ಆಟ ಕದ್ದ ಖದೀಮರಿಗೆ ಕ್ರಿಕೆಟ್ನಿಂದ ಉಚ್ಚಾಟನೆ
ನವದೆಹಲಿ : ಕ್ರಿಕೆಟ್ನಲ್ಲಿ ಮೋಸದಾಟ ಆಡಿದರೆಂಬ ಆರೋಪ ಹೊತ್ತ ಇಬ್ಬರನ್ನು ಆಜೀವ ಪರ್ಯಂತ ಕ್ರಿಕೆಟ್ ರಂಗದಿಂದ ಹೊರಗಟ್ಟುವ ಮೂಲಕ ಭಾರತೀಯ ಕ್ರಿಕೆಟ್ನ ಮೊದಲ ಅಧ್ಯಾಯ ಮುಗಿದಿದೆ.
ಮೊಹಮ್ಮದ್ ಅಜರುದ್ದೀನ್ ಮತ್ತು ಮಾಜಿ ಟೆಸ್ಟ್ ಆಟಗಾರ ಅಜಯ್ ಶರ್ಮ ಇನ್ನು ಮುಂದೆ ಅವರ ಜೀವಮಾನದಲ್ಲೇ ಯಾವುದೇ ಕ್ರಿಕೆಟ್ ಚಟುವಟಿಕೆಯಲ್ಲಿ ತೊಡಗುವಂತಿಲ್ಲ. ಅಜಯ್ ಜಡೇಜ ಮತ್ತು ಮನೋಜ್ ಪ್ರಭಾಕರ್ಗೆ 5 ವರ್ಷಗಳ ಕಾಲ ನಿಷೇಧ. ಎರಡು ವಾರಗಳಿಂದ ಮೂರು ಬಾರಿ ಚರ್ಚೆ ಮಾಡಿದ ಬಿಸಿಸಿಐ ಕೊನೆಗೂ ಒಂದು ಪಕ್ಕಾ ತೀರ್ಮಾನ ಕೊಟ್ಟಿದೆ. ಭಾರತ ಕ್ರಿಕೆಟ್ನ ಮಾಜಿ ಫಿಸಿಯೋ ಅಲಿ ಇರಾನಿಗೂ 5 ವರ್ಷಗಳ ನಿಷೇಧ ಹೇರಿದೆ.
ಬಿಸಿಸಿಐನ 30 ಅಧಿಕಾರಿಗಳ ಪೈಕಿ 28 ಮಂದಿ ಅಜರ್ಗೆ ಆಜೀವ ನಿಷೇಧ ಹೇರಬೇಕೆಂದು ಮಂಗಳವಾರ ಚೆನ್ನೈನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮತ ಹಾಕಿದರು.
ನಿಷೇಧಕ್ಕೆ ಒಳಗಾಗಿರುವ ಆಟಗಾರರ ಪೈಕಿ ಜಡೇಜ ಮತ್ತೆ ಬ್ಯಾಟ್ ಹಿಡಿಯುವ ಸಾಧ್ಯತೆಯಿರುವ ಏಕೈಕ ಕ್ರಿಕೆಟಿಗ. ಮಂಡಳಿಯ ಅಧಿಕಾರಿಗಳು ಅಯ್ಯೋ ಪಾಪ ಎಂದದ್ದೂ ಜಡೇಜಾಗೆ ಮಾತ್ರ. ಭಾರತದ ಬುಕ್ಕಿ ಜಾನ್ ಎಂಬುವನಿಂದ ಹಣ ಪಡೆದದ್ದನ್ನು ಒಪ್ಪಿಕೊಂಡ ನಂತರವೂ ಆಡುತ್ತಿರುವ ಆಸ್ಟ್ರೇಲಿಯಾದ ಶೇನ್ ವಾರ್ನ್ ಮತ್ತು ಮಾರ್ಕ್ ವಾ, ಇದೇ ರೀತಿ ಆರೋಪ ಎದುರಿಸುತ್ತಿರುವ ಪಾಕ್ನ ವಾಸಿಂ ಅಕ್ರಂ ಮತ್ತು ಮುಷ್ತಾಕ್ ಅಹ್ಮದ್ ಅವರನ್ನು ಉದಾಹರಣೆ ಕೊಡುವ ಮೂಲಕ ಜಡೇಜ ತಪ್ಪನ್ನು ಕ್ಷಮಿಸಬೇಕೆಂಬ ಮಾತುಗಳು ಸಭೆಯಲ್ಲಿ ಕೇಳಿಬಂದವು.
ಸಭೆಯ ನಂತರ ಮಾಧ್ಯಮಗೋಷ್ಠಿ ನಡೆಸಿದ ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ ಈ ಎಲ್ಲಾ ವಿವರಣೆಗಳನ್ನು ಕೊಟ್ಟರು.
(ಎಎಫ್ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications