ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ವ್ಯವಹಾರದಲ್ಲಿ ಉತ್ಸಾಹ ಉಲ್ಲಾಸವಿದೆ. ವಿಚಲಿತರಾಗದೆ ಬರುವುದನ್ನು ಧೈರ್ಯವಾಗಿ ಎದುರಿಸಿ, ಜಗಳವಾಡುವ ಪ್ರಸಂಗ ಬಂದೀತು, ನೀವೇ ಸೋತು ಬಿಡಿ.ವೃಷಭ : ನಿಮ್ಮ ವರ್ತನೆ ಏಕೋ ಹದ್ದು ಮೀರಿದೆ ಎಂದು ನಿಮಗೆ ಅನ್ನಿಸುತ್ತಿದೆ. ಮನಸ್ಸನ್ನು ನಿಯಂತ್ರಣದಲ್ಲಿದೆ. ನಿಮ್ಮನ್ನು ನೀವು ಗೆದ್ದರೆ, ಜಗವೇ ನಿಮ್ಮ ಅಧೀನ. ಕಠಿಣ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.
ಮಿಥುನ : ಅಷ್ಟಮ ಸ್ಥಾನದಲ್ಲಿ ಶುಕ್ರ ನಿಮಗೆ ಅಸಂತೋಷ ತರಲಿದ್ದಾನೆ. ದೈವಾನುಗ್ರಹ ನಿಮ್ಮಲ್ಲಿರುವುದರಿಂದ ಸಹಾಯವೂ ದೊರಕಲಿದೆ. ಮನೆದೇವರನ್ನು ನಂಬಿ ಹೆಜ್ಜೆ ಇಡಿ.
ಕಟಕ : ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆಯೂ ಆದೀತು. ಬದುಕಲ್ಲಿ ಪ್ರಗತಿ ಇದೆ. ಮನಸ್ಸಿಗೆ ನೆಮ್ಮದಿ ಇದೆ. ವಿಶ್ರಾಂತಿಗೆ ಸುದಿನ.
ಸಿಂಹ : ಬಲವುಳ್ಳ ಗ್ರಹಗಳ ಪ್ರಭಾವದಿಂದ ನೀವು ಪುರುಷ ಸಿಂಹರೇ ಆಗಿದ್ದೀರಿ. ಹಾಗೆಂದು ಸ್ವರ್ಗಕ್ಕೆ ಸೋಪಾನ ಕಟ್ಟಬೇಡಿ. ಸತ್ಪುರುಷರ ದರ್ಶದಿಂದ ನಿಮಗೆ ಲಾಭವಿದೆ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ಅಗತ್ಯ.
ಕನ್ಯಾ : ಪ್ರಗತಿಯ ಹೊಸ ಮೆಟ್ಟಿಲುಗಳನ್ನು ಏರುತ್ತಿದ್ದೀರಿ. ಹತ್ತುವ ಏಣಿಯ ಕಾಲುಗಳೇ ಅಲುಗಾಡುತ್ತಿವೆ. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಮನಸ್ಸಿನ ದ್ವಂದ್ವಗಳಿಂದ ಹೊರಬರಲು ಧ್ಯಾನವೇ ಆಧಾರ.
ತುಲಾ : ನಿಮ್ಮ ಮನಸ್ಸೂ ಹೆಚ್ಚು ಕಮ್ಮಿ ತಕ್ಕಡಿಯಂತೆಯೇ ತೂಗಾಡುತ್ತಿದೆ. ಇದೆಲ್ಲಾ ಕ್ಷಣಿಕ. ಸಾವಧಾನದಿಂದ ಚಿಂತಿಸಿದರೆ, ಪ್ರಗತಿ, ಅತುರಪಟ್ಟರೆ ಕೇಡು. ಅತಿಯಾಸೆ ಪಟ್ಟರಂತೂ ಮುಗಿದೇ ಹೋಯಿತು. ಮರೆಯಬೇಡಿ.
ವೃಶ್ಚಿಕ : ಚೇಳಿನಂತೆಯೇ ಇತರರಿಗೆ ಕುಟುಕುವ ಸ್ವಭಾವ ನಿಮ್ಮದು. ನಿಮ್ಮ ಅತಿ ಬುದ್ಧಿವಂತಿಕೆಯ ಸಲಹೆಗಳು, ಕುಹಕದ ನುಡಿಗಳು ಇತರರಿಗೆ ನೋವು ಮಾಡುತ್ತವೆ ಎನ್ನುವುದನ್ನು ಮರೆಯಬೇಡಿ. ಯಾರನ್ನೂ ಕಡೆಗಣಿಸಬೇಡಿ. ಒಂದು ಹುಲ್ಲೂ ನೆರವಿಗೆ ಬರುತ್ತದೆ.
ಧನಸ್ಸು : ಪ್ರೀತಿ, ಪ್ರೇಮ, ಸರಸಕ್ಕೆ ಬೇರೆಯೇ ವೇದಿಕೆ ಇದೆ. ಎಲ್ಲರ ಕಣ್ಣುಗಳೂ ನಿಮ್ಮ ಮೇಲೆ ಇದ್ದಾಗಲಾದರೂ ಕೊಂಚ ಅಂಜಿಕೆ ಇರಲಿ. ಗುರು - ಶನಿಗಳ ಅಸಹಕಾರವಿದ್ದಾಗ್ಯೂ ಮಂಗಳನ ಬಲದಿಂದ ಲಾಭವಿದೆ. ವ್ಯಾಪಾರದಲ್ಲಿ ಜಯವಿದೆ.
ಮಕರ : ಪ್ರಯಾಣದ ಯೋಚನೆ ಬಿಡಿ. ನಿಮಗೆ ಅಗತ್ಯವಾಗಿ ಬೇಕಿರುವುದು ನೆಮ್ಮದಿ, ವಿಶ್ರಾಂತಿ. ಶುಕ್ರನ ಉತ್ತಮ ಸಹಕಾರ ಇದೆ. ಭಾಗ್ಯದ ಬಾಗಿಲು ತೆರೆಯುತ್ತದೆ. ಸ್ಥಳ ಬದಲಾವಣೆಯ ಸೂಚನೆ ಬರುತ್ತದೆ. ಮಾನಸಿಕವಾಗಿ ಸಿದ್ಧರಾಗಿ.
ಕುಂಭ : ಇಷ್ಟು ದಿನ ಇದ್ದ ದುಗುಡ, ಸಮಸ್ಯೆ ಪರಿಹಾರವಾಗುತ್ತದೆ. ನಿಮ್ಮ ಪ್ರತಿಷ್ಠೆಗೆ ಕುಂದಾಗದಂತೆ ಕೆಲಸ ಮಾಡಿ. ಒತ್ತಡದ ಪರಿಸ್ಥಿತಿಗೆ ಮನಸ್ಸನ್ನು ಒಗ್ಗಿಸಿಕೊಳ್ಳಿ.
ಮೀನ : ಅನಂತ ಹಸ್ತದಿಂದ ಶುಭಫಲಗಳಿವೆ. ಮುಂದಾಲೋಚನೆಯಿಂದ ನಿಮ್ಮದೇ ಸಾಮ್ರಾಜ್ಯ ನೀವು ಕಟ್ಟುತ್ತೀರಿ. ಕುತ್ಸಿತ ಮನಸ್ಸಿನ ಎಳೆಯರ ಮಾತು ಉಪೇಕ್ಷಿಸಿ. ನಾಯಿ ಬೊಗುಳಿದರೆ ದೇವಲೋಕ ಹಾಳಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications