ಮಗಳ ಮದುವೆಗಾಗಿ ಸಂಜಯ್ ಖಾನ್ಗೆ ಕೆಪಿಟಿಸಿಎಲ್ ಉಡುಗೊರೆ!
ಬೆಂಗಳೂರು : ಪುತ್ರಿ ಸೂಸನ್ ಖಾನ್ ಮದುವೆಯಲ್ಲಿ ವ್ಯಸ್ತರಾಗಿರುವ ಸಂಜಯ್ ಖಾನ್ ಅವರಿಗೆ ಕೆಪಿಟಿಸಿಎಲ್ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದೆ! ವಿದ್ಯುತ್ ಕದ್ದಿರುವ ಖಾನ್ರಿಂದ 37 ಲಕ್ಷ ಬಾಕಿ ವಸೂಲಾತಿಗೆ ಇನ್ನೆರಡು ಮೂರು ದಿನಗಳಲ್ಲಿ ನಿಗಮ ನೋಟೀಸು ಕೊಡಲಿದೆ.
ಬೆಂಗಳೂರು- ತುಮಕೂರು ಹೆದ್ದಾರಿಯ ಮಾಕಳಿಯಿಂದ ಬಲ ಭಾಗಕ್ಕೆ ತಿರುಗಿದರೆ ನಗರೂರು ಎಂಬ ಗ್ರಾಮ. ನಗರದಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ಅಲ್ಲಿನ ಸರ್ವೆ ನಂಬರ್ 31 ಹಾಗೂ 32 ರ 31.5 ಎಕರೆ ಜಮೀನಿನಲ್ಲಿ ವರ್ಲ್ಡ್ ರೆಸಾರ್ಟ್ಸ್ ಲಿಮಿಟೆಡ್. ಸಂಜಯ್ ಖಾನ್ ಅದರ ವ್ಯವಸ್ಥಾಪಕ ನಿರ್ದೇಶಕ. 1996ರಿಂದ 98ರವರೆಗೆ ಸುಮಾರು 2.50 ಲಕ್ಷ ಯೂನಿಟ್ ವಿದ್ಯುತ್ ಕಳವು ಮಾಡಿದ್ದಾರೆ.
ಆಗ ಕೆಇಬಿಯ ನೆಲಮಂಗಲದ ವಿಭಾಗದ ಸಹಾಯಕ ಎಂಜಿನಿಯರ್ ಹನುಮಂತರಾಯ ಅವರ ನೆರವಿನಿಂದ ತಮ್ಮ ರೆಸಾರ್ಟ್ನ ಒಳಗೇ ಟ್ರಾನ್ಸ್ಫಾರ್ಮರನ್ನು ಖಾನ್ ಅಕ್ರಮವಾಗಿ ಹಾಕಿಸಿಕೊಂಡರು. ತೆಂಗಿನ ತೋಟಕ್ಕೆ ಸುಮಾರು ಏಳು ಕೋಟಿ ಲೀಟರ್ ನೀರೆತ್ತಲು ಕದ್ದ ವಿದ್ಯುತ್ ಬಳಸಿದರು. ಹಿಂದೊಮ್ಮೆ ತುಮಕೂರು ವಿಭಾಗದ ಜಾಗೃತಿ ದಳದವರು ವಿದ್ಯುತ್ ಕಳವನ್ನು ಪತ್ತೆ ಹಚ್ಚಿ, ಅದು ತಮ್ಮ ವ್ಯಾಪ್ತಿಗೆ ಬಾರದ ಕಾರಣ ಬೆಂಗಳೂರು ಜಾಗೃತಿ ದಳದವರಿಗೆ ವರ್ಗಾಯಿಸಿದ್ದರು.
ಬೆಂಗಳೂರು ಜಾಗೃತಿ ದಳದವರು ಸ್ಥಳಕ್ಕೆ ದಾಳಿ ನಡೆಸಿ, ಅಲ್ಲಿನ ವಿದ್ಯುತ್ ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಈಗ ಕೆಪಿಟಿಸಿಎಲ್ನ ಜಾಗೃತಿ ದಳದ ಅಧಿಕಾರಿಗಳು ಸಂಜಯ್ ಖಾನ್ ಕಟ್ಟಬೇಕಿರುವ ಬಾಕಿಯನ್ನು 37 ಲಕ್ಷ ರುಪಾಯಿ ಎಂದು ಗೊತ್ತು ಪಡಿಸಿದ್ದು, ನಾಳೆಯೋ ನಾಡಿದ್ದೋ ನೋಟೀಸು ಕೊಡಲಿದ್ದಾರೆ. ವಿದ್ಯುತ್ ಕಳವಿಗೆ ಕುಮ್ಮಕ್ಕು ಕೊಟ್ಟ ಕೆಇಬಿ ಸಹಾಯಕ ಎಂಜಿನಿಯರ್ ಹನುಮಂತರಾಯ ಅವರನ್ನು ಅಮಾನತು ಮಾಡಿ, ದೋಷಾರೋಪ ಪಟ್ಟಿಯಲ್ಲಿ ಸೇರಿಸುವಂತೆ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರವನ್ನೂ ಬರೆದಿದ್ದಾರೆ.
ಬಾಲಂಗೋಚಿ : ಟಿಪ್ಪು ಧಾರಾವಾಹಿಯ ಅನಾಹುತ ಪರಿಹಾರಕ್ಕಾದ ಗತಿ ಈ ಬಾಕಿ ವಸೂಲಿಗೂ ಆಗದಿರಲಿ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications