ಮತ್ತೆ ಸುದ್ದಿಯಲ್ಲಿ ಸಿ. ಅಶ್ವತ್ಥ್ !
ಬೆಂಗಳೂರು : ಅಕ್ಕಾ ಚೆಕ್ ಬೌನ್ಸ್ ಹಗರಣವನ್ನು ಹಾದಿ ರಂಪ, ಬೀದಿ ರಂಪ ಮಾಡುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಗಾಯಕ ಸಿ. ಅಶ್ವತ್ಥ್ ಈಗ ಮತ್ತೆ ಸುದ್ದಿ ಮಾಡಿದ್ದಾರೆ. ಶಿಶುನಾಳ ಶರೀಫ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸಿ. ಅಶ್ವತ್ಥ್ ರಾಜೀನಾಮೆ ನೀಡಿದ್ದಾರೆ.
ಸುಗಮ ಸಂಗೀತಗಾರರಿಗೆ ರಾಜ್ಯ ಸರಕಾರ ಕೊಡ ಮಾಡುವ ಅತ್ಯುನ್ನತ ಗೌರವ ಸಂತ ಶಿಶುನಾಳ ಶರೀಫ ಪ್ರಶಸ್ತಿ. ಇಂತಹ ಅತ್ಯುನ್ನತ ಪ್ರಶಸ್ತಿಯ ಸಮಿತಿಗೆ ಅಧ್ಯಕ್ಷನಾಗುವುದು ಹೆಮ್ಮೆಯ ವಿಚಾರ. ಆದರೆ, ಆಯ್ಕೆ ಸಮಿತಿಯಲ್ಲಿ ಅನುಸರಿಸಲಾಗುತ್ತಿರುವ ಮಾನದಂಡ ನನಗೆ ಸಮ್ಮತವಾಗಿ ತೋರದ ಕಾರಣ ಆ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂಬುದು ಅಶ್ವತ್ಥ್ ಹೇಳಿಕೆ.
ಸುಗಮ ಸಂಗೀತದ ಜೊತೆಗೆ ತತ್ವಪದ, ದೇವರನಾಮ ಹಾಗೂ ವಚನಗಳನ್ನು ಸುಗಮ ಸಂಗೀತದ ಶೈಲಿಯಲ್ಲೇ ಹಾಡುವವರನ್ನೂ ಈ ಪ್ರಶಸ್ತಿಗೆ ಪರಿಗಣಿಸಬೇಕು ಎಂಬುದರಲ್ಲಿ ಅರ್ಥವೇ ಇಲ್ಲ ಎಂಬುದು ಅಶ್ವತ್ಥ್ ಅಭಿಪ್ರಾಯ. ಸುಗಮ ಸಂಗೀತ ಕರ್ನಾಟಕದ ಕೊಡುಗೆ. ಸುಗಮ ಸಂಗೀತ ಎಂಬುದು ಮೂಲತಃ ಕಾವ್ಯ ಗಾಯನ ಅದಕ್ಕೂ ಜನಪದಕ್ಕೂ ಸಂಬಂಧವೇ ಇಲ್ಲ ಎಂಬುದು ಅಶ್ವತ್ಧ್ರ ವಾದ.
ಈ ವಾದ ಕೇಳಿ, ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಹಲವರ ಕಣ್ಣುಗಳು ಕೆಂಪಾಗಿವೆ. ಆದರೂ ಅಶ್ವತ್ಥ್ ತಮ್ಮ ವಾದವನ್ನು ಹೀಗೆ ಮುಂದುವರಿಸುತ್ತಾರೆ. ತತ್ವ ಪದ, ಜಾನಪದ ಗೀತೆಗಳು, ದೇವರನಾಮಗಳನ್ನು ಸುಗಮ ಸಂಗೀತದ ದಾಟಿಯಲ್ಲಿ ಹಾಡುವವರು ಇವರೇ ಎಂದು ಹೇಗೆ ನಿರ್ಧರಿಸುತ್ತಾರೆ. ಹೀಗೆಂದು ಅವರಿಗೆ ಸರ್ಟಿಫಿಕೇಟ್ ಕೊಡುವವರು ಯಾರು? ಎಂದೂ ಅಶ್ವತ್ಥ್ ಪ್ರಶ್ನಿಸುತ್ತಾರೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications