ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಕಾರ್ಪೊರೇಟ್ ಜಗತ್ತಿನಲ್ಲಿ ಐದು ಮೆಟ್ಟಿಲುಗಳ ಜಿಗಿಯುವಿರಿ. ಮಕ್ಕಳು ಮಿತಿಮೀರುತ್ತಿದ್ದಾರೆ. ಸ್ವಲ್ಪ ಬುದ್ಧಿ ಮಾತು ಹೇಳಿ.ವೃಷಭ : ಆರೋಗ್ಯದ್ದೇ ಸಮಸ್ಯೆ. ಪೀಕಲಾಟದಲ್ಲಿರುವ ಗೆಳೆಯನ ಹೊರೆಗೆ ಭುಜ ಕೊಡಲೇಬೇಕು. ಈ ನಡುವೆ ನಿಮ್ಮ ಕೆಲಸವೆಲ್ಲಾ ಗೋತಾ ಆಗಲಿದೆ.
ಮಿಥುನ : ಇಲೆಕ್ಟ್ರಾನಿಕ್ ಅಂಗಡಿಯವರ ವ್ಯಾಪಾರ ಠುಸ್ಸು. ಇಲ್ಲ ಸಲ್ಲದ ಗುಲ್ಲುಗಳಿಗೆ ಕಿವಿಗೊಡದೆ, ಮದುವೆಯ ಬಗೆಗೆ ನೀವೇ ಖುದ್ದು ತೀರ್ಮಾನ ತೆಗೆದುಕೊಳ್ಳಿ.
ಕಟಕ : ಹೃದಯಕ್ಕೆ ಹತ್ತಿರಾದವರ ಜೊತೆ ಸಣ್ಣ ವಿಷಯಕ್ಕೆ ಮನಸ್ತಾಪ ಮಾಡಿಕೊಂಡಿದ್ದೀರಿ. ಏನೂ ಮುಚ್ಚಿಡದೆ, ವ್ಯವಧಾನದಿಂದ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಇಲ್ಲವಾದರೆ ಅದು ದೊಡ್ಡದಾದೀತು.
ಸಿಂಹ : ಕಾಮನ್ ಸೆನ್ಸ್ ಪರೀಕ್ಷೆ. ನಿಮ್ಮ ಮಿದುಳಿಗೆ ತುಂಬಾ ಕೆಲಸ. ಛಲ ಬಿಡಬೇಡಿ. ಇಷ್ಟು ಮಾಡಿದಲ್ಲಿ ದಿ ಡೇ ವಿಲ್ ಬಿ ಯುವರ್ಸ್.
ಕನ್ಯಾ :ತೀರಾ ಮುಖ್ಯವಾದ ನಿರ್ಣಯ ಕೈಗೊಳ್ಳುವ ವಿಷಯದಲ್ಲಿ ತೊಳಲಾಟಕ್ಕೆ ಸಿಲುಕುವಿರಿ. ನಂಬಿಕಸ್ಥರ ಸಲಹೆ ಪಡೆಯೋದು ಒಳ್ಳೆಯದು.
ತುಲಾ : ಬೆಟ್ಟದಷ್ಟು ಆಸೆ ಬೇಡ. ಒಮ್ಮೆಲೇ ಜಿಗಿಯೋದಕ್ಕಿಂತ ಮೆಟ್ಟಿಲು ಮೆಟ್ಟಿಲಾಗಿ ಮೇಲೇರೋದೇ ಒಳಿತು. ಚಿನ್ನದ ಮೊಟ್ಟೆ ಇಡೋ ಕೊಳೀನ ಕುಯ್ಯೋ ಅತ್ಯಾಸೆ ಸಲ್ಲ.
ವೃಶ್ಚಿಕ : ಮರೀಚಿಕೆಯ ಹಿಂದೆ ಓಡುತ್ತಿದ್ದೀರಿ. ಓದು ಬರಹದಲ್ಲಿ ಮುಂದಿದ್ದೀರಲ್ಲ. ಅಷ್ಟು ಸಾಕು. ಮಿಕ್ಕೆಲ್ಲಾ ಕೆಲಸಕ್ಕೆ ಬಾರದ ವಿಷಯಗಳನ್ನು ಬದಿಗೊತ್ತಿ.
ಧನಸ್ಸು : ಬೆಳಗ್ಗೆ ಬಿಮ್ಮೆನ್ನುವ ಮನಸ್ಸು ಸಂಜೆ ಹೊತ್ತಿಗೆ ಹಾಯ್ ಎನ್ನುತ್ತದೆ. ಮನಸಲಿ ಮನೆ ಮಾಡಿರುವವರು ಕಣ್ಣ ಮುಂದೆ ಬರುತ್ತಾರೆ.
ಮಕರ : ದುಡ್ಡು ಕಾಸಿನ ವಿಷಯದಲ್ಲಿ ಸ್ನೇಹಿತನೊಂದಿಗೆ ಜಗಳವಾಗೋ ಸಾಧ್ಯತೆಯಿದೆ. ಅದನ್ನು ಅವಾಯ್ಡ್ ಮಾಡಿ. ಉಳಿದ ಯಾವ ತಲೆನೋವೂ ನಿಮಗಿಲ್ಲ.
ಕುಂಭ : ನೀವು ಆರಂಭ ಶೂರರೆನಿಸಿಕೊಳ್ಳುತ್ತೀರಿ. ದೊಡ್ಡ ಗಲಾಟೆ ಮಾಡುವ ಹುಮ್ಮಸ್ಸಿನಲ್ಲಿ ಸಣ್ಣ ಪುಟ್ಟ ಮುಖ್ಯ ವಿಷಯಗಳನ್ನು ಮರೆಯುವ ಸಾಧ್ಯತೆ ಇದೆ. ದೈವಾನುಗ್ರಹವಿರುವುದರಿಂದ ಅಂತಹ ತೊಂದರೆಯೇನೂ ಆಗದು.
ಮೀನ : ಆಡಿದಂತೆ ನಡೆಯದ್ದಕ್ಕೆ ನೀವು ಕೊಡುವ ಸಬೂಬಿಗೆ ಯಾರೂ ಕಿವಿಗೊಡರು. ಅದನ್ನು ಅರುಹುವ ಬದಲು ಸ್ಟೋರ್ ಮಾಡಿಟ್ಟುಕೊಳ್ಳಿ. ಮುಂದೆ ಕೆಲಸಕ್ಕೆ ಬಂದೀತು. ಒಲ್ಲದವರೊಡನೆ ನೀವೇ ರಾಜಿಯಾಗಬೇಕು. ಇಲ್ಲ ಮನೋರೋಗಿಯಾಗಬೇಕು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications