Get Updates
Get notified of breaking news, exclusive insights, and must-see stories!

ಸಕಲ ಸರ್ಕಾರಿ ಗೌರವದೊಂದಿಗೆ ಜೆ.ಎಚ್‌. ಪಟೇಲ್‌ ಅಂತ್ಯಕ್ರಿಯೆ

ಕಾರಿಗನೂರು : ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಮಾಜವಾದಿ ಮುಖಂಡ ಜೆ.ಎಚ್‌. ಪಟೇಲ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ದಾವಣಗೆರೆಗೆ 20 ಕಿ.ಮೀ. ದೂರದಲ್ಲಿರುವ ಅವರ ಸ್ವಂತ ಊರಾದ ಕಾರಿಗನೂರಿನ ರುದ್ರಭೂಮಿಯಲ್ಲಿ ಬುಧವಾರ ಸಂಜೆ ನೆರವೇರಿತು.

ನೂರಾರು ಅಭಿಮಾನಿಗಳು , ಹಿರಿಯ ರಾಜಕಾರಣಿಗಳು, ರಾಜಕೀಯ ಕಾರ್ಯಕರ್ತರು ಮೃತರ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಿದ್ದು ತಮ್ಮ ಅಶ್ರುತರ್ಪಣ ಸಲ್ಲಿಸಿದರು. ಮೃತರ ಗೌರವ ಸೂಚಕವಾಗಿ ಸಶಸ್ತ್ರ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಇದಕ್ಕೂ ಮುನ್ನ ದೇಹವನ್ನು ಮೆರವಣಿಗೆಯಲ್ಲಿ ರುದ್ರಭೂಮಿಗೆ ಒಯ್ಯಲಾಗಿತ್ತು.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ , ಕೇಂದ್ರಸಚಿವರಾದ ಧನಂಜಯ ಕುಮಾರ್‌, ನಿತೀಶ್‌ ಕುಮಾರ್‌, ಶ್ರೀನಿವಾಸ ಪ್ರಸಾದ್‌, ಶರದ್‌ಯಾದವ್‌ ಹಾಗೂ ಮಾಜಿ ಕೇಂದ್ರ ಸಚಿವರಾದ ರಾಮಕೃಷ್ಣ ಹೆಗಡೆ, ಎಸ್‌.ಆರ್‌. ಬೊಮ್ಮಾಯಿ, ಎಸ್‌.ಬಂಗಾರಪ್ಪ , ರಾಜ್ಯ ಕೆಪಿಸಿಸಿಐ ಅಧ್ಯಕ್ಷ ಶಿವಾನಂದ ಕೌಜಲಗಿ, ಭಾಜಪ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ, ವಿರೋಧ ಪಕ್ಷಗಳ ನಾಯಕ ಜಗದೀಶ್‌ ಶೆಟ್ಟರ್‌ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಿದ್ದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+