ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರ ಜಿಲ್ಲೆ : ಮೂವರು ನೀರು ಪಾಲು

By Staff
|
Google Oneindia Kannada News

ಚಾಮರಾಜನಗರ : ಚಂದಕವಾಡಿ ಪಂಪ್‌ಹೌಸ್‌ ಬಳಿಯ ಸುವರ್ಣಾವತಿ ನಾಲೆಯಲ್ಲಿ ಒಬ್ಬ ಹಾಗೂ ಬಂಡೀಪುರ ಅಭಯಾರಣ್ಯದ ಹತ್ತಿರದ ಆನೆಗುಂದಿ ಕೆರೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಈಜಲು ಹೋಗಿ ಭಾನುವಾರ ನೀರು ಪಾಲಾಗಿದ್ದಾರೆ.

ಚಾಮರಾಜ ನಗರದ ನಾಲ್ಕು ವಿದ್ಯಾರ್ಥಿಗಳು ಸುವರ್ಣಾವತಿ ನಾಲೆಯಲ್ಲಿ ಈಜಲು ಹೋಗಿದ್ದರು. ಅವರಲ್ಲಿ ಕುರುಬಗೇರಿಯ ನಿವಾಸಿ ಮಹದೇವ ಸ್ವಾಮಿ (15) ನೀರಿನಿಂದ ವಾಪಸ್ಸು ಬರಲೇ ಇಲ್ಲ. ಈ ಹುಡುಗ ನಗರದ ಜೆ.ಎಸ್‌.ಎಸ್‌. ಕಾಲೇಜಿನಲ್ಲಿ 8ನೇ ಇಯತ್ತೆಯಲ್ಲಿ ಓದುತ್ತಿದ್ದ. ರಾಮಸಮುದ್ರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದೂರು ದಾಖಲಾಗಿದ್ದು, ಪೊಲೀಸ್‌ ತನಿಖೆ ನಡೆದಿದೆ.

ಇನ್ನೊಂದು ಪ್ರಕರಣದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪಿಕ್‌ನಿಕ್‌ಗೆ ಹೋಗಿದ್ದ ಐವರು ವಿದ್ಯಾರ್ಥಿಗಳ ತಂಡದ ಇಬ್ಬರು ಆನೆಗೊಂದಿ ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾರೆ. ಚಾಮರಾಜನಗರದ ಮಿಠಾಯಿ ವ್ಯಾಪಾರಿ ಶಾಂತಪ್ಪನವರ ಮಗ ಕಿರಣ್‌ (18) ಹಾಗೂ ವಡೆ ಗೋಪಾಲ್‌ ಎಂಬುವರ ಮೊಮ್ಮಗ ರಾಕೇಶ್‌ (16) ಇವರೇ ಆ ನತದೃಷ್ಟರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X