ಪವರ್ ಷಾಕ್ : ಶೇ. 17ರಷ್ಟು ದರ ಏರಿಕೆಗೆ ಕೆಇಆರ್ಸಿ ಅಸ್ತು
ಬೆಂಗಳೂರು : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರವನ್ನು ಶೇ. 17ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಕೆಪಿಟಿಸಿಎಲ್ಗೆ ಈ ಕುರಿತು ಮಂಗಳವಾರ ಆದೇಶ ಕೊಟ್ಟಿದೆ.
ಕೆಇಆರ್ಸಿ ಅಧ್ಯಕ್ಷ ಫಿಲಿಪೋಸ್ ಮಥಾಯ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬಳಿಗಾರ್ ಅವರಿಗೆ ಆದೇಶ ಪತ್ರ ನೀಡಿದರು. ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗೆಗೆ ವಿವರಣೆ ಕೊಟ್ಟರು. ವಿದ್ಯುತ್ ದರದಲ್ಲಿ ಇದ್ದ ಅಸಮತೋಲನವನ್ನು ಸರಿಪಡಿಸಲು ಈ ತೀರ್ಮಾನಕ್ಕೆ ಬರಲಾಗಿದ್ದು, ಕೆಲ ವರ್ಗದ ಜನರಿಗೆ ಮಾತ್ರ ಇದು ಸ್ವಲ್ಪ ಹೊರೆಯಾಗಲಿದೆ ಅಷ್ಟೆ ಎಂದು ಮಥಾಯ್ ಹೇಳಿದರು.
ಆಯೋಗದ ನಿರ್ಧಾರದಿಂದ ನನಗೆ ಮುಕ್ಕಾಲು ಪಾಲು ಸಂತೋಷವಾಗಿದೆ. ಇದರಿಂದ ಈ ವಿತ್ತ ವರ್ಷದಲ್ಲಿ 147 ಕೋಟಿ ರುಪಾಯಿ ಸಂಗ್ರಹವಾಗಲಿದೆ. ಸರ್ಕಾರ ಕೊಡಬೇಕಾದ 524 ಕೋಟಿ ರುಪಾಯಿ ಸಬ್ಸಿಡಿ ದೊರೆಯದ ಕಾರಣ ನಿಗಮಕ್ಕೆ ಹೊರೆಯಾಗಿದೆ ಎಂದು ಬಳಿಗಾರ್ ತಿಳಿಸಿದರು.
ನಿಗಮಕ್ಕೆ 600 ಕೋಟಿ ಹೆಚ್ಚು ಆದಾಯ : ನಿಗಮದ ಪ್ರಸ್ತಾವನೆಯ ಪ್ರಕಾರ ವಿದ್ಯುತ್ ದರದಲ್ಲಿ ವಾರ್ಷಿಕ 800 ಕೋಟಿ ರುಪಾಯಿ ಹೆಚ್ಚಳವಾಗಬೇಕಿತ್ತು. ಆಯೋಗ ಕೈಗೊಂಡಿರುವ ತೀರ್ಮಾನದಿಂದ ದರದಲ್ಲಿ ವಾರ್ಷಿಕ 600 ಕೋಟಿ ರು. ಹೆಚ್ಚಾಗಲಿದೆ. ಅಸಮರ್ಪಕ ಸಬ್ಸಿಡಿ ವ್ಯವಸ್ಥೆ, ಅಸಮತೋಲಿತ ವಿದ್ಯುತ್ ದರ ನಿಗದಿ ಬಹು ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿರುವುದೇ ವಿದ್ಯುತ್ ಕ್ಷೇತ್ರ ರೋಗಗ್ರಸ್ತವಾಗಲು ಕಾರಣವಾಗಿದೆ ಎಂದು ಮಥಾಯ್ ವಿಷಾದ ವ್ಯಕ್ತಪಡಿಸಿದರು.
ಪ್ರಸರಣೆ ಮತ್ತು ವಿತರಣೆಯಲ್ಲಿ ಪ್ರತಿಶತ 36.5ರಷ್ಟು ನಷ್ಟ ಉಂಟಾಗುತ್ತಿದೆ ಎಂದು ನಿಗಮ ಪ್ರಸ್ತಾವನೆಯಲ್ಲಿ ಹೇಳಿತ್ತು. ಆಯೋಗ ಆ ನಷ್ಟವನ್ನು ಶೇ. 31ರಷ್ಟಕ್ಕೆ ಇಳಿಸಿ, ದರ ಪರಿಷ್ಕರಣೆಯ ನಿರ್ಧಾರ ಕೈಗೊಂಡಿದೆ. ಅಲ್ಲದೆ ಈ ನಷ್ಟದ ಪ್ರಮಾಣವನ್ನು ಈ ವರ್ಷ ಶೇ.2ರಷ್ಟು ಹಾಗೂ ಮುಂದಿನ ವರ್ಷ ಶೇ.5ರಷ್ಟು ಇಳಿಸುವಂತೆ ನಿಗಮಕ್ಕೆ ತಿಳಿಸಲಾಗಿದೆ ಎಂದರು.
ಎಇಎಚ್ ಗ್ರಾಹಕರಿಗೆ ಸೋಡಿ : ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಗ್ರಾಹಕರಿಗೆ ಹೊರೆಯಾಗದಂತೆ ಎಚ್ಚರ ವಹಿಸಲಾಗಿದೆ. ಈಗ ಯೂನಿಟ್ಗೆ 7.90 ರುಪಾಯಿ ಕಟ್ಟುತ್ತಿರುವ ಟೀ ಅಂಗಡಿ ಮುಂತಾದ ಸಣ್ಣ ಪ್ರಮಾಣದ ವಾಣಿಜ್ಯ ಬಳಕೆದಾರರ ಪ್ರತಿ ತಿಂಗಳ ಕನಿಷ್ಠ ದರವನ್ನು 70 ರುಪಾಯಿಯಿಂದ 35 ರುಪಾಯಿಗೆ ಇಳಿಸಲಾಗಿದೆ. ಎಇಎಚ್ ಗ್ರಾಹಕರಿಗೆ ಪ್ರತಿ ಕಿಲೋ ವ್ಯಾಟ್ಗೆ 5 ರುಪಾಯಿ ಹಾಗೂ ಗ್ರಾಮೀಣ ಉದ್ಯಮ ಗ್ರಾಹಕರಿಗೆ ಒಂದು ಹಾರ್ಸ್ಪವರ್ಗೆ 10 ರುಪಾಯಿ, ಸೋಲಾರ್ ವಾಟರ್ ಹೀಟರ್ ಬಳಸುವ ಗ್ರಾಹಕರಿಗೆ ಪ್ರತಿ ಯುನಿಟ್ಗೆ 15 ಪೈಸೆ ಸೋಡಿ ನೀಡಲು ಆಯೋಗ ಶಿಫಾರಸ್ಸು ಮಾಡಿದೆ ಎಂದು ಮಥಾಯ್ ವಿವರಿಸಿದರು.
(ಯುಎನ್ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications