ಭಾರತ ದೇಶಪ್ರೇಮಿಯಿಂದ ಪಾಕ್ ವೆಬ್ಸೈಟ್ ಅಪಹರಣ
*ಸುಮಿತ್ ಚಟರ್ಜಿ
ನವದೆಹಲಿ : ರಮ್ಜಾನ್ ಮಾಸಾಚರಣೆ ಸಂದರ್ಭದಲ್ಲಿ ಶಾಂತಿ ಪಾಲನೆ ಕಾಪಾಡಲು ಕಾಶ್ಮೀರದಲ್ಲಿ ಮತ್ತೊಂದು ತಿಂಗಳು ಕದನ ವಿರಾಮವನ್ನು ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಿಗೇ ಭಾರತ ಹಾಗೂ ಪಾಕ್ ನಡುವಿನ ಸೈಬರ್ ಸಮರ ತೀವ್ರಗೊಂಡಿದೆ. ಪಾಕಿಸ್ತಾನ ಸರ್ಕಾರದ ಅಧಿಕೃತ ವೆಬ್ಸೈಟ್ www.pakgov.org ನ್ನು ದೇಶಪ್ರೇಮಿ ಎಂದು ಹೇಳಿಕೊಂಡಿರುವ ವ್ಯಕ್ತಿಯಾಬ್ಬ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ.
ಸೈಟ್ನ ಮುಖಪುಟ (ಹೋಂ ಪೇಜ್)ದಲ್ಲಿನ ವಿಷಯವನ್ನು ಸಂಪೂರ್ಣ ಅಳಿಸಿದ್ದು , ಅಲ್ಲಿ ಈ ಸೈಟನ್ನು ದೇಶಪ್ರೇಮಿ ಭಾರತೀಯ ಐಟಿ ತಜ್ಞ ವಶಪಡಿಸಿಕೊಂಡಿದ್ದಾನೆ ಎಂದು ಬರೆಯಲಾಗಿದೆ. ಮೇರಾ ಭಾರತ್ ಮಹಾನ್, ಐ ಲವ್ ಇಂಡಿಯಾ ಎನ್ನುವ ಬರಹಗಳೂ ಮುಖಪುಟದಲ್ಲಿವೆ.
ಐಟಿಯಲ್ಲಿ ಭಾರತ ಸೂಪರ್ ಪವರ್. ನಾವು ವಿಶ್ವದಲ್ಲಿಯೇ ಅತ್ಯುತ್ತಮ ಹ್ಯಾಕರ್ಗಳು. ಆದರೆ, ಅದನ್ನು ಸಂದರ್ಭೋಚಿತವಾಗಿ ಬಳಸುತ್ತೇವೆ. ಇನ್ನಾದರೂ ಭಾರತೀಯರೊಂದಿಗೆ ಆಟವಾಡುವುದನ್ನು ನಿಲ್ಲಿಸಿ. ಇದು ನಿಮಗೆ ಕೊನೆ ಎಚ್ಚರಿಕೆ ಎಂದು ತಿಳಿಸಿರುವ ಹ್ಯಾಕರ್, ಪಾಕಿಸ್ತಾನಿಗಳ ಈ ಸೈಟ್ ಬೇಧಿಸಲಿಕ್ಕೆ ನನಗೆ ಕೇವಲ 30 ನಿಮಿಷಗಳು ಸಾಕಾದವು ಎಂದು ಹೇಳಿಕೊಂಡಿದ್ದಾನೆ.
ಇದಕ್ಕೂ ಮುನ್ನ ಇಂಡಿಯನ್ ಸೈನ್ಸ್ ಕಾಂಗ್ರೆಸ್ 2000 ಸೈಟ್ ಹ್ಯಾಕ್ ಮಾಡಿದ್ದ ಪಾಕಿಸ್ತಾನಿ ಹ್ಯಾಕರ್ಗಳು, ಅದರಲ್ಲಿ ಭಾರತ ವಿರೋಧಿ ವಿಷಯಗಳನ್ನು ಪ್ರಕಟಿಸಿದ್ದರು. ಅಂತೆಯೇ ಕಳೆದ ಆಗಸ್ಟ್ನಲ್ಲಿ ನ್ಯಾಶನಲ್ ಇನ್ಫಾರ್ಮಾಟಿಕ್ಸ್ನ ವೆಬ್ಸೈಟ್ ಹ್ಯಾಕ್ ಮಾಡಿ ಅದರಲ್ಲಿ ಭಾರತದ ವಿರುದ್ಧ ಬೈಗುಳನ್ನು ಪ್ರಕಟಿಸಿದ್ದರು. ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ನ (ವಿಎಸ್ಎನ್ಎಲ್) ಸೈಟ್ ಕೂಡ ಹ್ಯಾಕರ್ಗಳಿಂದ ಇತ್ತೀಚೆಗೆ ತಾನೇ ಬಾಧೆಗೊಳಗಾಗಿತ್ತು .
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications