ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಜ್ಜರಕಾಡು ಮೈದಾನದಲ್ಲಿ ರಾಷ್ಟ್ರೀಯ ವಾಲಿಬಾಲ್ ಪಂದ್ಯ
ಮಣಿಪಾಲ : ಉಡುಪಿ ಸಮೀಪದ ಅಜ್ಜರಕಾಡು ಮೈದಾನದಲ್ಲಿ ಏಳನೆಯ ರಾಷ್ಟ್ರೀಯ ವಾಲಿಬಾಲ್ ಯುವ ಜನ ಚಾಂಪಿಯನ್ ಶಿಪ್ ಪಂದ್ಯಾವಳಿ 2001ನೇ ಸಾಲಿನ ಮಾರ್ಚ್ನಲ್ಲಿ ನಡೆಯಲಿದೆ.
ಫೆಬ್ರವರಿ 27ರಿಂದ ಮಾರ್ಚ್ 4ರವರೆಗೆ ಪಂದ್ಯಾವಳಿ ನಡೆಯಲಿದ್ದು, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮತ್ತು ಪ್ರೀತಿ ಫ್ರೆಂಡ್ಸ್ ಜಂಟಿಯಾಗಿ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ನ ಲಾಂಛನದಡಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ಹೊನಲು ಬೆಳಕಿನಲ್ಲಿ ಪಂದ್ಯಾಟಗಳನ್ನು ಆಯೋಜಿಸಲಾಗಿದ್ದು, ಉಡುಪಿ ವಾಲಿಬಾಲ್ ಆಟಗಾರರಿಗೆ ದೊರೆತ ಅಪರೂಪದ ಅವಕಾಶ ಇದಾಗಿದೆ.
(ಇನ್ಫೋ ವಾರ್ತೆ)
Comments
Story first published: Thursday, November 30, 2000, 5:30 [IST]