ಬಿಎಸ್ಎಫ್ ಪಡೆ ಶುಕ್ರವಾರ ಕೊಯಂಬತ್ತೂರ್ಗೆ,ಅಲ್ಲಿಂದ ಕಾಡಿಗೆ
ಬೆಂಗಳೂರು : ಇಲ್ಲೊಂದು ಬದಲಾವಣೆ. ಬುಧವಾರ ನಾವು ಪ್ರಕಟಿಸಿದಂತೆ ವಿಶೇಷ ರೀತಿಯಲ್ಲಿ ತರಬೇತುಗೊಂಡ ಕಮಾಂಡರ್ಗಳುಳ್ಳ ಬಿಎಸ್ಎಫ್ತಂಡ ಶುಕ್ರವಾರ ಬೆಂಗಳೂರಿಗೆ ಬಂದಿಳಿದು, ನಂತರ ವೀರಪ್ಪನ್ ಶಿಕಾರಿಗೆ ಕಾಡಿಗೆ ಹೋಗಬೇಕಿತ್ತು. ಆದರೀಗ ಬಂದ ಸುದ್ದಿಯ ಪ್ರಕಾರ ಬಿಎಸ್ಎಫ್ ಪಡೆ ಕೊಯಂಬತೂರಿನಲ್ಲಿ ಇಳಿದು, ನಂತರ ಕಾಡಿಗೆ ನುಗ್ಗಲಿದೆ.
ಪೊಲೀಸ್ ಮಹಾ ನಿರ್ದೇಶಕ ಸಿ.ದಿನಕರ್ ಗುರುವಾರ ಮಾಧ್ಯಮಗಳ ವರದಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಬಹುತೇಕ ಕಮಾಂಡರ್ಗಳನ್ನೊಳಗೊಂಡ 1000 ಜವಾನ್ಗಳು ಮಣಿಪುರದ ಇಂಫಾಲ್ನಿಂದ ತಂಡೋಪತಂಡವಾಗಿ ಇನ್ನೆರಡು ದಿನಗಳಲ್ಲಿ ಕೊಯಂಬತ್ತೂರ್ಗೆ ಬಂದು, ಅಲ್ಲಿಂದ ಕಾಡು ಹೊಕ್ಕಿ, ಉಭಯ ರಾಜ್ಯಗಳ ಎಸ್ಟಿಎಫ್ ತಂಡಗಳನ್ನು ಕೂಡಲಿದ್ದಾರೆ.
ರಾತ್ರಿಯಲ್ಲೂ ಸ್ಪಷ್ಟವಾಗಿ ನೋಡಬಲ್ಲಂತಹ ಉಪಕರಣಗಳು, ತಂತಾನೇ ಗುಂಡುಗಳನ್ನು ತುಂಬಬಲ್ಲ ಬಂದೂಕುಗಳು, ಎಕೆ- 47, ಹುದುಗಿಸಿಟ್ಟ ಭೂಬಾಂಬುಗಳ ಪತ್ತೆ ಮಾಡುವ ಉಪಕರಣಗಳನ್ನು ತಂಡ ಒಯ್ಯಲಿದೆ ಎಂಬ ಸುದ್ದಿಗಳೂ ಕೇಳಿಬರುತ್ತಿವೆ. ಜಮ್ಮು ಕಾಶ್ಮೀರದಲ್ಲಿ ಅತ್ಯಂತ ಬಿಗು ಪರಿಸ್ಥಿಯನ್ನು ನಿಭಾಯಿಸಿದ ಛಾತಿಯುಳ್ಳ ಕ್ಷಿಪ್ರ ಪ್ರತಿಕ್ರಿಯಾ ದಳದ 40 ಮಂದಿ ಕಮಾಂಡೋಗಳು ತಂಡದಲ್ಲಿರುವುದು ವೀರಪ್ಪನ್ ಕಾರ್ಯತಂತ್ರಕ್ಕೆ ಹೊಸ ಕಳೆ ಕೊಟ್ಟಿದೆ.
(ಯುಎನ್ಐ)
ವಾರ್ತಾ ಸಂಚಯ
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications