್ನು ಬಲಿ ತೆಗೆದುಕೊಂಡ ಕಾರ್‌ ಬಾಂಬ್‌ ಸ್ಫೋಟ ಉಗ್ರಗಾಮಿಗಳ ಚಟುವಟಿಕೆ ತೀವ್ರವಾಗಿರುವುದನ್ನು ಸೂಚಿಸುತ್ತದೆ. ಈ ಸ್ಫೋಟದ ಹೊಣೆಯನ್ನು ಜೈಶ್‌- ಇ- ಮೊಹಮ್ಮದ್‌ ಸಂಘಟನೆ ಹೊತ್ತು ಕೊಂಡಿದೆ. 1999 ರ ಡಿಸೆಂಬರ್‌ 31 ರಂದು ಜಮ್ಮುವಿನ ಜೈಲಿನಿಂದ ಬಿಡುಗಡೆ ಮಸೂದ್‌ ಮತ್ತು ಸಂಗಡಿಗರನ್ನು ಒಳಗೊಂಡಿರುವ ಈ ಸಂಘಟನೆ ಕಾಶ್ಮೀರ ಕೊಳ್ಳದ ಅತ್ಯಂತ ಅಪಾಯಕಾರಿ ಉಗ್ರಗಾಮಿ ಸಂಘಟನೆ ಎಂದೇ ಕುಖ್ಯಾತಿ ಪಡೆದಿದೆ.

ಕಳೆದ ವರ್ಷ ಕಾಂದಹಾರ್‌ನಲ್ಲಿ ಕೇಂದ್ರ ಸರ್ಕಾರ ಶರಣಾದ ಘಟನೆಯ ಫಲವನ್ನು ಕಾಶ್ಮೀರ ಕೊಳ್ಳ ಈಗ ಅನುಭವಿಸುತ್ತಿದೆಯೇ ? ವ್ಯಾಪಕವಾಗುತ್ತಿರುವ ಈ ಪ್ರಶ್ನೆಗೆ, ಕಳೆದ ದಶಕದಲ್ಲಿ ಉಗ್ರಗಾಮಿಗಳ ವಿರುದ್ಧ ಹೋರಾಡಿದ ಪ್ಯಾರಾ ಮಿಲಿಟರಿ ಪಡೆಯ ಅಧಿಕಾರಿಯಾಬ್ಬರು ಹೌದೆನ್ನುತ್ತಾರೆ. ಸರ್ಕಾರ ತನ್ನ ತಪ್ಪಿಗೆ ಈಗ ಬೆಲೆ ತೆರುತ್ತಿದೆ ಎಂದು ಅವರು ವಿಷಾದದಿಂದ ಹೇಳುತ್ತಾರೆ.

ಮಸೂದ್‌ನ ಬಿಡುಗಡೆ ಸೈನಿಕರ ನೈತಿಕ ಸ್ಥೈರ್ಯವನ್ನು ಕುಂದಿಸಿದೆ. ಕಾಂದಹಾರ್‌ ಘಟನೆಯ ನಂತರ ಕೊಳ್ಳದಲ್ಲಿ ಸಂಭವಿಸುವ ನರಮೇಧದ ಘಟನೆಗಳೂ ಹೆಚ್ಚಿವೆ ಎಂದು ಹೆಸರು ಬಹಿರಂಗ ಪಡಿಸ ಬಯಸದ ಆ ಅಧಿಕಾರಿ ಅಭಿಪ್ರಾಯ ಪಡುತ್ತಾರೆ.

ಕದನ ವಿರಾಮವೂ ಹಾಗೂ ಅಮಾಯಕ ನಾಗರಿಕರ ಪ್ರಾಣ ಹರಣವೂ ..

ಅಧಿಕೃತ ಮೂಲಗಳ ಪ್ರಕಾರ, ಪ್ರಸಕ್ತ ವರ್ಷದಲ್ಲಿ ಉಗ್ರಗಾಮಿಗಳಿಂದ 31 ಧಾರ್ಮಿಕ ದಾಳಿಗಳು(ಫಿದಾಯಿನ್‌ ಅಟ್ಯಾಕ್ಸ್‌) ನಡೆದಿವೆ. ಇವುಗಳಲ್ಲಿ 9 ದಾಳಿಗಳು ರಂಜಾನ್‌ ಮಾಸದ ಕದನ ವಿರಾಮವನ್ನು ಘೋಷಿಸಿದ ನಂತರ ನಡೆದಿರುವುದು ಗಮನಾರ್ಹ. ಪ್ರಸ್ತುತ ಕದನ ವಿರಾಮದ ಅವಧಿಯನ್ನು ಮತ್ತೂ ಒಂದು ತಿಂಗಳು ವಿಸ್ತರಿಸಲಾಗಿದೆ.

ಸಾಮೂಹಿಕ ನರಮೇಧಗಳೂ ವಿವಾದಿತ ಪ್ರದೇಶದಲ್ಲಿ ಕಾಂದಹಾರ್‌ ಘಟನೆಯ ನಂತರ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಮಾಚ್‌ 20 ರಂದು 35 ಸಿಖ್ಖರ ಕಗ್ಗೊಲೆ, ಆಗಸ್ಟ್‌ 1 ರಂದು 34 ಯಾತ್ರಿಗಳು ಸೇರಿದಂತೆ ನೂರು ಜನರ ಕೊಲೆಗಳ ದುರಂತ ಇನ್ನೂ ಜನಮನದಿಂದ ಮಾಸಿಲ್ಲ .

ಇತ್ತೀಚೆಗೆ ದೆಹಲಿಯ ಕೆಂಪುಕೋಟೆಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿ ಕೂಡ ಉಗ್ರಗಾಮಿಗಳ ಪ್ರಾಬಲ್ಯವನ್ನು ಸ್ಪಷ್ಟ ಪಡಿಸುತ್ತದೆ. ಒಟ್ಟಾರೆ, ಈ ಎಲ್ಲಾ ಘಟನೆಗಳು ಕಾಶ್ಮೀರದ ಸಾಮಾನ್ಯ ನಾಗರಿಕನ ಮರಣ ಭಯವನ್ನು ಮತ್ತಷ್ಟು ಹೆಚ್ಚಿಸಿವೆ. ಸರ್ಕಾರದ ಕದನ ವಿರಾಮ ಘೋಷಣೆಯಿಂದ ಆತ ತತ್ತರಿಸುವಂತಾಗಿದೆ. ಕದನ ವಿರಾಮ ಘೋಷಿಸಿದ ದಿನದಿಂದ ಈವರೆಗೆ 75 ನಾಗರಿಕರು ಕೊಲೆಗೀಡಾಗಿದ್ದಾರೆ. ಸರ್ಕಾರ ಮಾತ್ರ ಏನೂ ಸಂಭವಿಸಿಲ್ಲ ಅನ್ನುವಂತೆ ಕದನ ವಿರಾಮವನ್ನು ವಿಸ್ತರಿಸುತ್ತದೆ. ಪ್ರಧಾನಿ ಕೇರಳದಲ್ಲಿ ದೋಣಿ ವಿಹಾರದಲ್ಲಿ ವ್ಯಸ್ತರಾಗಿದ್ದಾರೆ.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+