ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರವಾಡದ ಸತೀಶ್ಗೆ ಉತ್ತಮ ವೃತ್ತಿ ಶಿಕ್ಷಕ ಪ್ರಶಸ್ತಿ
ಧಾರವಾಡ : ಇಲ್ಲಿನ ಕೆ.ಇ. ಬೋರ್ಡ್ನ ವಿದ್ಯಾರಣ್ಯಪುರ ಪದವಿಪೂರ್ವ ಕಾಲೇಜಿನ ರಾಸಾಯಿನಿಕ ಕೃಷಿ ವಿಷಯದ ಉಪನ್ಯಾಸಕ, ಸತೀಶ್ ಎನ್. ಪಾಟೀಲ್ 1999-2000ನೇ ಸಾಲಿನ ಉತ್ತಮ ವೃತ್ತಿ ಶಿಕ್ಷಣ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಭೋಪಾಲ್ನ ಪಂಡಿತ್ ಸುಂದರ್ಲಾಲ್ ಶರ್ಮ ಕೇಂದ್ರೀಯ ವತ್ತಿ ಶಿಕ್ಷಣ ಸಂಸ್ಥೆ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಧ್ಯ ಪ್ರದೇಶ ಸರಕಾರದ ಮುಖ್ಯ ಕಾರ್ಯದರ್ಶಿ ಎಸ್ .ಕೆ. ಶರ್ಮ ಸತೀಶ್ ಪಾಟೀಲರಿಗೆ ಪ್ರಶಸ್ತಿ ನೀಡಿದರು. ಕೆ.ಇ. ಬೋರ್ಡ್ನ ಅಧ್ಯಕ್ಷ ಎನ್.ಕೆ. ಕುಲಕರ್ಣಿ ಮತ್ತು ವಿದ್ಯಾರಣ್ಯಪುರ ಕಾಲೇಜಿನ ಪ್ರಾಂಶುಪಾಲರಾದ ಆರ್. ಬಿ. ಕಲಕರ್ಣಿ, ಸತೀಶ್ ಅವರನ್ನು ಅಭಿನಂದಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Sunday, December 24, 2000, 5:30 [IST]