Get Updates
Get notified of breaking news, exclusive insights, and must-see stories!

ಇಂದಿರಾನಗರದಲ್ಲಿ ಇಬ್ಬರು ತರುಣರ ಭೀಕರ ಕೊಲೆ

ಬೆಂಗಳೂರು : ಇಂದಿರಾನಗರ ಚಿನ್ಮಯ ಮಿಷನ್‌ ರಸ್ತೆಯ ಮಂಜುನಾಥ ಕಾಂಪ್ಲೆಕ್ಸ್‌ನ ರೂಂನಲ್ಲಿ ಮಲಗಿದ್ದ ಎಸ್‌ಟಿಡಿ ಬೂತ್‌ ಒಂದನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಹಾಗೂ ಆತನ ಗೆಳೆಯನ ಮೇಲೆ ದೊಡ್ಡ ಗಾತ್ರದ ಕಲ್ಲುಗಳನ್ನು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಕೊಲೆಯಾಗಿರುವ ವ್ಯಕ್ತಿಗಳನ್ನು ಉಡುಪಿಯ ಪ್ರವೀಣ (30) ಹಾಗೂ ಆತನ ಗೆಳೆಯ ಸುಧಾಕರ ಶೆಟ್ಟಿ (28) ಎಂದು ಗುರುತಿಸಲಾಗಿದೆ. ಕೊಲೆಗೆ ಪ್ರೇಮ ಪ್ರಕರಣ ಇಲ್ಲವೇ ಅಕ್ರಮ ಸಂಬಂಧ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಯಾಗಿರುವ ಪ್ರವೀಣ ಹಾಗೂ ಸುಧಾಕರ ಶೆಟ್ಟಿ ಮಲಗಿದ್ದ ರೂಂನಲ್ಲಿ ದೊರೆತಿರುವ ಬಳೆ ಚೂರು, ಹೇರ್‌ಪಿನ್‌ ಹಾಗೂ ಹುಡುಗಿಯಾಬ್ಬಳ ಫೋಟೋ ಈ ಶಂಕೆಗೆ ಪುಷ್ಟಿ ನೀಡಿದೆ.

ಈ ಕೊಲೆ ಪ್ರಕರಣದಿಂದ ಇಂದಿರಾನಗರ ಬಡಾವಣೆಯಲ್ಲಿ ಭೀತಿಯ ವಾತಾವರಣ ಮೂಡಿದ್ದು, ನಾಗರಿಕರು ಭಯಭೀತರಾಗಿದ್ದಾರೆ. ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಪೊಲೀಸ್‌ ಕೇಂದ್ರ ಕಚೇರಿ ತಿಳಿಸಿದೆ.

ಕೊಲೆಗೀಡಾದ ಸುಧಾಕರ ಶೆಟ್ಟಿ ಎಸ್‌ಟಿಡಿ ಬೂತ್‌ ನೋಡಿಕೊಳ್ಳುತ್ತಿದ್ದ ಪ್ರವೀಣನ ರೂಮಿಗೆ ಮಂಗಳವಾರವಷ್ಟೇ ಬಂದಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ. ರಾತ್ರಿ 12 ಗಂಟೆಯ ನಂತರ ಈ ಭೀಕರ ಕೊಲೆ ನಡೆದಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+