ಟೆಲಿಫೋನ್ಗೆ ನಮಸ್ಕಾರ : ಕೇಬಲ್ ಮೂಲಕ ಇಂಟರ್ನೆಟ್ ಸಂಪರ್ಕ
ಮೊಹಮ್ಮದ್ ಶಫೀಕ್
ಹೈದರಾಬಾದ್: ಇಂಟರ್ನೆಟ್ ಸಂಪರ್ಕಕ್ಕಾಗಿ ಟೆಲಿಫೋನ್ ರಗಳೆಗಳನ್ನು ಸಹಿಸಿಕೊಳ್ಳುವ ಕಾಲ ಇನ್ನಿಲ್ಲ . ಕೇಬಲ್ ಮೂಲಕ ವಾಹಿನಿಗಳು ನಿಮ್ಮ ಮನೆಯ ಟೀವಿಗೆ ಹರಿದು ಬರುವಷ್ಟೇ ಸಲೀಸಾಗಿ, ಕೇಬಲ್ ಮೂಲಕವೇ ಇಂಟರ್ನೆಟ್ ಜೀವಗೊಳ್ಳುವ ಸವಲತ್ತು ಅಂಗಳದಲ್ಲಿದೆ. ಇಂಥಾ ಸೌಲಭ್ಯಕ್ಕೆ ಆಂಧ್ರಪ್ರದೇಶದ ರಾಜಧಾನಿಯಲ್ಲಿ ಬುಧವಾರ ಚಾಲನೆ ದೊರಕಿತು.
ಮ್ಯಾಕ್ ಇನ್ಫೋ ಕಂಪನಿ ಒದಗಿಸಿದ ಕೇಬಲ್ ಜಾಲವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು , ಈ ಸೌಲಭ್ಯ ಇತರ ಪ್ರಮುಖ ನಗರಗಳಿಗೂ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದರು. ಮುಂದಿನ 18 ತಿಂಗಳಲ್ಲಿ ರಾಜ್ಯದ ಪ್ರತಿ ಹಳ್ಳಿಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯದಲ್ಲಿ ಫೈಬರ್ ಆಪ್ಟಿಕ್ ಲೈನ್ಗಳನ್ನು ಅಳವಡಿಸುವ ಕೆಲಸದಲ್ಲಿ ರಿಲಯನ್ಸ್ ಕಂಪನಿ ತೊಡಗಿದೆ ಎಂದು ನಾಯ್ಡು ಹೇಳಿದರು.
ಕೇಬಲ್ಗಳ ಅಳವಡಿಕೆಯಲ್ಲಿ ಮ್ಯಾಕ್ ಕಂಪನಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ. ಇದರಿಂದಾಗಿ ಕೇಬಲ್ ಸಂಪರ್ಕಕ್ಕೆ ಕಡಿಮೆ ವೆಚ್ಚವಾಗುತ್ತದೆ ಹಾಗೂ ಉತ್ತಮ, ತಡೆ ರಹಿತ ಕಾರ್ಯಕ್ಷಮತೆಯ ಇಂಟರ್ನೆಟ್ ಸೇವೆ ಲಭ್ಯವಾಗುತ್ತದೆ. ಅಧಿಕ ವೇಗದ ಇಂಟರ್ನೆಟ್ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ನಾವು ನಡೆಸುತ್ತಿದ್ದೇವೆ ಎಂದು ಮ್ಯಾಕ್ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ವಿ. ಸುಬ್ಬರಾವ್ ಹೇಳಿದ್ದಾರೆ.
ಹೈದರಾಬಾದ್ ಹಾಗೂ ಸಿಕಂದರಾಬಾದ್ ಅವಳಿ ನಗರಗಳ 60 ಕಿಮೀ ವ್ಯಾಪ್ತಿಯಲ್ಲಿ ಕಂಪನಿ ಈಗಾಗಲೇ ಕೇಬಲ್ಗಳನ್ನು ಅಳವಡಿಸಿದೆ. ಮುಂದಿನ ಒಂದು ವರ್ಷದಲ್ಲಿ ಮತ್ತೆ 100 ಕಿಮೀ ಕೇಬಲ್ ಅಳವಡಿಸುವ ಉದ್ದೇಶವನ್ನು ಕಂಪನಿ ಹೊಂದಿದ್ದು, ಶೀಘ್ರದಲ್ಲಿಯೇ ವಿಜಯವಾಡಾ, ವಿಶಾಖಪಟ್ಟಣ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ತನ್ನ ಜಾಲವನ್ನು ವಿಸ್ತರಿಸುವುದು.
ಇಂಟರ್ನೆಟ್ ಕೇಬಲ್ ಸಂಪರ್ಕ ಪಡೆಯಲು ಕಂಪನಿ ಅಳವಡಿಕೆಯ ವೆಚ್ಚವಾಗಿ 5000 ಸಾವಿರ ರುಪಾಯಿ ಹಾಗೂ ತಿಂಗಳ ನಿರ್ವಹಣೆಯ ವೆಚ್ಚವಾಗಿ 1200 ರುಪಾಯಿ ಪಡೆಯಲಿದೆ. ಅಲ್ಲದೆ ಮೊದಲ ವರ್ಷದಲ್ಲಿ ಹೆಚ್ಚುವರಿ ನಿರ್ವಹಣಾ ವೆಚ್ಚವಾಗಿ ರು.500 ವಸೂಲು ಮಾಡುವುದು. ಇಂಟರ್ನೆಟ್ ಬಳಕೆಗೆ ಯಾವುದೇ ಕಾಲಮಿತಿಯಿಲ್ಲ ದ ಈ ಸೌಲಭ್ಯವನ್ನು ಹೊಂದಲು ಯೋಜನೆ ಜಾರಿಯಾಗುವ ಮುನ್ನವೇ ಸುಮಾರು 2 ಸಾವಿರ ಮಂದಿ ಹೆಸರುಗಳನ್ನು ನೋಂದಾಯಿಸಿದ್ದಾರೆ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications