ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ದೀರ್ಘ ಮನಸ್ತಾಪಗಳಿಗೆ ಎಡೆ ಮಾಡಿಕೊಡದಿರಿ. ಇಂದು ನಿಮ್ಮನ್ನು ಪರೀಕ್ಷಿಸುವಂತೆಯೇ ಗೆಳೆಯರು ನಡೆದುಕೊಳ್ಳುತ್ತಾರೆ. ಆದರದು ಅವರ ಪರೀಕ್ಷೆಯಾಗಿ ಪರಿಣಮಿಸಿ ನಿಜವಾದ ಬಣ್ಣ ಬಯಲಾಗುತ್ತದೆ.ವೃಷಭ : ನೆಮ್ಮದಿಯ ನಾಳೆಗಾಗಿ ಈ ದಿನವನ್ನು ನರಕವಾಗಿಸಿಕೊಳ್ಳುವುದು ಬೇಡ. ಪ್ರಸ್ತುತ ವೃತ್ತಿಯಲ್ಲೇ ಆರಾಮಾಗಿರುವುದರಿಂದ ಹೊಸ ಅವಕಾಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
ಮಿಥುನ : ಇದುವರೆಗೆ ಮಾಡಿದ ಮೋಜು ಸಾಕು. ಕರ್ತವ್ಯ ಕರೆಯುತ್ತಿದೆ. ಮರೆತದ್ದನ್ನು , ಮರೆತವರನ್ನು ಮತ್ತೆ ನೆನಪಿಸಿಕೊಳ್ಳಿ. ಸದ್ಯಕ್ಕೆ ಅವರ ಜೊತೆ ಏಗುವುದು ಅನಿವಾರ್ಯವಾದ್ದರಿಂದ ಚಿಂತೆ ಕೈ ಬಿಡಿ.
ಕಟಕ : ಯಾರು ಸಮರು ನನಗೆ ಎಂದು ನೀವೀವತ್ತು ಮೈ ಸೆಟೆಸಿ ನಡೆಯಬಹುದು. ಗ್ರಹಗತಿಗಳೆಲ್ಲಾ ನಿಮ್ಮ ಪರವಾಗಿಯೇ ಇವೆ. ಹೊಸ ಕೆಲಸ ಪ್ರಾರಂಭಿಸಲು ತಕ್ಕನಾದ ಮುಹೂರ್ತ.
ಸಿಂಹ : ಜಂಜಡದ ಬದುಕಿಗೆ ಹೊಸ ಹುರುಪು ತುಂಬಿಕೊಳ್ಳಲು ಪಿಕ್ನಿಕ್ ಯೋಚನೆ ಒಳ್ಳೆಯದೇ. ಮನೆ ಮಂದಿಯಾಂದಿಗೆ ಕಾಲ ಕಳೆಯುವಾಗ ಮಾಗಿ ಚಳಿ ಮನಸ್ಸಿಗೆ ತಟ್ಟದು.
ಕನ್ಯಾ : ಹೂ ಅರಳುತ್ತದೆ ಎಂದು ಏಸು ಕಾಲ ಕಾಯುತ್ತೀರಿ. ನಿಮ್ಮೆದುರಿಗೇ ಬೇಕಾದಷ್ಟು ಸೊಗಸಿನ ಹೂಗಳಿವೆ. ನೀವು ಇಷ್ಟ ಪಡುವವರಿಗಿಂತ ನಮ್ಮನ್ನು ಇಷ್ಟ ಪಡುವವರೇ ಒಳ್ಳೆಯ ಸಂಗಾತಿಯಾಗಬಲ್ಲರು.
ತುಲಾ : ಅಗ್ನಿ ದಿವ್ಯ ಎಂದರೆ ಇದುವೇನೆ. ಸದಾ ತುರುಸಿನಲ್ಲೇ ಬೆಳೆದು ಬಂದ ನಿಮಗೆ ಇದುವೇನೂ ಹೊಸದಲ್ಲವಾದರೂ, ತಲೆ ಮೇಲೆ ತೂಗುವ ಕತ್ತಿಯ ಬಗ್ಗೆ ಎಚ್ಚರ ಅಗತ್ಯ.
ವೃಶ್ಚಿಕ : ಏನ ಮಾಡಿದರೇನು ಭವ ಹಿಂಗದು ದಾಸ ವಾಣಿ ನಿಮ್ಮನ್ನು ಕುರಿತು ಹೇಳಿದ್ದೇನೂ ಇಲ್ಲ . ಅಸಲಿಗೆ ಕೆಲಸವನ್ನು ನೀವಿನ್ನು ಪ್ರಾರಂಭಿಸಿಯೇ ಇಲ್ಲ . ಈ ದಿನ ಅದು ಸಾಧ್ಯವಾಗುವುದೂ ಇಲ್ಲ .
ಧನಸ್ಸು : ಲಕುಮಿ ನಿಮ್ಮನ್ನು ಸೇರಲೆಂದು ಈ ಹೊತ್ತು ಧಾವಿಸಿ ಬರುವುದು ಖಂಡಿತ. ಜೂಜು, ಲಾಟರಿ.. ರೂಪು ಯಾವುದಾದರೂ ಆಗಬಹುದು. ಅದೃಷ್ಟದ ದಿನ.
ಮಕರ : ಯಾರನ್ನಾದರೂ ಅನುಮಾನಿಸುವುದು ಅವರನ್ನು ಅವಮಾನಿಸಿದಂತೆಯೇ ಅನ್ನುವ ಪ್ರಜ್ಞೆ ನಿಮ್ಮದಾಗಿದ್ದಲ್ಲಿ ನೀವು ಹೀಗೆ ಮಾಡುತ್ತಿರಲಿಲ್ಲ . ಅದೆಲ್ಲಾ ಇರಲಿ. ಇಂದು ಗುಂಗುಗಳ ದಿನ.
ಕುಂಭ : ಜೀವದ ಗೆಳೆಯ ಭೆಟ್ಟಿಯಾಗುತ್ತಾನೆ. ಸಂಜೆ ಐದರ ಚಳಿಯಾಂದಿಗೆ ಕಾಫಿ ಗುಟುಕರಿಸುವ ಮಧುರ ಆಹ್ಲಾದದ ದಿನ ಪೂರ್ತಿ ನಿಮ್ಮದು.
ಮೀನ : ಅಂತೂ ನಿಮ್ಮ ಒಂದು ಗುರಿ ಸಾಧಿಸಿತು. ಜಗ ಮೆಚ್ಚಿಸುವುದಿರಲಿ, ನಿಮ್ಮ ಮನಸ್ಸಿಗಾದರೂ ಬದ್ಧರಿದ್ದೀರಾ. ಆತ್ಮ ವಿಶ್ಲೇಷಣೆಗೆ ಸಕಾಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications